Connect with us

Dvgsuddi Kannada | online news portal | Kannada news online

ನವ್ಯ ಮನೋಹರ ಪೈ, ನಾರಾಯಣ ಎಂ.ಪೈ, ಬಿ.ಕೆ.ಮಾಧವರಾವ್, ದೀಪಾ ಎಂ. ಪೈಗೆ ಅಂಚೆ-ಕುಂಚ ಪ್ರಶಸ್ತಿ

ದಾವಣಗೆರೆ

ನವ್ಯ ಮನೋಹರ ಪೈ, ನಾರಾಯಣ ಎಂ.ಪೈ, ಬಿ.ಕೆ.ಮಾಧವರಾವ್, ದೀಪಾ ಎಂ. ಪೈಗೆ ಅಂಚೆ-ಕುಂಚ ಪ್ರಶಸ್ತಿ

ಡಿವಿಜಿಸುದ್ದಿ.ಕಾಂ, ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಗಣೇಶೋತ್ಸವದ ಅಂಗವಾಗಿ ರಾಜ್ಯಮಟ್ಟದ ಅಂಚೆ ಕಾರ್ಡ ನಲ್ಲಿ  ಚಿತ್ರ ಬರೆಯುವ “ಅಂಚೆ-ಕುಂಚ” ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ನಾರಾಯಣ ಎಂ.ಪೈ,  ಕಾಲೇಜು ವಿಭಾಗದಲ್ಲಿ ನವ್ಯ ಮನೋಹರ ಪೈ, ಮತ್ತು  ಸಾರ್ವಜನಿಕ ವಿಭಾಗದಲ್ಲಿ ಬಿ.ಕೆ.ಮಾಧವರಾವ್, ದೀಪಾ ಎಂ. ಪೈ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

“ಅಂಚೆ-ಕುಂಚ” ಸ್ಪರ್ಧೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಒಂದು ಸಾವಿರದ ಆರುನೂರು ಮೂವತ್ತೇಳು ಅಂಚೆ ಕಾರ್ಡ್ ಬಂದಿದ್ದು ಬಹುಮಾನ ವಿಜೇತರಿಗೆ  ಮುಂಬರುವ ಸಂಸ್ಥೆಯ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಲೋಕೇಶ್ ತಿಳಿಸಿದ್ದಾರೆ.

 ಕಿರಿಯರ ವಿಭಾಗ, ಪ್ರಥಮ: ನಾರಾಯಣ ಎಂ.ಪೈ, ಕುಮಟಾ

ದ್ವಿತೀಯ: ಬಹುಮಾನ ಅಬ್ದುಲ್ ರೆಹಮಾನ್, ಗೋಕಾಕ್

ತೃತೀಯ: ಶೀಲಾ ಪಾಟೀಲ ಕುಮಾರಪಟ್ಟಣಂ

 

ಕಾಲೇಜು ವಿಭಾಗ , ಪ್ರಥಮ:  ನವ್ಯ ಮನೋಹರ ಪೈ,  ಗೋಕರ್ಣ

ದ್ವಿತೀಯ: ರಾಜೇಶ್ ಹಿಂಗಳಗಿ, ತಡಸ

ತೃತೀಯ : ಜಲಜಾಕ್ಷಿ ವೀರಪ್ಪ ಗೌಡ, ಹಾಸನ

 

ಸಾರ್ವಜನಿಕ ವಿಭಾಗ, ಪ್ರಥಮ: ಬಿ.ಕೆ.ಮಾಧವರಾವ್, ಮಂಗಳೂರು

ದೀಪಾ ಎಂ.ಪೈ, ಸಾಗರ

ದ್ವಿತೀಯ: ಚನ್ನಬಸಯ್ಯ ಹಿರೇಮಠ, ಗದಗ

 ತೃತೀಯ: ರುದ್ರಾಕ್ಷಿ ವೀರಸ್ವಾಮಿ ಬೆಂಗಳೂರು.

ಡಾ|| ದೀಪಶ್ರೀ ಪ್ರಮೋದ್ ದಾವಣಗೆರೆ

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top