Connect with us

Dvgsuddi Kannada | online news portal | Kannada news online

ಅಶೋಕ್ ಗಸ್ತಿ ಧರ್ಮಪತ್ನಿಗೆ ರಾಜಸಭಾ ಟಿಕೆಟ್ ನೀಡುವಂತೆ ಸವಿತಾ ಸಮಾಜ ಆಗ್ರಹ

ದಾವಣಗೆರೆ

ಅಶೋಕ್ ಗಸ್ತಿ ಧರ್ಮಪತ್ನಿಗೆ ರಾಜಸಭಾ ಟಿಕೆಟ್ ನೀಡುವಂತೆ ಸವಿತಾ ಸಮಾಜ ಆಗ್ರಹ

ಡಿವಿಜಿ ಸುದ್ದಿ, ದಾವಣಗೆರೆ: ಇತ್ತೀಚೆಗೆ ಕೊರೊನಾದಿಂದ ನಿಧನರಾದ ರಾಜಸಭಾ ಸದಸ್ಯ ಅಶೋಕ್ ಗಸ್ತಿ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಧರ್ಮಪತ್ನಿ  ಸುಮಾಗಸ್ತಿಗೆ ಅವಕಾಶ ನೀಡುವಂತೆ  ದಾವಣಗೆರೆ ಸವಿತಾ ಸಮಾಜ ಸಂಘದ ಅಧ್ಯಕ್ಷ, ವಕೀಲ ಎನ್.ರಂಗಸ್ವಾಮಿ ಬಿಜೆಪಿ ಮುಖಂಡರನ್ನು ಆಗ್ರಹಿಸಿದ್ದಾರೆ.

ದಿವಂಗತ ಆಶೋಕ್ ಗಸ್ತಿ ಅವರು  ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಪಕ್ಷದ ಎಲ್ಲಾ ಜವಾಬ್ದಾರಿಗಳನ್ನು ನಿಷ್ಟೆಯಿಂದ ಸುಮಾರು 30 ವರ್ಷಗಳಿಂದ ನಿರ್ವಹಿಸಿಕೊಂಡು ಬಂದಿದ್ದರು. ಅವರ ಕಾರ್ಯವೈಖರಿ, ಸಂಘಟನೆ, ಸಂಘಟಿತ ಹೋರಾಟ ನೋಡಿ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿದ ಕೀರ್ತಿ ಬಿಜೆಪಿ, ಸಂಘ ಪರಿವಾರಕ್ಕೆ ಸಲ್ಲುತ್ತದೆ.

ಆಶೋಕ್ ಗಸ್ತಿರವರು ರಾಜ್ಯಸಭಾ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದ ಎರಡೇ ತಿಂಗಳಿನಲ್ಲಿ ಮಹಾಮಾರಿ ಕೊರೊನಾ ರೋಗಕ್ಕೆ ತುತ್ತಾಗಿ ಸೆಪ್ಟೆಂಬರ್17ರಂದು ಮೃತಪಟ್ಟಿದ್ದಾರೆ. ಭಾರತೀಯ ಜನತಾ ಪಕ್ಷವು ರಾಜ್ಯಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದರೂ ಸಹ ಭಗವಂತ ಅವಕಾಶ ನೀಡಲಿಲ್ಲ. ಹೀಗಾಗಿ ಅವರ ಧರ್ಮಪತ್ನಿ ಸುಮಾಗಸ್ತಿ ಅವರಿಗೆ ರಾಜ್ಯಸಭಾ ಸದಸ್ಯತ್ವ ನೀಡಬೇಕೆಂದರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸಿ.ರಾಮಾಂಜನೇಯ ಮತ್ತು ವಿ.ಎಸ್. ಕೇಶವಮೂರ್ತಿ  ಪ್ರಧಾನಕಾರ್ಯದರ್ಶಿ ಎಂ.ಸೋಮಶೇಖರಪ್ಪ, ಕಾರ್ಯದರ್ಶಿ ಜಿ.ಎಸ್.ಪರಶುರಾಮ್, ಸಹ ಕಾರ್ಯದರ್ಶಿ ಆರ್.ಚಂದ್ರಶೇಖರ್, ಖಜಾಂಚಿ ಆರ್.ಕರಿಬಸಪ್ಪ, ಸದಸ್ಯರಾದ ಕೆ.ವಿ.ರಾಘವೇಂದ್ರ, ಪಿ.ಕೆ.ಮಹೇಶಪ್ಪ, ಎಸ್.ಬಾಲರಾಜ್,ಎಮ್.ರಾಜು,ಎನ್.ಎಸ್.ಉಮೇಶ್, ಜೆ.ವೆಂಕಟೇಶ್, ಎಸ್.ವೆಂಕಟೇಶ್,ಎನ್ ಜಂಬುನಾಥ್, ಸಿ.ರಾಘವೇಂದ್ರ, ಎನ್.ಗೋಪಿ,ಎನ್.ರಾಮಚಂದ್ರಪ್ಪ, ವಿ.ಹೆಚ್.ರಾಘವೇಂದ್ರ, ಎನ್.ಆಂಜನೇಯ, ಎನ್.ನಾಗರಾಜ್ ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top