ದಾವಣಗೆರೆ: ಲಾರಿಯಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪಡಿತರ ಅಕ್ಕಿ ಹಾಗೂ ರಾಗಿಯನ್ನು ವಿದ್ಯಾನಗರ ಠಾಣೆಯ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಹರಿಹರದ ಶೇಖ್ ಜಬೀವುಲ್ಲಾ (46) ಬಂಧಿತ ಆರೋಪಿಯಾಗಿದ್ದು, 107 ಕ್ವಿಂಟಲ್ ಅಕ್ಕಿ ಹಾಗೂ 8 ಕ್ವಿಂಟಲ್ ರಾಗಿಯನ್ನು ಜಪ್ತಿ ಮಾಡಲಾಗಿದೆ. ಪಡಿತರ ಅಕ್ರಮ ಸಾಗಣೆಯ ಖಚಿತ ಮಾಹಿತಿಯ ಮೇರೆಗೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿ ಮೇಲೆ ದಾಳಿ ಮಾಡಲಾಗಿದೆ. ಆರೋಪಿಯು ಲಾರಿಯಲ್ಲಿದ್ದ ಪಡಿತರ ಅಕ್ಕಿಯ ಬಗ್ಗೆ ಮಾಹಿತಿ ನೀಡಲು ವಿಫಲವಾಗಿದ್ದು, ವಿಚಾರಣೆ ನಂತರ ಅಕ್ರಮದ ಜಾಲ ಪತ್ತೆಯಾಗಿದೆ.


