Connect with us

Dvgsuddi Kannada | online news portal | Kannada news online

ದಾವಣಗೆರೆ ; ಎರಡು ಮನೆ ಕಳ್ಳತನ ಪ್ರಕರಣ; ಇಬ್ಬರು ಆರೋಪಿಗಳ ಬಂಧನ; , ಚಿನ್ನಾಭರಣ, ನಗದು ಸಹಿತ 3.82 ಲಕ್ಷ ಮೌಲ್ಯದ ಸ್ವತ್ತು ವಶ

IMG 20230425 072902

ದಾವಣಗೆರೆ

ದಾವಣಗೆರೆ ; ಎರಡು ಮನೆ ಕಳ್ಳತನ ಪ್ರಕರಣ; ಇಬ್ಬರು ಆರೋಪಿಗಳ ಬಂಧನ; , ಚಿನ್ನಾಭರಣ, ನಗದು ಸಹಿತ 3.82 ಲಕ್ಷ ಮೌಲ್ಯದ ಸ್ವತ್ತು ವಶ

ದಾವಣಗೆರೆ; ಪ್ರತ್ಯೇಕ ಎರಡು ಮನೆ ಕಳ್ಳತನ ಪ್ರಕರಣಕ್ಕೆ ಸಬಂಧಿಸಿದಂತೆ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದ್ದು ಚಿನ್ನಾಭರಣ, ನಗದು ಸಹಿತ 3.82 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ. ರೂ 3,59,000 ಬೆಲೆಯ ಬಂಗಾರ & ಬೆಳ್ಳಿಯ ಆಭರಣಗಳು, ರೂ/18,000- ಬೆಲೆಯ 2 ಡಿ ಜೆ ಸೌಂಡ್ ಬಾಕ್ಸ್ ಗಳು, ರೂ 5000/- ನಗದು ಹಣವನ್ನು ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿದೆ.

ಮೊದಲ ಪ್ರಕರಣದಲ್ಲಿ ನಗರದ ಕೊಂಡಜ್ಜಿ ರಸ್ತೆ, ಆಂಜನೇಯ ದೇವಸ್ಥಾನದ ಹಿಂಭಾಗ, ಅಶೋಕ ನಗರ ಅಂಜಿನಪ್ಪ ಎಂಬುವರು ಠಾಣೆಗೆ ಹಾಜರಾಗಿ ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಮನೆಯಲ್ಲಿನ ಗಾಡ್ರೇಜ್ ಬೀರುವಿನ ಬಾಗಿಲು ಮೀಟಿ ಅದರಲ್ಲಿನ ಬಂಗಾರದ & ಬೆಳ್ಳಿಯ ಒಡವೆಗಳು ಹಾಗೂ ಮನೆಯಲ್ಲಿದ್ದ ಸಂಗೀತ ಕೇಳುವ ಎರಡು ಡಿ ಜೆ ಬಾಕ್ಸ್ ಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇನ್ನೊಂದು ಪ್ರಕರಣದಲ್ಲಿ ದಾವಣಗೆರೆಯ ಕರೂರು ಗ್ರಾಮ, ಮಲ್ಲಿಕಾರ್ಜುನ ಎಂಬುವರು ಕಳ್ಳರು ಮನೆಯ ಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಗಾಂಧಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಎರಡು ಪ್ರಕರಣದ ಆರೋಪಿಗಳು ಮತ್ತು ಮಾಲು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನಲ್ಲಿ ತನಿಖಾಧಿಕಾರಿಯಾದ ದಾವಣಗೆರೆ ಗಾಂಧಿನಗರ ವೃತ್ತದ ರಾಜಶೇಖರ್ ಎಲ್ ಸಿಪಿಐರವರ ನೇತೃತ್ವದಲ್ಲಿ ಪಿಎಸ್‌ಐ ಕೃಷ್ಣಪ್ಪ ತೋಪಿನ (ಕಾ&ಸು) ಮತ್ತು ಶ್ರೀಮತಿ ಮಂಜುಳ ಎಂ (ತನಿಖೆ) ಜಿ ಎಂ, ಪರಶುರಾಮ ಎ.ಎಸ್.ಐ, ರಾಮಪ್ಪ, ಎ.ಎಸ್.ಐ & ಸಿಬ್ಬಂದಿಯಾದ ಕುಬೇರ ನಾಯ್ಕ, ನಿಜಲಿಂಗಪ್ಪ, ವಿಜಯ್ ಹೆಚ್.ಎಸ್, ಸ್ವಾಮಿಲಿಂಗಪ್ಪ, ಅಸ್ಕರ್ ಅಲಿ, ದ್ಯಾಮೇಶ್, ಶಫಿಉಲ್ಲಾ ಸಿದ್ದಕಲಿ, ಖಾಜಾ ಹುಸೇನ್ ಅತ್ತಾರ್. ದೇವರಾಜ್, ಇರ್ಷಾದ್, ಸೇವ್ಯಾನಾಯ್ಕ ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ, ಶಾಂತಕುಮಾರ ರವರ ತಂಡ ರಚಿಸಲಾಗಿತ್ತು.

ಈ ತಂಡ ಆರೋಪಿಗಳಾದ ಶಾರೂಖ್ ಖಾನ್ @ ಶಾರು, (26) , ದಾವಣಗೆರೆ, ಅಬು ಸಾಲೇಹ, (23), ದಾವಣಗೆರೆ ಇವರುಗಳನ್ನು ಬಂಧನ ಮಾಡಲಾಗಿದ್ದು. ಆರೋಪಿಗಳಿಂದ ರೂ. 3,59,000 ಬೆಲೆಯ ಬಂಗಾರ & ಬೆಳ್ಳಿಯ ಆಭರಣಗಳು, ರೂ/18,000- ಬೆಲೆಯ 2 ಡಿ ಜೆ ಸೌಂಡ್ ಬಾಕ್ಸ್ ಗಳು, ರೂ 5000/- ನಗದು ಹಣವನ್ನು ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿದೆ.

ಮೇಲ್ಕಂಡ ಪ್ರಕರಣಗಳಲ್ಲಿ ಆರೋಪಿತರ ಪತ್ತೆ ಮತ್ತು ಸ್ವತ್ತನ್ನು ವಶಪಡಿಸಿಕೊಳ್ಳವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎಸ್ಪಿ ಡಾ. ಅರುಣ್ ಕೆ., ಹೆಚ್ಚುವರಿ ಎಸ್ಪಿ ಆರ್.ಬಸರಗಿ ಪ್ರಶಂಸನೆ ವ್ಯಕ್ತಪಡಿಸಿದ್ದಾರ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top