ದಾವಣಗೆರೆ: ಶಾಮನೂರು ಶಿವಶಂಕರಪ್ಪ ನಿಧನ ನಂತರ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆಗೆ ಸಿದ್ಧತೆ ನಡೆಯತ್ತಿದೆ. ಈ ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆ. ಅದರಲ್ಲೂ ಕಾಂಗ್ರೆಸ್ ಹಿರಿಯ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ಅದೃಷ್ಠದ ಕ್ಷೇತ್ರ. ಇಲ್ಲಿ ಶಿವಶಂಕರಪ್ಪ ಕುಟುಂಬದ ಪ್ರಭಾವವೇ ಹೆಚ್ಚಾಗಿದೆ. ಪ್ರತಿಬಾರಿ ಇಲ್ಲಿನ ಜನ ಶಾಮನೂರು ಶಿವಶಂಕರಪ್ಪ ಅವರನ್ನ ಗೆಲ್ಲಿಸಿದ್ದಾರೆ. ಇದೀಗ ಶಿವಶಂಕರಪ್ಪ ನಿಧನ ನಂತರ ಕಾಂಗ್ರೆಸ್ ಪಕ್ಷದಿಂದ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಉಪ ಚುನಾವಣೆಯಲ್ಲಿ ಉತ್ತರ ಸಿಗಲಿದೆ. ಆದರೆ, ಈಗ ಟಿಕೆಟ್ ಗಾಗಿ ಭಾರೀ ಜಿದ್ದಾಜಿದ್ದಿ ನಡೆಯುತ್ತಿದೆ.
ದಾವಣಗೆರೆ: ಕಲ್ಲು ಕಂಬಕ್ಕೆ ಬೈಕ್ ಡಿಕ್ಕಿ; ಹಿಂಬದಿ ಸವಾರ ಸಾ*ವು
ಮುಸ್ಲಿಂಗೆ ಟಿಕೆಟ್ ನೀಡಿ
ದಾವಣಗೆರೆ ದಕ್ಷಿಣ ಟಿಕೆಟ್ ಗೊಂದಲ ಬಗ್ಗೆ ಮಾತನಾಡಿದ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ, ಈಗಾಗಲೇ ಸುಮಾರು ಸಲ ಮಾತಾಡಿದ್ದೀನಿ ದಾವಣಗೆರೆ ದಕ್ಷಿಣದಲ್ಲಿ ಮೊದಲು ಅಲ್ಪಸಂಖ್ಯಾತರಿಗೆ ಒಂದು ಅವಕಾಶ ಮಾಡಿಕೊಡಬೇಕಿದೆ. ಯಾಕಂದ್ರೆ ಇಡೀ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ಕೇವಲ ನಮ್ಮ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದಲ್ಲಿ ಮುಸ್ಲಿಂ ಕಾಂಗ್ರೆಸ್ ಪರ ನಿಂತಿದ್ದಾರೆ. ಶಿಗ್ಗಾಂವಿಯಲ್ಲಿ ಸಹ ಮೈನಾರಿಟಿಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದೀವಿ. ಅದೇ ರೀತಿ ದಾವಣಗೆರೆ ದಕ್ಷಿಣದಲ್ಪಿಯೂ ಸಹ ಗೆಲ್ಲಿಸಿಕೊಂಡು ಬರ್ತೀವಿ. ಅವರಿಗೊಂದು ಅವಕಾಶ ಕೊಡಲಿ ಎಂದರು.
ದಾವಣಗೆರೆ: ಮಹಿಳೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; 41 ವರ್ಷ ಬಳಿಕ ಆರೋಪಿ ಬಂಧನ
ಸಹೋದರ ಪರವೂ ಬ್ಯಾಟ್ ಬೀಸಿದ ಶಾಸಕ
ಅಲ್ಪಸಂಖ್ಯಾತರು ಬೇಡ, ಇನ್ನೊಬ್ಬರು ಬೇಡ, ಹೊಸ ಮುಖಕ್ಕೆ ಟಿಕೆಟ್ ಕೊಡಬೇಕು ಅಂತ ಅಂದುಕೊಂಡರೆ ನಮ್ಮ ಸಹೋದರಗೆ (ಶಿವಗಂಗಾ ಶ್ರೀನಿವಾಸ) ಟಿಕೆಟ್ ಕೊಡಲಿ. ಈ ಬಗ್ಗೆ ಈ ಹಿಂದೆಯೂ ಹೇಳಿದ್ದೆ, ಈಗ ಸಹ ಗೇಳಿಕೆಗೆ ಬದ್ಧ. ಹೊರಗೊಂದು, ಒಳಗೊಂದು ಮಾತನ್ನಾಡುವುದಕ್ಕೆ ನಂಗೆ ಬರೋದಿಲ್ಲ. ಎಂದರು.
ಹೈಕಮಾಂಡ್ ಯಾರಿಗೆ ಕೊಟ್ಟರು ಓಕೆ. ಕೇವಲ ಲಿಂಗಾಯತರಿಗೆ ಟಿಕೆಟ್ ನೀಡಿ ಎಂದು ಕೇಳಲ್ಲ. ನಮಗೆ ಕೊಟ್ಟರು ಓಕೆ. ಅಲ್ಪಸಂಖ್ಯಾತರಿಗೆ ಕೊಟ್ಟರು ಕೆಲಸ ಮಾಡುತ್ತೇವೆ. ಮೊದಲು ಆದ್ಯತೆ ಮುಸ್ಲಿಂರಿಗೆ ನೀಡಿ ಎಂದು ಮನವಿ ಮಾಡಿದರು.



