Connect with us

Dvgsuddi Kannada | online news portal | Kannada news online

ಬಿಜೆಪಿಯದ್ದು ಸ್ವಾರ್ಥ ರಾಜಕಾರಣ, ಛತ್ರಪತಿ ಶಿವಾಜಿ ಭಾವನೆಗೆ ದಕ್ಕೆ: ಉದ್ಧವ್ ಠಾಕ್ರೆ

ರಾಷ್ಟ್ರ ಸುದ್ದಿ

ಬಿಜೆಪಿಯದ್ದು ಸ್ವಾರ್ಥ ರಾಜಕಾರಣ, ಛತ್ರಪತಿ ಶಿವಾಜಿ ಭಾವನೆಗೆ ದಕ್ಕೆ: ಉದ್ಧವ್ ಠಾಕ್ರೆ

ಡಿವಿಜಿ ಸುದ್ದಿ, ಮುಂಬೈ: ರಾತ್ರಿ ಕಳೆದು ಬೆಳಗಾಗುವುದರೊಳಗೆ ಸರ್ಕಾರ ರಚನೆ ಮಾಡಿದ ಬಿಜೆಪಿ ಮತ್ತು ಅಜಿತ್ ಪವಾರ್ ಬಣದ ವಿರುದ್ಧ ಕಿಡಿಕಾರಿದ  ಉದ್ಧವ್ ಠಾಕ್ರೆ.  ಇದು  ಛತ್ರಪತಿ ಶಿವಾಜಿ ಭಾವನೆಗೆ ದಕ್ಕೆ ತರುವಂತಾಗಿದ್ದು, ಬಿಜೆಪಿ ಸ್ವಾರ್ಥ ರಾಜಕಾಣ ಮಾಡುತ್ತಿದೆ ಆಕ್ರೋಶ ವ್ಯಕ್ತಪಡಿಸಿದರು.

ಬೆಳ್ಳಂಬೆಳಗ್ಗೆ ರಾಜಭವನದ ಕಚೇರಿಯಲ್ಲಿ ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಮತ್ತು ಡಿಸಿಎಂ ಆಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದರ.  ಬಿಜೆಪಿ ಸರ್ಕಾರ ರಚನೆ ಮಾಡಿದ್ದರ ವಿರುದ್ಧ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಜಂಟಿಯಾಗಿ ಸುದ್ದಿಘೋಷ್ಠಿ ಕರೆಯಲಾಗಿತ್ತು. ನಾವು ಏನೇ ಮಾಡಿದರು ಬಹಿರಂಗವಾಗಿ ಮಾಡುತ್ತೇವೆಯೇ ಹೊರತು ಕದ್ದುಮುಚ್ಚಿ ಮಾಡಲ್ಲ ಎಂದು ಕಿಡಿಕಾರಿದರು.

ನಾವು ಜನಾದೇಶವನ್ನು ಗೌರವಿಸುತ್ತೇವೆ.  ಏನೇ ಮಾಡಿದರೂ ಬಹಿರಂಗವಾಗಿ ಎಲ್ಲರ ಸಮ್ಮುಖದಲ್ಲಿ ಮಾಡುತ್ತೇವೆ. ರಾಜ್ಯದಲ್ಲಿ ಜಾರಿಯಾಗಿದ್ದ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲು ಬೆಳಗಿನ ಜಾವ ಕೇಂದ್ರದ ಸಂಪುಟ ಸಭೆ ಕರೆಯಲಾಗಿತ್ತು ಎಂಬುದರ ಮಾಹಿತಿ ಇದೆ.  ಇದೊಂದು ಸಂವಿಧಾನ ಬಾಹಿರ ನಡೆ ಎಂದ್ರು.   ರಾಜ್ಯ ಜನತೆ ಎಲ್ಲ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.  ಬಿಜೆಪಿ ನಮ್ಮ ಮೇಲೆ ಹಲವು ಆರೋಪಗಳನ್ನು ಮಾಡುತ್ತಿದೆ. ಬಿಜೆಪಿ ಒಡೆಯುವ ಕೆಲಸ ಮಾಡುತ್ತದೆ. ನಾವು ಜೋಡಿಸುವ ಕೆಲಸ ಮಾಡಿದ್ದೇವೆ. ಈ ಮೈತ್ರಿಗೆ  ನೈತಿಕ ಮೌಲ್ಯಗಳಿಲ್ಲ. ಇದು ಛತ್ರಪತಿ ಶಿವಾಜಿ ಮಹಾರಾಜರ ಭಾವನೆಗೆ ದಕ್ಕೆ ತರುವಂತಾಗಿದೆ ಎಂದರು.

ಬಹುಮತ ಹೇಗೆ ಸಾಬೀತು ಮಾಡ್ತಾರೋ ನೋಡ್ತೀವಿ

ಎನ್ ಸಿಪಿಯ ಶರದ್ ಪವಾರ್ ಮಾತನಾಡಿ, ಪ್ರಮಾಣವಚನ ಕಾರ್ಯಕ್ರಮದಲ್ಲಿ ಹಾಜರಿದ್ದ 11 ಎನ್‍ಸಿಪಿ ಶಾಸಕರ ಪೈಕಿ ಮೂವರು ನಮ್ಮೊಂದಿಗೆ ಸುದ್ದಿಗೋಷ್ಠಿಯಲ್ಲಿದ್ದಾರೆ. ಸರ್ಕಾರ ರಚನೆ ಮಾಡಿದವರು ಬಹುಮತ ಹೇಗೆ ಸಾಬೀತು ಮಾಡ್ತಾರೆ ಎಂಬುವುದು ಗೊತ್ತಿಲ್ಲ. ನಮ್ಮ ಬಳಿ ಈಗಲೂ ಬಹುಮತವಿದ್ದು, ಸರ್ಕಾರ ರಚನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top
(adsbygoogle = window.adsbygoogle || []).push({});