Connect with us

Dvgsuddi Kannada | online news portal | Kannada news online

12 ಪ್ರಥಮ ಪ್ರಶಸ್ತಿ ಪಡೆದ ಚಿತ್ರದುರ್ಗ ಅಂಚೆ ವಿಭಾಗ

ಪ್ರಮುಖ ಸುದ್ದಿ

12 ಪ್ರಥಮ ಪ್ರಶಸ್ತಿ ಪಡೆದ ಚಿತ್ರದುರ್ಗ ಅಂಚೆ ವಿಭಾಗ

ಡಿವಿಜಿ ಸುದ್ದಿ, ದಾವಣಗೆರೆ: ದಕ್ಷಿಣ ಕರ್ನಾಟಕ ಪ್ರಾದೇಶಿಕ ಅಂಚೆ ಇಲಾಖೆಯ ವ್ಯಾಪ್ತಿಯ  2019-20ರ ಸಾಲಿನಲ್ಲಿ  ಚಿತ್ರದುರ್ಗ ಅಂಚೆ ವಿಭಾಗವು 12 ವಿಭಾಗಗಳಲ್ಲಿ ಪ್ರಥಮ ಸ್ಥಾನದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಈ ಕುರಿತು ಪ್ರಾದೇಶಿಕ ವಿಭಾಗದ ಮುಖ್ಯಸ್ಥ ಪೋಸ್ಟ್ ಮಾಸ್ಟರ್ ಜನರಲ್ ಎಸ್.ಆರ್ ಮೂರ್ತಿ ಅವರು  ವೀಡಿಯೋ ಕಾನ್ಪರೆನ್ಸ್ ಮುಖಾಂತರ ಘೋಷಿಸಿದರು. ಈ ಪ್ರಯುಕ್ತ ಗುರುವಾರ ಚಿತ್ರದುರ್ಗ ವಿಭಾಗೀಯ ಕಚೇರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದ ಚಿತ್ರದುರ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕ ವಿರುಪಾಕ್ಷಪ್ಪ.ಓ, ಚಿತ್ರದುರ್ಗ ಹಾಗೂ ದಾವಣಗೆರೆ ಪ್ರಧಾನ ಅಂಚೆ ಕಚೇರಿಗಳು ಕ್ರಮವಾಗಿ ಪ್ರಥಮ ದ್ವಿತೀಯ ಪ್ರಶಸ್ತಿಗಳನ್ನು ಪಡೆದುಕೊಳ್ಳುವುದರ ಮೂಲಕ 2019-20ರ ಸಾಲಿನ ಉತ್ತಮ ವಹಿವಾಟುಗಳನ್ನು ನಡೆಸಿ ಸಾರ್ವಜನಿಕರಿಗೆ ಗರಿಷ್ಠ ಸೇವೆಯನ್ನು ನೀಡಿರುವ ಹಿರಿಮೆಗೆ ಪಾತ್ರವಾಗಿವೆ.

ಪ್ರತೀ ವರ್ಷವು ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಈ ವರ್ಷವು ಕೋವಿಡ್ ಕಾರಣದಿಂದಾಗಿ ಚಿತ್ರದುರ್ಗ ಅಂಚೆ ವಿಭಾಗೀಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಅಂಚೆಇಲಾಖೆಯ ರಾಯಬಾರಿಗಳನ್ನು ಅಂಚೆಪೇದೆಗಳು ಮತ್ತು ಗ್ರಾಮೀಣ ಭಾಗದ ಅಂಚೆ ನೌಕರರ ಸೇವೆಯನ್ನು ಹಾಗೂ ವಿಭಾಗದ ಸಾಧನೆಗೆ ಹಿಂದಿನ ಅಧಿಕಾರಿಗಳ ಕೊಡುಗೆಗಳನ್ನು ಸ್ಮರಿಸಿದರು.

ಚಿತ್ರದುರ್ಗ ವಿಭಾಗವು 2019-20 ನೇ ಎಲ್ಲಾ ವಿಭಾಗಗಳಲ್ಲಿ ಅಂಚೆ ಗ್ರಾಹಕರಿಗೆ ಉತ್ಕøಷ್ಟವಾದ ಸೇವೆಯನ್ನು ನೀಡುತ್ತಿದೆ. ಅಂಚೆ ಉಳಿತಾಯ ಖಾತೆಗಳು ಸ್ಪೀಡ್ ಪೋಸ್ಟ್, ಅಂಚೆ ಚೀಟಿ ವಿಮೆ, ಗೋಲ್ಡ್ ಬಾಂಡ್, ಆಧಾರ್ ಕಾರ್ಡ್, ಪಾಸ್‍ಪೋರ್ಟ್ ಸೇವೆಗಳು, ಮೀಡಿಯಾ ಪೋಸ್ಟ್ ಮತ್ತು ಇತರ ಅಂಚೆ ಸೇವೆಗಳಲ್ಲಿ ಹೆಚ್ಚಿನ ವಹಿವಾಟುಗಳನ್ನು ನಡೆಸುವುದರ ಮುಖಾಂತರ ಪ್ರಥಮ ಸ್ಥಾನ ಗಳಿಸಿದೆ ಎಂದರು.

ಈ ಸಂದರ್ಭದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾದ ಅನಿಲ್ ಕುಮಾರ್, ಅಂಚೆ ನಿರೀಕ್ಷಕರಾದ ಅಶೋಕ್.ಆರ್, ಮಾರುಕಟ್ಟೆ ಅಧಿಕಾರಿಗಳು, ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕರು ಮತ್ತು 12 ಪ್ರಶಸ್ತಿಗಳನ್ನು ಪಡೆದುಕೊಂಡ ಸಾಧಕರು, ವಿಭಾಗೀಯ ಕಚೇರಿಯ ಎಲ್ಲಾ ಅಂಚೆ ಸಿಬ್ಬಂದಿಗಳು ಉಪಸ್ಥಿತಿರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada ಡಿವಿಜಿಸುದ್ದಿ. ಕಾಂ ‌ಆನ್ ಲೈನ್ ನ್ಯೂಸ್ ಪೋರ್ಟಲ್‌ ಆಗಿದ್ದು, ಸ್ಥಳೀಯ (ದಾವಣಗೆರೆ) ಸುದ್ದಿ ಜೊತೆ ಇನ್ಫೋರ್ಮೆಟಿವ್ ಸುದ್ದಿ‌ ಕೊಡುವುದು ಮೊದಲ ಆದ್ಯತೆ. ಸ್ಥಳೀಯ ಸುದ್ದಿ, ರಾಜಕೀಯ, ಶಿಕ್ಷಣ, ಸಿನಿಮಾ, ಕ್ರೀಡೆ ಜೊತೆ ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಉದ್ದೇಶ. Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top