ದಾವಣಗೆರೆ: ನಗರದ ದೇವರಾಜ್ ಅರಸ ಬಡಾವಣೆಯಲ್ಲಿ ಶ್ರೀ ಬನ್ನಿ ಮಹಾಂಕಾಳಮ್ಮ ಯುವಕರ ಸಂಘ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ವೇಳೆ ವೀರ ಸಾವರ್ಕರ್ ಭಾವಚಿತ್ರಗಳು ರಾರಾಜಿಸಿದವು. ಯುವಕರ ತಂಡವು ಕೇಸರಿ ಶಾಲು ಧರಿಸಿ ವೀರ ಸಾವರ್ಕರ್ ರ ಫೋಟೋಗಳನ್ನು ಹಿಡಿದು ಜೈಕಾರ ಹಾಕಿದ್ರು. ಈ ವೇಳೆ ಪ್ರತಿಯೊಬ್ಬರೂ ವೀರ ಸಾವರ್ಕರ್ ಫೋಟೋ ಮೇಲಕ್ಕೆ ಎತ್ತಿ ಹಿಡಿದು ಕೂಗಿದರು.
ಭಾರತ ಸ್ವಾತಂತ್ರ್ಯಕ್ಕಾಗಿ ಜೈಲು ಪಾಲು ಆಗಿದ್ದ ವೀರ ಸಾವರ್ಕರ್ ಬರೋಬ್ಬರಿ ಹತ್ತು ವರ್ಷಗಳಿಗೂ ಹೆಚ್ಚು ಸೆರೆವಾಸ ಅನುಭವಿಸಿದ ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರರೂ ಹೌದು. ಆದ್ರೆ ಅವರ ಹೆಸರಿಗೆ ಕಳಂಕ ತರುತ್ತಿರುವುದು ಸರಿಯಲ್ಲ. ಪ್ರತಿಯೊಬ್ಬರೂ ಸಾವರ್ಕರ್ ಅವರನ್ನು ಗೌರವಿಸುವಂತಾಗಬೇಕು. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಸಂಘದ ಯುವಕರು ತಿಳಿಸಿದರು. ಆ ಬಳಿಕ ಗಣೇಶ ಮೂರ್ತಿಯನ್ನು ಸಂಭ್ರಮದಿಂದ ವಿಸರ್ಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡರಾದ ಶಿವನಗೌಡ ಪಾಟೀಲ್, ಶ್ರೀಕಾಂತ್ ನಿಲಗೂಂದ,ಅಭಿಷೇಕ್ ಎಳೆಹೊಳೆ ಹೊನ್ನೇಶಣ್ಣ, ಪಂಚಾಕ್ಷರಿ, ಚೇತನ್, ಸುರೇಶ, ಅದಿತ್ಯ, ರೋಹಿತ್ ,ಹರ್ಷ,ಕಿರಣ,ಆಶಿಕ್,ಪ್ರಸನ್ನ, ಮತ್ತಿತರರು ಹಾಜರಿದ್ದರು.



