Connect with us

Dvgsuddi Kannada | online news portal | Kannada news online

ದಾವಣಗೆರೆ: ಗಣೇಶ ಮೂರ್ತಿ ವಿಸರ್ಜನೆ ವೇಳೆ ರಾರಾಜಿಸಿದ ವೀರ ಸಾವರ್ಕರ್ ಫೋಟೋ

IMG 20220905 WA0006

ದಾವಣಗೆರೆ

ದಾವಣಗೆರೆ: ಗಣೇಶ ಮೂರ್ತಿ ವಿಸರ್ಜನೆ ವೇಳೆ ರಾರಾಜಿಸಿದ ವೀರ ಸಾವರ್ಕರ್ ಫೋಟೋ

ದಾವಣಗೆರೆ: ನಗರದ ದೇವರಾಜ್ ಅರಸ ಬಡಾವಣೆಯಲ್ಲಿ ಶ್ರೀ ಬನ್ನಿ ಮಹಾಂಕಾಳಮ್ಮ ಯುವಕರ ಸಂಘ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ವೇಳೆ ವೀರ ಸಾವರ್ಕರ್ ಭಾವಚಿತ್ರಗಳು ರಾರಾಜಿಸಿದವು. ಯುವಕರ ತಂಡವು ಕೇಸರಿ ಶಾಲು ಧರಿಸಿ ವೀರ ಸಾವರ್ಕರ್ ರ ಫೋಟೋಗಳನ್ನು ಹಿಡಿದು ಜೈಕಾರ ಹಾಕಿದ್ರು. ಈ ವೇಳೆ ಪ್ರತಿಯೊಬ್ಬರೂ ವೀರ ಸಾವರ್ಕರ್ ಫೋಟೋ ಮೇಲಕ್ಕೆ ಎತ್ತಿ ಹಿಡಿದು ಕೂಗಿದರು.

ಭಾರತ ಸ್ವಾತಂತ್ರ್ಯಕ್ಕಾಗಿ ಜೈಲು ಪಾಲು ಆಗಿದ್ದ ವೀರ ಸಾವರ್ಕರ್ ಬರೋಬ್ಬರಿ ಹತ್ತು ವರ್ಷಗಳಿಗೂ ಹೆಚ್ಚು ಸೆರೆವಾಸ ಅನುಭವಿಸಿದ ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರರೂ ಹೌದು. ಆದ್ರೆ ಅವರ ಹೆಸರಿಗೆ ಕಳಂಕ ತರುತ್ತಿರುವುದು ಸರಿಯಲ್ಲ. ಪ್ರತಿಯೊಬ್ಬರೂ ಸಾವರ್ಕರ್ ಅವರನ್ನು ಗೌರವಿಸುವಂತಾಗಬೇಕು. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಸಂಘದ ಯುವಕರು ತಿಳಿಸಿದರು. ಆ ಬಳಿಕ ಗಣೇಶ ಮೂರ್ತಿಯನ್ನು ಸಂಭ್ರಮದಿಂದ ವಿಸರ್ಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡರಾದ ಶಿವನಗೌಡ ಪಾಟೀಲ್, ಶ್ರೀಕಾಂತ್ ನಿಲಗೂಂದ,ಅಭಿಷೇಕ್ ಎಳೆಹೊಳೆ ಹೊನ್ನೇಶಣ್ಣ, ಪಂಚಾಕ್ಷರಿ, ‌ಚೇತನ್, ಸುರೇಶ, ಅದಿತ್ಯ, ರೋಹಿತ್ ,ಹರ್ಷ,ಕಿರಣ,ಆಶಿಕ್,ಪ್ರಸನ್ನ, ಮತ್ತಿತರರು ಹಾಜರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top