Connect with us

Dvgsuddi Kannada | online news portal | Kannada news online

ನಾಯಕನಾಗಿ ಕೊಯ್ಲಿ ಸಾಧಿಸುವುದು ಬಹಳಷ್ಟಿದೆ: ಗೌತಮ್ ಗಂಭೀರ್

ಕ್ರೀಡೆ

ನಾಯಕನಾಗಿ ಕೊಯ್ಲಿ ಸಾಧಿಸುವುದು ಬಹಳಷ್ಟಿದೆ: ಗೌತಮ್ ಗಂಭೀರ್

 ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಾಯಕನಾಗಿ ಏನು ಸಾಧಿಸಿಲ್ಲ.  ಆತ ಸಾಧಿಸುವುದು ಇನ್ನೂ ಬಹಳಷ್ಟಿದೆ ಎಂದು ಭಾರತ ತಂಡದ ಮಾಜಿ ಆಟಗಾರ,  ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

15virat ton

ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾದ ಅವರು, ಕೇವಲ ವೈಯಕ್ತಿಕವಾಗಿ ಉತ್ತಮವಾಗಿ ಆಡುವುದರಿಂದ ಟೀಮ್ ಅನ್ನು ಗೆಲ್ಲಿಸಲು ಆಗುವುದಿಲ್ಲ. ನಾಯಕ ವೈಯಕ್ತಿಕ ಆಟದ ಜೊತೆಗೆ ತಂಡದ ಸದಸ್ಯರನ್ನು ಹುರಿದುಂಬಿಸಬೇಕು ಎಂದು ಕೊಹ್ಲಿಗೆ ಸಲಹೆ ನೀಡಿದ್ದಾರೆ.

ಕ್ರಿಕೆಟ್ ಒಂದು ಟೀಮ್  ಆಗಿ ಆಟುವ  ಕ್ರೀಡೆ.  ವೈಯಕ್ತಿಕವಾಗಿಯೂ ಸ್ಕೋರ್ ಮಾಡಬೇಕು ನಿಜ, ಅದರ  ಜೊತೆ ಜೊತೆಗೆ ತಂಡವನ್ನು ದೊಡ್ಡ ದೊಡ್ಡ ಟೂರ್ನಿಯಲ್ಲಿ ಗೆಲ್ಲಿಸಬೇಕು. ವೆಸ್ಟ್ ಇಂಡೀಸ್ ಬ್ರಿಯಾನ್ ಲಾರಾ, ಸೌತ್ ಆಫ್ರಿಕಾದ ಜಾಕ್ ಕಾಲಿಸ್ ಸಾಕಷ್ಟು ರನ್ ಹೊಡೆದರು. ಆದರೆ ಅವರು ಟ್ರೋಫಿ ಗೆಲ್ಲಲಿಲ್ಲ. ಹಾಗೆಯೇ ಕೊಹ್ಲಿ ಕೂಡ ನಾಯಕನಾಗಿ ಏನನ್ನೂ ಸಾಧಿಸಿಲ್ಲ.  ಕೊಯ್ಲಿ ಸಾಧನೆ ಮಾಡುವುದು ಇನ್ನೂ  ಸಾಕಷ್ಟಿದೆ ಎಂದು ಹೇಳಿದ್ದಾರೆ.

gambhir 2

ರನ್ ಹೊಳೆಯನ್ನೇ ಹರಿಸಿ, ಆದರೆ  ದೊಡ್ಡ ಟ್ರೋಫಿ ಗೆಲ್ಲದೇ ಇದ್ದರೆ, ನಿಮ್ಮ ಕ್ರೀಡಾ ಜೀವನ ಅಪೂರ್ಣ.  ಹೀಗಾಗಿ ಕೊಹ್ಲಿ ತಮ್ಮ ತಂಡವನ್ನು ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋಗಬೇಕು. ಎಲ್ಲ ಆಟಗಾರರಿಗೂ ಅವರದ್ದೇ ಆದ ಸ್ಕಿಲ್ ಇರುತ್ತದೆ. ನಾಯಕ ಅದನ್ನು ಹುರಿದುಂಬಿಸಬೇಕು ಎಂದು ಗೌತಮ್ ತಿಳಿಸಿದ್ದಾರೆ.

ಐಸಿಸಿ ಟೂರ್ನಿಗಳಲ್ಲಿ ಕೊಹ್ಲಿ ತಂಡವನ್ನು ಸರಿಯಾಗಿ ನಿರ್ವಹಣೆ ಮಾಡುವುದರಲ್ಲಿ ಎಡವಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಎಂಎಸ್ ಧೋನಿ ನಂತರ ಕೊಹ್ಲಿ 2017ರಲ್ಲಿ ಭಾರತದ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು 2019ರ ವಿಶ್ವಕಪ್ ನಲ್ಲಿ ತಂಡವನ್ನು ಮುನ್ನಡೆಸಿದರು. ಆದರೆ ತಂಡ ಟ್ರೋಫಿಯನ್ನು ಗೆಲ್ಲುವಲ್ಲಿ ವಿಫಲವಾಗಿತ್ತು.

gambhir 3

ಭಾರತದ ರನ್ ಮಷಿನ್ ಎಂದೇ ಖ್ಯಾತಿಯಾಗಿರುವ ಕೊಹ್ಲಿ ವೈಯಕ್ತಿಕವಾಗಿ ಉತ್ತಮವಾಗಿ ಆಡುತ್ತಿದ್ದಾರೆ. ಟಿ-20 ಮಾದರಿಯಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಜೊತೆಗೆ ಏಕದಿನ ಮಾದರಿಯಲ್ಲಿ ಈಗಾಗಲೇ ಒಟ್ಟು 11,867 ರನ್ ಸಿಡಿಸಿರುವ ಕೊಹ್ಲಿ, 205 ಪಂದ್ಯಗಳಲ್ಲೇ 10,000 ರನ್ ಪೂರೈಸಿ 2018ರಲ್ಲಿ ಅತೀ ಬೇಗ 10 ಸಾವಿರ ರನ್ ಗಳಿಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದರು. ಜೊತೆಗೆ ಟೆಸ್ಟ್ ಮಾದರಿಯಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಆದರೆ ನಾಯಕನಾಗಿ ಇಲ್ಲಿಯವರೆಗೂ ಒಂದು ಐಸಿಸಿ ಟ್ರೋಫಿಯನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ಸು ಕಂಡಿಲ್ಲ. ಇನ್ನು ಐಪಿಎಲ್ ನಲ್ಲಿ ಕೊಯ್ಲಿ ನಾಯಕತ್ವದಲ್ಲಿ ಆರ್ ಸಿಬಿ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ.

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಕ್ರೀಡೆ

To Top