Dvgsuddi Kannada | online news portal | Kannada news onlineDvgsuddi Kannada | online news portal | Kannada news online
  • Home
  • ಪ್ರಮುಖ ಸುದ್ದಿ
    • ರಾಷ್ಟ್ರ ಸುದ್ದಿ
    • ರಾಜ್ಯ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More
    • ಚನ್ನಗಿರಿ
    • ಹರಿಹರ
    • ದಾವಣಗೆರೆ
Font ResizerAa
Font ResizerAa
Dvgsuddi Kannada | online news portal | Kannada news onlineDvgsuddi Kannada | online news portal | Kannada news online
  • Home
  • ಪ್ರಮುಖ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More

Search

Menu

  • Home
  • ಪ್ರಮುಖ ಸುದ್ದಿ
    • ರಾಷ್ಟ್ರ ಸುದ್ದಿ
    • ರಾಜ್ಯ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More
    • ಚನ್ನಗಿರಿ
    • ಹರಿಹರ
    • ದಾವಣಗೆರೆ
Subscribe

More from BuzzVibe

  • Blog
  • Contact
  • Contact Us
  • Customize Interests
  • Kannada News
  • My Bookmarks
  • Privacy Policy

Latest Stories

davangere cdc
ದಾವಣಗೆರೆ: ಭಾರತ್‌ ಜೋಡೋ ಯುವ ಸಂಘಗಳ ನೋಂದಣಿ; ಒಂದೇ ತಿಂಗಳಲ್ಲಿ ಶೇ.100 ಗುರಿ ಸಾಧಿಸಲು ಜಿಲ್ಲಾಧಿಕಾರಿ ಸೂಚನೆ
dc sp
ದಾವಣಗೆರೆ: ಸಿಎಸ್‍ಆರ್ ಅಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಕೈಜೋಡಿಸಿ; ಜಿಲ್ಲಾಧಿಕಾರಿ
arecanut rate today
ದಾವಣಗೆರೆ: 54 ಸಾವಿರದತ್ತ ಅಡಿಕೆ ದರ; ರೈತರಲ್ಲಿ ಸಂತಸ
bhadra dam dvgsuddi
ಭದ್ರಾ ಜಲಾಶಯ: ಒಳ ಹರಿವು 6,331ಕ್ಯೂಸೆಕ್ ;ಇಂದಿನ ನೀರಿನ ಮಟ್ಟ 150.4 ಅಡಿ
davangere crime news
ದಾವಣಗೆರೆ: ಜಪ್ತಿ ಮಾಡಿದ 3.91 ಕೋಟಿ ಮೌಲ್ಯದ ಸ್ವತ್ತು ವಾರಸುದಾರರಿಗೆ ಹಸ್ತಾಂತರಿಸಿದ ಜಿಲ್ಲಾ ಪೊಲೀಸ್

Socials

ದಾವಣಗೆರೆ

22 ಕೆಜಿ ತೂಕದ ಏಲಕ್ಕಿ ಬಾಳೆ ಬೆಳೆದ ಆವರಗೆರೆಯ ಪ್ರಗತಿಪರ ರೈತ ಮಲ್ಲಿಕಾರ್ಜುನ

Dvgsuddi
By
Dvgsuddi
ByDvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
Follow:
Last updated: November 23, 2019
Share
2 Min Read
SHARE

ಡಿವಿಜಿ ಸುದ್ದಿ, ದಾವಣಗೆರೆ: ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ  ಆವರಗೆರೆಯ ಮಲ್ಲಿಕಾರ್ಜುನ ಎಸ್. ಗುಡಿಹಿಂದಲ ಎನ್ನುವ ರೈತ  ಸಾವಯವ ಮತ್ತು ರಸಾಯನಿಕ ಪದ್ಧತಿಯಲ್ಲಿ 22 ಕೆ.ಜಿಯ ಅಂಗಾಂಶ ಏಲಕ್ಕಿ ಬಾಳೆ ಬೆಳೆದು ಪ್ರಗತಿಪರ ರೈತರಾಗಿದ್ದಾರೆ.

ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ತಾಲ್ಲೂಕು ಆವರಗೆರೆ ಗ್ರಾಮದಲ್ಲಿ ಬಾಳೆ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ 22 ಕೆ.ಜಿ ತೂಕದ ಏಲಕ್ಕಿ ಬಾಳೆ ಪ್ರದರ್ಶಿಸಿದರು.

ಕೃಷಿ ಇಲಾಖೆಯ ಉಪಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಆರ್. ಮಾತನಾಡಿ, ಬದಲಾದ ಹವಮಾನ ವೈಪರೀತ್ಯದಲ್ಲಿ ನಾವು ಮಾಡುವ ಕೃಷಿ ತಂತ್ರಜ್ಞಾನಗಳ ಅಳವಡಿಕೆಯೂ ಸಹ ಬದಲಾಗಬೇಕೆಂಬುದಕ್ಕೆ ಈ ಕ್ಷೇತ್ರೋತ್ಸವವೇ ಸಾಕ್ಷಿ ಎಂದರು.

ಪ್ರಸ್ತುತ ದಿನಮಾನದಲ್ಲಿ ಬಾಳೆ ಬೆಳೆಯಲ್ಲಿ ಬರೀ ಕಂದುಗಳ ಬಳಕೆ, ಅವೈಜ್ಞಾನಿಕ ಪೋಷಕಾಂಶಗಳ ನಿರ್ವಹಣೆಯನ್ನು ಆಗೊಮ್ಮೆ ಇಗೊಮ್ಮೆ ಸಿಂಪರಣೆ ಮಾಡುವುದನ್ನು ನೋಡಿದ್ದೇವೆ. ಆದರೆ  ಮಲ್ಲಿಕಾರ್ಜುನ ಎಸ್. ಗುಡಿಹಿಂದಲ ಅವರು, ಅಂಗಾಂಶ  ಏಲಕ್ಕಿ ಬಾಳೆ ನಾಟಿ ಮಾಡಿ, ಸಮಯಕ್ಕೆ ಸರಿಯಾಗಿ ಸಾವಯವ ಮತ್ತು ರಸಾಯನಿಕ ಪೋಷಕಾಂಶ ನೀಡಿದ್ದಾರೆ ಇದಲ್ಲದೆ,  ರಸಾವರಿ, ಗೊನೆಗಳಿಗೆ ಪೋಷಕಾಂಶ ಸಿಂಪರಣೆ ಮಾಡಿ ಕೃಷಿ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ 22 ಕೆ.ಜಿ. ಏಲಕ್ಕಿ ಬಾಳೆ ಬೆಳೆದು ಪ್ರಗತಿಪರ ರೈತರೆನಿಸಿದ್ದಾರೆ ಎಂದು ತಿಳಿಸಿದರು.

Related News

davangere cdc
ದಾವಣಗೆರೆ: ಭಾರತ್‌ ಜೋಡೋ ಯುವ ಸಂಘಗಳ ನೋಂದಣಿ; ಒಂದೇ ತಿಂಗಳಲ್ಲಿ ಶೇ.100 ಗುರಿ ಸಾಧಿಸಲು ಜಿಲ್ಲಾಧಿಕಾರಿ ಸೂಚನೆ
July 22, 2026
dc sp
ದಾವಣಗೆರೆ: ಸಿಎಸ್‍ಆರ್ ಅಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಕೈಜೋಡಿಸಿ; ಜಿಲ್ಲಾಧಿಕಾರಿ
July 22, 2026
arecanut rate today
ದಾವಣಗೆರೆ: 54 ಸಾವಿರದತ್ತ ಅಡಿಕೆ ದರ; ರೈತರಲ್ಲಿ ಸಂತಸ
July 22, 2026

bale 2 dvgsuddi

ಕ್ಷೇತ್ರೋತ್ಸವದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ  ಮಲ್ಲಿಕಾರ್ಜುನ ಎಸ್. ಜಿ,  ಹಿಂದೆ ಗದ್ದೆ ಮಾಡುತ್ತಿದ್ದ ಜಮೀನಿನಲ್ಲಿ ಬಾಳೆ ಮತ್ತು ಅಡಿಕೆ ಬೆಳೆಯುವುದು ಸವಾಲಿನ ಕೆಲಸವಾಗಿತ್ತು.  ಆದರೆ ವೈಜ್ಞಾನಿಕ ಸಲಹೆಯಿಂದ ಕೃಷಿ ಮಾಡಿದರೆ ಬರಡು ಭೂಮಿಯಲ್ಲೂ ಬಂಗಾರದ ಬೆಳೆಯನ್ನು ಬೆಳೆಯಬಹುದೆಂಬುದಕ್ಕೆ ಈ ಕ್ಷೇತ್ರವೇ ಸಾಕ್ಷಿ. ಕೆವಿಕೆ  ಕೃಷಿ ತಜ್ಞರಾದ  ಬಸವನಗೌಡ ಎಂ.ಜಿ.,  ಹೆಚ್. ಎಂ. ಸಣ್ಣಗೌಡ್ರು ರವರ ಮಾರ್ಗದರ್ಶನ ಅನುಕೂಲವಾಯಿತು. ಈಗ ಬಾಳೆ ಬೆಲೆ ಇಳಿಮುಖವಾಗಿದ್ದು, ಕನಿಷ್ಟ ದರ 20 ರೂಪಾಯಿ ರೂ ಸಿಕ್ಕರೂ ನನಗೆ 2.5 ಲಕ್ಷ ನಿವ್ವಳ ಲಾಭ ದೊರೆಯಲಿದೆ ಎಂದು ತಿಳಿಸಿದರು.

Related News

bhadra dam dvgsuddi
ಭದ್ರಾ ಜಲಾಶಯ: ಒಳ ಹರಿವು 6,331ಕ್ಯೂಸೆಕ್ ;ಇಂದಿನ ನೀರಿನ ಮಟ್ಟ 150.4 ಅಡಿ
July 22, 2026
davangere crime news
ದಾವಣಗೆರೆ: ಜಪ್ತಿ ಮಾಡಿದ 3.91 ಕೋಟಿ ಮೌಲ್ಯದ ಸ್ವತ್ತು ವಾರಸುದಾರರಿಗೆ ಹಸ್ತಾಂತರಿಸಿದ ಜಿಲ್ಲಾ ಪೊಲೀಸ್
July 21, 2026
accident 4
ದಾವಣಗೆರೆ: ಚಾಲಕನ ನಿಯಂತ್ರಣ ಕಳೆದುಕೊಂಡ‌ ಕಾರು; ರಸ್ತೆ ಬದಿ ನಿಂತಿದ್ದ 6 ವಿದ್ಯಾರ್ಥಿಗಳಿಗೆ ಡಿಕ್ಕಿ
July 21, 2026

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶಶಿಕಲಾ ಮಾತನಾಡಿ, ಇಲಾಖೆಯಲ್ಲಿ ಹನಿ ನೀರಾವರಿ, ಸಮಗ್ರ ತೋಟಗಾರಿಕೆ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ತೆಂಗು ಅಭಿವೃದ್ಧಿ ಮಂಡಳಿ ಯೋಜನೆ, ಉದ್ಯೋಗ ಖಾತ್ರಿ ಯೋಜನೆಗಳ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ದೇವರಾಜ ಟಿ.ಎನ್. ಮಾತನಾಡಿ, ಕೃಷಿ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ರೈತರಿಗೆ ನಂಬಿಕೆಯಿರಬೇಕು. ಈಗ ಒಂದು ಎಕರೆಯಲ್ಲಿ ಹತ್ತು ಎಕರೆಯಲ್ಲಿ ಬೆಳೆಯುವ ಇಳುವರಿ ಪಡೆಯಲು ಸಾಧ್ಯ.  ಆದರೆ ವಿಜ್ಞಾನಿಗಳ ಸಲಹೆ, ಸೂಚನೆ ಅಗತ್ಯ ಎಂದರು.

ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ಅವರು, ನೆರದ್ದಿದ ರೈತರಿಗೆ ಪ್ರಾಯೋಗಿಕವಾಗಿ ಬಾಳೆ ಬೆಳೆಯಲ್ಲಿ ಅನುಸರಿಸಬೇಕಾದ ಕ್ರಮಗಳಾದ ಕಂದುಗಳ ಆಯ್ಕೆ, ರಸಾವರಿ ಗೊಬ್ಬರಗಳ ನಿರ್ವಹಣೆ, ರೋಗ ಮತ್ತು ಕೀಟಗಳ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಕಾಡಜ್ಜಿ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರ  ಮಾಲತೇಶ್, ನಿವೃತ್ತ ಕೃಷಿ ಅಧಿಕಾರಿ  ಅಜಗಣ್ಣನವರ್,  ರುದ್ರಪ್ಪ ಬಿ.ಜಿ., ೪೦ ದೇಸಿ ವಿದ್ಯಾರ್ಥಿಗಳು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

Related News

bhadra dam dvgsuddi
ಭದ್ರಾ ಜಲಾಶಯ: ಚೇತರಿಕೆ ‌ಕಂಡ ಮುಂಗಾರು ಮಳೆ; ಒಳಹರಿವು ಹೆಚ್ಚಳ; ಇಂದಿನ ನೀರಿನ ಮಟ್ಟ 149.1 ಅಡಿ
July 20, 2026
ration raice
ದಾವಣಗೆರೆ: ಅಕ್ರಮವಾಗಿ ಸಾಗಿಸುತ್ತಿದ್ದ 115 ಕ್ವಿಂಟಲ್ ಪಡಿತರ ಅಕ್ಕಿ , ರಾಗಿ ವಶ
July 18, 2026
gm siddeshvwara 5
ದಾವಣಗೆರೆ: ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ; ಜಿಲ್ಲಾ ಘಟಕ ಪುನರ್‌ ರಚನೆ ವಿರುದ್ಧ ಮಾಜಿ‌ ಸಂಸದ ಆಕ್ರೋಶ
July 17, 2026
TAGGED:# Davangere#newsagriculturebananacrop kvkfeaturedಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರಕೃಷಿ ತಂತ್ರಜ್ಞರ ಸಂಸ್ಥೆಕೃಷಿ ಮತ್ತು ತೋಟಗಾರಿಕೆ ಇಲಾಖೆಮಲ್ಲಿಕಾರ್ಜುನ ಎಸ್. ಗುಡಿಹಿಂದಲ
Share This Article
Facebook Bluesky Copy Link Print
ByDvgsuddi
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Previous Article ಬಿಜೆಪಿಯದ್ದು ಸ್ವಾರ್ಥ ರಾಜಕಾರಣ, ಛತ್ರಪತಿ ಶಿವಾಜಿ ಭಾವನೆಗೆ ದಕ್ಕೆ: ಉದ್ಧವ್ ಠಾಕ್ರೆ
Next Article ಹಿಂದೂ, ಮುಸ್ಲಿಂ ಸಾಮರಸ್ಯಕ್ಕೆ ರಾಜಕೀಯ ಅಡ್ಡಗೋಡೆ:ಸಾಣೇಹಳ್ಳಿ ಶ್ರೀ
Leave a Comment

Leave a Reply Cancel reply

Your email address will not be published. Required fields are marked *

Dvgsuddi Kannada | online news portal | Kannada news online

DvgSuddi

  • Home
  • ಪ್ರಮುಖ ಸುದ್ದಿ
    • ರಾಷ್ಟ್ರ ಸುದ್ದಿ
    • ರಾಜ್ಯ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More
    • ಚನ್ನಗಿರಿ
    • ಹರಿಹರ
    • ದಾವಣಗೆರೆ

Subscribe Newsletter

Subscribe to our newsletter to get our newest articles instantly!