ದಾವಣಗೆರೆ: ಕಳ್ಳತನವಾಗಿದ್ದ ದೇವಸ್ಥಾನದ ಹೋರಿಯನ್ನು ಕೃತ್ಯ ನಡೆದ 24 ಗಂಟೆಗಳ ಒಳಗೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಭದ್ರಾ ಜಲಾಶಯ: ಒಳ ಹರಿವು ಭಾರೀ ಪ್ರಮಾಣದಲ್ಲಿ ಏರಿಕೆ; ರೈತರರಲ್ಲಿ ಹೊಸ ಭರವಸೆ- ಇಂದಿನ ನೀರಿನ ಮಟ್ಟ ಎಷ್ಟು..?
ದಿನಾಂಕ 30-06-2026ರಂದು ರಾತ್ರಿ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಬೊಲೆರೋ ಪಿಕಪ್ ವಾಹನದಲ್ಲಿ ಬಂದು ಚನ್ನಗಿರಿ ತಾಲ್ಲೂಕು ಸಂಗಾಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಕಮಿಟಿಗೆ ಸೇರಿದ ಗೂಳಿ/ಹೋರಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಸಂಬಂಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿಸಲು ಸಾಧ್ಯವಿಲ್ಲ; ರೈತರ ಸಹಕಾರ ಕೋರಿದ ಕರ್ನಾಟಕ ನೀರಾವರಿ ನಿಗಮ
ಮೇಲ್ಕಂಡ ಪ್ರಕರಣದ ಆರೋಪಿ ಪತ್ತೆ ಮಾಡಲು ಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿ ಬಿ.ಎಸ್. ಬಸವರಾಜ್ ಮಾರ್ಗದರ್ಶನದಲ್ಲಿ, ಸಿಪಿಐ ಎಂ.ಆರ್. ಚೌಬೆ ನೇತೃತ್ವದಲ್ಲಿ ಪಿಎಸ್ ಐ ಇಮ್ತಿಯಾಜ್ ಹಾಗೂ ಸಿಬ್ಬಂದಿರವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಈ ತಂಡವು ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿ ಪತ್ತೆ ಕಾರ್ಯ ಕೈಗೊಂಡಿದ್ದು, ಕೃತ್ಯ ನಡೆದು 24 ಗಂಟೆಯೊಳಗೆ ಸಂಗಾಹಳ್ಳಿ ಗ್ರಾಮಸ್ಥರ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದ ಶ್ರೀ ಬಸವೇಶ್ವರ ದೇವಸ್ಥಾನದ ಗೂಳಿ/ಹೋರಿಯನ್ನು ಪತ್ತೆ ಹಚ್ಚಿದ್ದಾರೆ.
ಕೃತ್ಯಕ್ಕೆ ಬಳಸಿದ ಒಂದು 06 ಲಕ್ಷ ಮೌಲ್ಯದ ಬುಲೇರೋ ಪಿಕ್ ಅಪ್ ವಾಹನವನ್ನು ಪತ್ತೆ ಮಾಡಲಾಗಿರುತ್ತದೆ. ಆರೋಪಿತರುಗಳ ಪತ್ತೆ ಕಾರ್ಯ ಮುಂದುವರೆದಿರುತ್ತದೆ. ಹೋರಿ ಪತ್ತೆ ಮಾಡಿದ ಮೇಲ್ಕಂಡ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಾದ ರವೀಂದ್ರ, ಅಣ್ಣೇಶ್, ಇಬ್ರಾಹಿಂ, ಚಾಲಕರಾದ ಇರ್ಷಾದ್ ಅವರನ್ನು ಎಸ್ಪಿ ಶೇಖರ್ ಹೆಚ್ ಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


