Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿ.ಪಂ ಮಾಜಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಜಾತಿ ಪ್ರಮಾಣ ಪತ್ರ ಪರಿಶೀಲಿಸುವಂತೆ ಆಗ್ರಹ

ದಾವಣಗೆರೆ

ದಾವಣಗೆರೆ: ಜಿ.ಪಂ ಮಾಜಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಜಾತಿ ಪ್ರಮಾಣ ಪತ್ರ ಪರಿಶೀಲಿಸುವಂತೆ ಆಗ್ರಹ

ದಾವಣಗೆರೆ: ಬೇಡ ಜಂಗಮ ಪ್ರಮಾಣ ಪತ್ರ ಪಡೆದು ಮಾಯಕೊಂಡ ವಿಧಾನಸಭೆ ಮೀಸಲು ಕ್ಷೇತ್ರಕ್ಕೆ ಪ್ರವೇಶ ಮಾಡುತ್ತಿರುವ ಬಿ.ಎಂ. ವಾಗೀಶ್ ಸ್ವಾಮಿ ಅವರು ಜಾತಿ ಹಾಗೂ ಜಾತಿ ಪ್ರಮಾಣ ಪತ್ರವನ್ನು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪರಿಶೀಲಿಸುವಂತೆ ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಸಂಚಾಲಕ ಚಿನ್ನಸಮುದ್ರ ಶೇಖರ್ ನಾಯ್ಕ ಆಗ್ರಹಿಸಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್  ಮಾಜಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಜಿ. ಪಂ ಚುನಾವಣೆಯಲ್ಲಿ ಜಂಗಮ ಎಂದು  ನಮೂದಿಸಿ ಗೆ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಆದರೆ ಪರಿಶಿಷ್ಟ ಜಾತಿಗೆ ಮೀಸಲಿರುವ ಮಾಯಕೊಂಡ ಕ್ಷೇತ್ರದ ಆಕಾಂಕ್ಷಿ  ಎಂದು ಹೇಳಿಕೊಂಡು ಕ್ಯಾಲೆಂಡರ್, ಡೈರಿ, ಬ್ಯಾನರ್ ಗಳು ಮೂಲಕ ಕ್ಷೇತ್ರದಲ್ಲಿ  ಪ್ರಚಾರಗೊಳ್ಳುತ್ತಿದ್ದಾರೆ. 2015 ರಿಂದ ಜಿಲ್ಲೆಯಲ್ಲಿ ಯಾವುದೇ ತಾಲ್ಲೂಕಿನ ತಹಶೀಲ್ದಾರರು ನೀಡಿಲ್ಲ ಎಂದು ಮಾಹಿತಿ ಹಕ್ಕಿನಡಿ  ತಿಳಿದು ಬಂದಿದೆ.

ಹೆಗ್ಗೆರೆ ರಂಗಪ್ಪ ಮಾತನಾಡಿ,  ಜಿಲ್ಲಾಧಿಕಾರಿಗಳು ಕೂಡ ಜಿಲ್ಲೆಯಲ್ಲಿ ಯಾರಿಗೂ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಿಲ್ಲ ಎಂದು ಹೇಳಿದ್ದಾರೆ. ವಾಗೀಶ್ ಅವರು ಎಸ್ಸಿ ಆಗಿದ್ದರೆ ಅಭ್ಯಂತರವಿಲ್ಲ. ಆದರೆ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಅಕ್ರಮವಾಗಿ ನಮ್ಮಗಳ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದರು.

ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಅವರು ಎಲ್ಲಿಂದ ಪ್ರಮಾಣಪತ್ರ ಪಡೆದಿದ್ದಾರೆ  ಎಂದು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪರಿಶೀಲಿಸಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪಾಮೇನಹಳ್ಳಿ ಸಿದ್ದೇಶ್, ಎಸ್.ಜಿ. ಸೋಮಶೇಖರ್, ಅಂಜಿನಪ್ಪ ಕಡತಿ, ಕೆ.ಎಂ. ಅಂಜಿನಪ್ಪ, ಹನುಮೇಶ್ ಮಲ್ಲಶೆಟ್ಟಿ ಹಳ್ಳಿ, ಬಿ. ಚೌಡೇಶ್ ಶಿಲ್ಪಿ, ಎಂ. ರವಿ, ಪರಮೇಶ್ ಪ್ಪ ಆಲೂರು, ಹೆಚ್. ಮಲ್ಲಿಕಾರ್ಜುನ್ ವಂದಾಲಿ ಇದ್ದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top