ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ 11ಕೆ.ವಿ. ಫೀಡರ್ನಲ್ಲಿ ತುರ್ತುಕಾರ್ಯ ಹಮ್ಮಿಕೊಂಡಿರುವುದರಿಂದ ನಾಳೆ (ಮಾ.17) ರಂದು ಮಧ್ಯಾಹ್ನ 2 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವುಂಟಾಗಲಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ಅಶೋಕ ರಸ್ತೆ, ಮಹಿಳಾ ಸಮಾಜ ಕಾಂಪ್ಲೆಕ್ಸ್, ಆರ್.ಹೆಚ್. ಚೌಲ್ಟ್ರಿ, ಬಿ.ಎಸ್.ಎನ್.ಎಲ್. ಎಕ್ಸ್ಚೇಂಜ್, ಕಾಮತ್ ಹೋಟೆಲ್ ಏರಿಯಾ, ರೈಲ್ವೆ ನಿಲ್ದಾಣ, ಜೋಯಾಲುಕ್ಕಾಸ್, ಬಿಗ್ ಬಜಾರ್, ಆಕ್ಸಿಸ್ ಬ್ಯಾಂಕ್, ರೇಣುಕಾ ಮಂದಿರ, ಬೀರಲಿಂಗೇಶ್ವರ ಕಾಂಪೌಂಡ್, ಮಹಾನಗರ ಪಾಲಿಕೆ ಕಛೇರಿ, ಸಾಯಿ ಹೋಟೆಲ್, ಶಾಂತಿ ಕಂಪರ್ಟ್ಸ್, ಹೈಸ್ಕೂಲ್ ಫೀಲ್ಡ್ ಮತ್ತು ಹಳೆ ಬಸ್ ನಿಲ್ದಾಣ ಹಾಗು ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮಾ.18 ರಂದು ವ್ಯತ್ಯಯ
ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಶಿವಾಲಿ ಫೀಡರ್ನ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿ ಕೆಲಸಗಳಿರುವುದರಿಂದ ಮಾ.18 ರಂದು ಬೆಳಿಗ್ಗೆ 10 ರಿಂದ ಸಂಜೆ 4:30 ಗಂಟೆಯವರೆಗೆ ವಿದುತ್ ವ್ಯತ್ಯಯವಾಗಲಿದೆ. ಶಿವಾಲಿ ಫೀಡರ್ನ ಬಾಷಾನಗರ ಮೇನ್ ರೋಡ್, ಬೀಡಿ ಲೇಔಟ್, ರಝಾವುಲ್ಲ ಮುಸ್ತಫಾ ನಗರ, ಶಿವನಗರ ಮೇನ್ ರೋಡ್, ಸುತ್ತಮುತ್ತ ಎಸ್.ಎಸ್.ಎಮ್ ನಗರ, ಎಸ್.ಟಿ.ಪಿ ಕಾರ್ಖಾನೆ, ಟಿಪ್ಪು ನಗರ, ಇಎಸ್ಐ ಹಾಸ್ಪಿಟಲ್ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.



