ಡಿವಿಜಿಸುದ್ದಿ.ಕಾಂ, ದಾವಣಗೆರೆ: ಧರ್ಮ ಧರ್ಮಕ್ಕೆ ಬೆಂಕಿ ಇಟ್ಟು, ಜಾತಿಗಳನ್ನು ಎತ್ತಿಕಟ್ಟುವವರನ್ನು ದೂರವಿಡಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿನಿನ್ನೆ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿದ ಅವರು, ಜಾತಿ ವಿಚಾರ ಎತ್ತಿಕಟ್ಟಿದರೆ ಆ ಜಾತಿಯವರೆಲ್ಲ ವೋಟ್ ಕೊಡುತ್ತಾರೆ ಅನ್ನೋ ಭ್ರಮೆಯಲ್ಲಿದ್ದರು. ಈ ರೀತಿ ಜಾತಿ ಒಡೆಯಲು ಪ್ರಯತ್ನಿಸಿದವರು ಕಳೆದ ಚುನಾವಣೆಯಲ್ಲಿ ನೆಗೆದು ಬಿದ್ದಿದ್ದಾರೆ ಎಂದ್ರು.
ಅವರಿಗೆಲ್ಲ ಈಗ ತಪ್ಪಿನ ಅರಿವಾಗಿದೆ. ಇನ್ನೊಂದು ಜಾತಿ ಎತ್ತಿಕಟ್ಟುವವರು ಮನುಷ್ಯರಲ್ಲ . ಇಲ್ಲಿ ಜಾತಿ ಮುಖ್ಯವಲ್ಲ. ನಾನು ಕುರುಬ ಅಲ್ಲ. ನಾನು ಹಿಂದೂ. ಸಾಧು ಸಂತರೇ ನಮ್ಮ ನಿಜವಾದ ದೇವರು. ಜಗದ್ಗುರುಗಳು ಹೇಳಿದ್ರು ಬೇರೆ ಮಾಡಬೇಡಿ ಎಂದು ಆದ್ರು ಕೇಳಲಿಲ್ಲ ಎಂದು ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ
ಇಂದಿನ ಸರ್ಕಾರ ಅಡ್ಡಪಲ್ಲಕ್ಕಿ ಉತ್ಸವಕ್ಕೆ ವಿರೋಧ ವ್ಯಕ್ತಪಡಿಸಿದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ, ನಿನಗೆ ಇಷ್ಟ ಇಲ್ಲಾ ಅಂದ್ರೆ ಬೆತ್ತಲೆ ಹೋಗಪ್ಪ ನಮ್ಮ ಆಚಾರ ನಮ್ಮ ಇಷ್ಟ. ಅಡ್ಡಪಲ್ಲಕ್ಕಿ ಪರ್ಮಿಷನ್ ಕೊಡಲಿಲ್ಲ ಎಂದು ಸ್ವಾಮೀಜಿಯವರು ಸಿ.ಎಂ ಮನೆ ಮುಂದೆ ಧರಣಿ ನಡೆಸಿದ ಮೇಲೆ ಪರ್ಮಿಷನ್ ಕೊಟ್ಟರು ಎಂದು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.



