Connect with us

Dvgsuddi Kannada | online news portal | Kannada news online

ಕನ್ನಡ ಚಲನ್ ಮುದ್ರಿಸದ ಆಂಧ್ರ ಬ್ಯಾಂಕ್ ಮ್ಯಾನೇಜರ್ ಗೆ ತರಾಟೆ

ದಾವಣಗೆರೆ

ಕನ್ನಡ ಚಲನ್ ಮುದ್ರಿಸದ ಆಂಧ್ರ ಬ್ಯಾಂಕ್ ಮ್ಯಾನೇಜರ್ ಗೆ ತರಾಟೆ

ಡಿವಿಜಿಸುದ್ದಿ.ಕಾಂ, ದಾವಣಗೆರೆ: ನಗರದ ಆಂಧ್ರ ಬ್ಯಾಂಕಿನಲ್ಲಿ ಕನ್ನಡ ಚಲನ್ ಮುದ್ರಿಸದ ಹಿನ್ನೆಲೆ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಎಸ್. ರಾಮೇಗೌಡ ಬ್ಯಾಂಕ್ ಮ್ಯಾನೇಜರ್ ಗೆ ತರಾಟೆ ತಗೆದುಕೊಂಡರು.

ನಗರ ಮಂಡಿ‌ಪೇಟೆಯ ಆಂಧ್ರ ಬ್ಯಾಂಕ್ ನಲ್ಲಿ ಎಲ್ಲ ವ್ಯವಹಾರ ತೆಲುಗಿನಲ್ಲಿಯೇ ನಡೆಯುತ್ತಿದ್ದು, ಕನ್ನಡ ಭಾಷೆಗೆ ಇಲ್ಲಿ ಅವಕಾಶವೇ ಇಲ್ಲದಂತಾಗಿದೆ. ತ್ರಿಭಾಷ ಸೂತ್ರದಡಿ ಪ್ರಾದೇಶಿಕ ಭಾಷೆ ಕನ್ನಡಕ್ಕೆ ಮಹತ್ವ ನೀಡಬೇಕು. ಆದರೆ, ಈ ಬ್ಯಾಂಕ್ ನಲ್ಲಿ ತೆಲುಗಿಗೆ ಮಹತ್ವ ನೀಡಲಾಗಿದ್ದರಿಂದ ಕರವೇ ದಾಳಿ ಮಾಡಿದೆ.

ಕರವೇ ದಾಳಿ ಬಳಿಕ ಬ್ಯಾಂಕಿನ ವ್ಯವಸ್ಥಾಪಕ ಶ್ರೀಹರ್ಷ ಮಾತನಾಡಿ, ಒಂದು ತಿಂಗಳ ಒಳಗಾಗಿ ಕನ್ನಡ ಚಲನ್ ಮತ್ತು ಅರ್ಜಿಗಳನ್ನು ಕನ್ನಡದಲ್ಲಿ ಮುದ್ರಿಸಿ ಗ್ರಾಹಕರಿಗೆ ನೀಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆಜಿ ಬಸವರಾಜ್. ಜಿಲ್ಲಾ ಪ್ರಧಾನ ಸಂಚಾಲಕ ಗೋಪಾಲ ದೇವರಮನಿ .ಯುವ ಘಟಕದ ಮುಖಂಡರಾದ ಪ್ರದೀಪ್. ವಿಜಯೇಂದ್ರ. ರಮೇಶ್ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಎನ್. ಬಿ.ಎ. ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top