ಮಾರ್ಚ್ 1 ರಿಂದ  ದಾವಣಗೆರೆ ದುರ್ಗಾಂಬಿಕಾ ದೇವಿ ಜಾತ್ರೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಡಿವಿಜಿ ಸುದ್ದಿ, ದಾವಣಗೆರೆ: ಐತಿಹಾಸಿಕ ಪ್ರಸಿದ್ಧ ನಗರದೇವತೆ ದುರ್ಗಾಂಬಿಕಾ ದೇವಿಯ ಜಾತ್ರೆ ಮಾರ್ಚ್ 1ರಿಂದ 4 ನಡೆಸಲು ನಿರ್ಧರಿಸಲಾಗಿದೆ. ನಗರದ  ದುರ್ಗಾಂಬಿಕಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ದುರ್ಗಾಂಬಿಕಾ ಶಾಲೆಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

davangere durugambika deevi dvgsuddi

ಜ.28 ರಂದು ಹಂದರಗಂಬದ ಪೂಜೆ ನಡೆಯಲಿದ್ದು, ಮಾರ್ಚ್‌ 1ರಂದು ದೇವಿಗೆ ಪಂಚಾಮೃತ ಅಭಿಷೇಕ, ರಾತ್ರಿ ಕಂಕಣಧಾರಣೆ ಹಾಗೂ ಸಾರು ಹಾಕುವುದು ನಡೆಯಲಿದೆ. ಮಾರ್ಚ್‌ 2ರಂದು ಸೋಮವಾರ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಮಾರ್ಚ್‌ 3ರಂದು ರಾತ್ರಿ ಭಕ್ತಿ ಸಮರ್ಪಣೆ ಕಾರ್ಯ ನಡೆಯಲಿದೆ. ಮಾರ್ಚ್‌ 4ರಂದು ಬೆಳಿಗ್ಗೆ ಚರಗ ಕಾರ್ಯಕ್ರಮ ನಡೆಯಲಿದೆ.

ದೇವಸ್ಥಾನ ಸಮಿತಿಯಲ್ಲಿ ಎಲ್ಲಾ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಯಿತು. ಸಭೆಯಲ್ಲಿ ಸ್ವಲ್ಪ ಹೊತ್ತು ಮಾತಿನ ಚಕಮುಕಿಯೂ ನಡೆಯಿತು. ಅಂತಿಮವಾಗಿ ಯಾರಲ್ಲ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ 5 ಜನರ ಸಮಿತಿ ರಚಿಸಿಬೇಕು. ಯಾರನ್ನು ಸೇರಿಸಬೇಕು ಎಂಬುದರ ಪಟ್ಟಿ ಕೊಡಿ, ಮುಂದಿನ ಸಭೆಯಲ್ಲಿ ಆಯ್ಕೆ ಮಾಡಲಾಗುವುದು ಎಂದು  ಮೋತಿ ವೀರಣ್ಣ ತಿಳಿಸಿದರು.

ಉಸ್ತುವಾರಿ ಸಮಿತಿ ರಚನೆ

ಸಾಂಸ್ಕೃತಿ ಸಮಿತಿ: ಹನುಮಂತ ರಾವ್‌ ಸಾವಂತ್‌,ಹನುಮಂತರಾವ್‌ ಜಾಧವ್‌,

ಕುಸ್ತಿ ಸಮಿತಿ: ಎಚ್‌.ಬಿ.ಗೋಣೆಪ್ಪ, ಕುರಿಕಾಳಗಕ್ಕೆ ಉಮೇಶ್‌ ಸಾಳಂಕಿ, ರಾಮಕೃಷ್ಣ

ಬಾಬುದಾರರ ಸಮಿತಿ:  ಗೌಡ್ರು ಚನ್ನಬಸಪ್ಪ, ಗೌಡ್ರು ರೇವಣಸಿದ್ದಪ್ಪ,

 ಉತ್ಸವ ಸಮಿತಿ: ಬಿ.ಎಚ್‌. ವೀರಭದ್ರಪ್ಪ, ಜೆ.ಕೆ.ಕೊಟ್ರಬಸಪ್ಪ

 ಪೆಂಡಾಲ್‌ ಸಮಿತಿ: ಪಿಸಾಳೆ ಸತ್ಯನಾರಾಯಣ, ಎಸ್‌.ಎಂ. ಗುರುರಾಜ್‌

shamnuru meeting

ಈ 10 ಜನರ ಉಪಸಮಿತಿ ರಚನೆ ಮಾಡಿದ್ದು,  ದುಗ್ಗಮ್ಮ ಜಾತ್ರೆಗೆ ಬೇಕಾದ ಸಿದ್ದತೆ ಮಾಡಿಕೊಳ್ಳುವಂತೆ  ಶಾಮನೂರು ಶಿವಶಂಕರಪ್ಪ ಸೂಚಿಸಿದರು. ಮುಖಂಡರಾದ ಅಥಣಿ ವೀರಣ್ಣ, ಯಜಮಾನ ಮೋತಿ ವೀರಣ್ಣ, ಜೆ.ಕೆ.ಕೊಟ್ರಬಸಪ್ಪ, ಪಿಸಾಳೆ ಸತ್ಯನಾರಾಯಣ, ಹನುಮಂತರಾವ್‌ ಸಾವಂತ್‌, ಗೌಡ್ರುಚನ್ನಬಸಪ್ಪ, ಎಚ್‌.ಬಿ.ಗೋಣೆಪ್ಪ, ಸಾಳಂಕಿ ಉಮೇಶ್‌, ಬಿ.ಕೆ.ರಾಮಕೃಷ್ಣ, ಎಸ್‌. ಎಂ.ಗುರುರಾಜ್‌, ಹನುಮಂತರಾವ್‌ ಜಾಧವ್‌, ರಾಜನಹಳ್ಳಿ ಶಿವಕುಮಾರ್‌, ಮಾಲತೇಶ್‌ ಜಾಧವ್‌ ಇತರರು ಇದ್ದರು.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *