Connect with us

Dvgsuddi Kannada | online news portal | Kannada news online

ದಾವಣಗೆರೆ: ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಹುಂಡಿ ಕಳವು

ದಾವಣಗೆರೆ

ದಾವಣಗೆರೆ: ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಹುಂಡಿ ಕಳವು

ದಾವಣಗೆರೆ: ನಗರದ ಎಂಸಿಸಿ ‘ಬಿ’ ಬ್ಲಾಕ್ ನಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಹುಂಡಿ ಕಳ್ಳತನವಾಗಿದೆ. ನಿನ್ನೆ (ಏ.16) ತಡ ರಾತ್ರಿ ಈ ಘಟನೆ ಸಂಭವಿಸಿದೆ. ಹುಂಡಿ ಹೊಡೆದು ಹಣ ದೋಚಿ ಪರಾರಿಯಾಗಿದ್ದಾರೆ. ದೇವಸ್ಥಾನದ ಮುಖ್ಯ‌ ದ್ವಾರದ ಬೀಗ ಹೊಡೆಯಲು ಕಳ್ಳರು ಪ್ರಯತ್ನಿಸಿದ್ದು,  ಅದು ಸಾಧ್ಯವಾಗದಿದ್ದಾಗ   ಉತ್ತರ ದ್ವಾರದ ಕಬ್ಬಿಣದ ಸರಳುಗಳನ್ನು ಆಯುಧಗಳಿಂದ ಮುರಿದು ದೇವಸ್ಥಾನ ಪ್ರವೇಶ ಮಾಡಿದ್ದಾರೆ. ನಂತರ ಹುಂಡಿಗಳನ್ನು ಹೊಡೆದು ಹಣವನ್ನದೋಚಿಕೊಂಡು ಹೋಗಿದ್ದಾರೆ.

ದೇವಸ್ಥಾನ ಸಮಿತಿ ಎರಡು ತಿಂಗಳ ಹಿಂದೆಯಷ್ಟೇ  ಹುಂಡಿ ಏಣಿಕೆ ಮಾಡಿದ್ದರಿಂದ  ಅಂದಾಜು 50 ಸಾವಿರ ಹಣ ಕಳ್ಳತನವಾಗಿರುವ ಶಂಕೆ ವ್ಯಕ್ತವಾಗಿದೆ.  ಇನ್ನು  ದೇವರ ಅಭರಣಗಳಿದ್ದ ಕೊಠಡಿ ಬಾಗಿಲನ್ನು ಸಹ ಕಳ್ಳರು ತೆರೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ.  ಸಿಸಿಟಿವಿ  ಗಳನ್ನು ಕಳ್ಳರು ಹಾನಿಮಾಡಿದ್ದಾರೆ.  ಪೊಲೀಸರು ತನಿಖೆ ಕೈಗೊಂಡಿದ್ಧಾರೆ.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top