Dvgsuddi Kannada | online news portal | Kannada news onlineDvgsuddi Kannada | online news portal | Kannada news online
  • Home
  • ಪ್ರಮುಖ ಸುದ್ದಿ
    • ರಾಷ್ಟ್ರ ಸುದ್ದಿ
    • ರಾಜ್ಯ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More
    • ಚನ್ನಗಿರಿ
    • ಹರಿಹರ
    • ದಾವಣಗೆರೆ
Font ResizerAa
Font ResizerAa
Dvgsuddi Kannada | online news portal | Kannada news onlineDvgsuddi Kannada | online news portal | Kannada news online
  • Home
  • ಪ್ರಮುಖ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More

Search

Menu

  • Home
  • ಪ್ರಮುಖ ಸುದ್ದಿ
    • ರಾಷ್ಟ್ರ ಸುದ್ದಿ
    • ರಾಜ್ಯ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More
    • ಚನ್ನಗಿರಿ
    • ಹರಿಹರ
    • ದಾವಣಗೆರೆ
Subscribe

More from BuzzVibe

  • Blog
  • Contact
  • Contact Us
  • Customize Interests
  • Kannada News
  • My Bookmarks
  • Privacy Policy

Latest Stories

astrology today
ಸೋಮವಾರದ ರಾಶಿ ಭವಿಷ್ಯ 12 ಜನವರಿ 2026
maize 22
ಹೊನ್ನಾಳಿ ಎಪಿಎಂಸಿಯಲ್ಲಿ ನಾಳೆಯಿಂದ ಮೆಕ್ಕೆಜೋಳ ಖರೀದಿ ಶುರು; 2,150 ರೂ. ದರ ನಿಗದಿ
Chandrasekhar
ದಾವಣಗೆರೆ: ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ‌ ಮಾಜಿ ಕಾರ್ಪೊರೇಟರ್ ಶವ ಪತ್ತೆ
davangere traffic police
ದಾವಣಗೆರೆ: ಮಕ್ಕಳಿಂದ ಗುಲಾಬಿ ಹೂ ನೀಡಿ ಸಂಚಾರಿ ನಿಯಮ ಬಗ್ಗೆ ವಿಶೇಷ ಜಾಗೃತಿ
davangere crime news
ದಾವಣಗೆರೆ: ಶಾಲಾ, ಕಾಲೇಜು ಬಳಿ ಗುಟ್ಕಾ,ತಂಬಾಕು ಮಾರಾಟ ಮಾಡುತ್ತಿದ್ದ ಶಾಪ್ ಮೇಲೆ ದಾಳಿ

Socials

ಚನ್ನಗಿರಿ

ಹಿಂದೂ, ಮುಸ್ಲಿಂ ಸಾಮರಸ್ಯಕ್ಕೆ ರಾಜಕೀಯ ಅಡ್ಡಗೋಡೆ:ಸಾಣೇಹಳ್ಳಿ ಶ್ರೀ

Dvgsuddi
By
Dvgsuddi
ByDvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
Follow:
Last updated: November 23, 2019
Share
2 Min Read
SHARE

ಡಿವಿಜಿ ಸುದ್ದಿ, ಚನ್ನಗಿರಿ: ಹಿಂದೂ, ಮುಸ್ಲಿಂ ಸಾಮರಸ್ಯಕ್ಕೆ ರಾಜಕೀಯ ಅಡ್ಡಗೋಡೆಯಾಗಿದೆ. ಆ ಗೋಡೆ ಕೆಡವಿ ನಾವೆಲ್ಲರೂ ಒಂದು ಎಂದು ಸಮಾಜಕ್ಕೆ ತೋರಿಸಬೇಕಿದೆ ಎಂದು ಸಾಣೇಹಳ್ಳಿಯ  ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನವಿಲೇಹಾಳ್ ಗ್ರಾಮಸ್ಥರು ಹಾಗೂ ಕರವೇ ಸಂಘಟನೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಶಾಂತ ಗಂಗಾಧರ ಅವರಿಗೆ ಸನ್ಮಾನ ಕಾರ್ಯಕ್ರಮದ  ಸಾನಿಧ್ಯ ವಹಿಸಿ  ಆಶೀರ್ವಚನ ನೀಡಿದರು.

shree 3

ಹಿಂದೂ , ಮುಸ್ಲಿಂ ಎಂಬ ಬೇದ-ಭಾವ ಮರೆಯಲು ರಾಜಕೀಯ ಅಡ್ಡಗೋಡೆಯಾಗಿದೆ.  ಆ ಗೋಡೆಯನ್ನು ಕೆಡವಿ  ನಾವೆಲ್ಲರೂ ಭಾರತೀಯರು ಒಂದಾಗಿ ಬಾಳಬೇಕೆನ್ನುವ ಭಾವ ಬಲಗೊಂಡರೆ  ಬದುಕಿಗೆ ನೆಮ್ಮದಿ ಸಿಗಲಿಕ್ಕೆ ಸಾಧ್ಯವಾಗುತ್ತದೆ ಎಂದರು. ಕನ್ನಡ ಶಾಲೆಗಳನ್ನು ನಾವೆಲ್ಲರೂ ಉಳಿಸಬೇಕಿದೆ. ಇಲ್ಲವಾದಲ್ಲಿ ನೀವುಗಳು ಪಡೆದಂತಹ ಪದವಿಗಳಿಗೆ ಯಾವುದೇ ಅರ್ಥ ಸಿಗುವುದಿಲ್ಲ ಎಂದರು.

Related News

astrology today
ಸೋಮವಾರದ ರಾಶಿ ಭವಿಷ್ಯ 12 ಜನವರಿ 2026
January 11, 2026
maize 22
ಹೊನ್ನಾಳಿ ಎಪಿಎಂಸಿಯಲ್ಲಿ ನಾಳೆಯಿಂದ ಮೆಕ್ಕೆಜೋಳ ಖರೀದಿ ಶುರು; 2,150 ರೂ. ದರ ನಿಗದಿ
January 11, 2026
Chandrasekhar
ದಾವಣಗೆರೆ: ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ‌ ಮಾಜಿ ಕಾರ್ಪೊರೇಟರ್ ಶವ ಪತ್ತೆ
January 11, 2026

ಶಾಂತಗಂಗಾಧರ ಮತ್ತು ನಾವು ಜೊತೆಯಲ್ಲಿ ಪದವಿ ವ್ಯಾಸಂಗ ಮಾಡಿದವರು. ಇವರೊಬ್ಬ ಪ್ರಗತಿಪರ, ಸಾಮಾಜಿಕ ಚಿಂತಕರಾಗಿದ್ದಾರೆ. ಯಾರಿಗೇನಾದರೂ ಅನ್ಯಾಯ ಆಗಿದ್ದು ಕಂಡರೆ ಪ್ರಶ್ನೆ ಮಾಡಿ ನ್ಯಾಯ ದೊರಕಿಸಿಕೊಡುವ ಉದಾರ ವ್ಯೆಕ್ತಿತ್ವ ಅವರದು ಎಂದರು.

ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಶಾಂತ ಗಂಗಾಧರ,  ನನಗೆ ಎರಡು ಜನ ತಾಯಾಂದಿರು. ಮೊದಲನೆ ತಾಯಿ ನನಗೆ ಜನ್ನಕೊಟ್ಟ ಶಾಂತವ್ವ, ಇನ್ನೊಬ್ಬ ತಾಯಿ ಬಾವಿಯಲ್ಲಿ ಬಿದ್ದಿದ್ದ ನನ್ನನ್ನು ರಕ್ಷಿಸಿ ಮರುಜನ್ಮ ನೀಡಿದ ತಾಯಿ ಗಂಗವ್ವ ಎಂದು ಬಾಲ್ಯದ ಜೀವನವನ್ನು ನೆನಪಿಸಿದರು.

Related News

davangere traffic police
ದಾವಣಗೆರೆ: ಮಕ್ಕಳಿಂದ ಗುಲಾಬಿ ಹೂ ನೀಡಿ ಸಂಚಾರಿ ನಿಯಮ ಬಗ್ಗೆ ವಿಶೇಷ ಜಾಗೃತಿ
January 11, 2026
davangere crime news
ದಾವಣಗೆರೆ: ಶಾಲಾ, ಕಾಲೇಜು ಬಳಿ ಗುಟ್ಕಾ,ತಂಬಾಕು ಮಾರಾಟ ಮಾಡುತ್ತಿದ್ದ ಶಾಪ್ ಮೇಲೆ ದಾಳಿ
January 11, 2026
death
ದಾವಣಗೆರೆ: ಟಿಸಿ ಬಳಿ ಬಿದ್ದಿದ್ದ ಕಸ ತೆಗೆಯುವಾಗ ವಿದ್ಯುತ್ ಸ್ಪರ್ಶ ; ವ್ಯಕ್ತಿ ಸಾವು
January 10, 2026

shree dvgsuddi

ಸಿರಿಗೆರೆಯ ಮಠ  ಒಂದು ಜಾತಿಯ ಪೀಠ ಅಲ್ಲ, ಅದು ಸಮಗ್ರ ಜಾತಿ ಜನತೆಯ, ತುಳಿತಕ್ಕೆ ಒಳಗಾದವರ ಅಕ್ಷರ ಕಲಿಯದವರ ಪೀಠವಾಗಿದೆ. ಈ ಪೀಠದಲ್ಲಿ ಅಕ್ಷರ ಕಲಿತ ಲಕ್ಷಾಂತರ ವಿಧ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆ ಪದವಿಗಳನ್ನು ಪಡೆದಿದ್ದಾರೆ. ನನಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಲಿಕ್ಕೆ ಕಾರಣ ಈ ಸಿರಿಗೆರೆಯ ಪೀಠ, ಸಿರಿಗೆರೆಗೂ ನವಿಲೇಹಾಳ್ ಗ್ರಾಮಕ್ಕೂ ಅವಿನಾಭಾವ ಸಂಬಂದವಿದೆ.  ನಮ್ಮ ಊರು ಒಬ್ಬರ ಮನೆಯ ದುಖಃಕ್ಕೆ ಮತ್ತೊಂದು ಮನೆಯ ಮನಸ್ಸುಗಳು ಶ್ರಮಿಸುತ್ತವೆ ಎಂದು ಗ್ರಾಮದ ಜನರ  ಪ್ರೀತಿಯ ಮನಸ್ಸುಗಳನ್ನು ಕೊಂಡಾಡಿದರು.

ತಹಶೀಲ್ದಾರ್  ಎನ್ ನಾಗರಾಜ್ , ಕನ್ನಡ ಧ್ವಜರೋಹಣವನ್ನು ನೇರವೇರಿಸಿದರು ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ  ಪಿ , ಹೆಚ್ , ಡಿ  ಪದವಿ ಪಡೆದ  ಎ. ಎಂ. ರವಿ, ಡಿ. ಹೆಚ್, ಹುಸೇನ್ ಮೀಯ್ಯ ಸಾಬ್, ಹಾಗೂ ಎಸ್. ಸಿ. ಸಂತೋಷ್ ಕುಮಾರ್ ಅವರನ್ನು  ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.  ಕಾರ್ಯಕ್ರಮದ ನಿರೂಪಣೆಯನ್ನು  ನಿವೃತ ಉಪನ್ಯಾಸಕ ಜೆ. ದಾದಪೀರ್ ವಹಿಸಿದ್ದರು.  ನಿವೃತ್ತ ಪ್ರಧ್ಯಾಪಕರಾದ ನಂದ್ಯಾಲ್ , ವಿಶ್ರಾಂತ  ಕುಲಪತಿ ಎ.ಹೆಚ್. ರಾಜಾಸಾಬ್,   ಕರವೇ ಅಧ್ಯಕ್ಷ ಜಿ ಮಹೇಶ್ವರಪ್ಪ , ಶಶಿಕಲಾ ನಲ್ಕುದುರೆ ಸೇರಿದಂತೆ ಗ್ರಾಮಸ್ಥರು ಮುಖಂಡರುಗಳು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಉಪಸ್ಥಿತರಿದ್ದರು.

TAGGED:# Davangere#newschannagirifeaturedkannda rajothasava
Share This Article
Facebook Bluesky Copy Link Print
ByDvgsuddi
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Previous Article 22 ಕೆಜಿ ತೂಕದ ಏಲಕ್ಕಿ ಬಾಳೆ ಬೆಳೆದ ಆವರಗೆರೆಯ ಪ್ರಗತಿಪರ ರೈತ ಮಲ್ಲಿಕಾರ್ಜುನ
Next Article ಶಿಕ್ಷಕ ವೃತ್ತಿ ಅತ್ಯಮೂಲ್ಯವಾದ ವೃತ್ತಿ: ಸಂಗಮೇಶ್ ಗೌಡ್ರು
Leave a Comment

Leave a Reply Cancel reply

Your email address will not be published. Required fields are marked *

ಮಿಸ್ ಮಾಡ್ದೆ ಓದಿ

ಮೂರು ಡಿಸಿಎಂಗೆ ಹೈಕಮಾಂಡ್ ಒಲವು?

ಕೆಎಂಎಫ್ ಅಧ್ಯಕ್ಷಗಿರಿ ಬಾಲಚಂದ್ರ ಜಾರಕಿಹೊಳಿ ಪಾಲು ?

ಪಶು ಚಿಕಿತ್ಸಾಲಯ ಕಟ್ಟಡ ಗುದ್ದಲಿ ಪೂಜೆ

ನಾಳೆ ನೂತನ ಸಚಿವರಿಗೆ ಖಾತೆ ಹಂಚಿಕೆ‌

ಪಿ.ವಿ. ಸಿಂಧೂ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಸೃಷ್ಟಿಸಿದ ನೀನೇನೆ..

Categories

Dvgsuddi
dvgsuddi
Dvgsuddi Kannada | online news portal | Kannada news online

DvgSuddi

  • Home
  • ಪ್ರಮುಖ ಸುದ್ದಿ
    • ರಾಷ್ಟ್ರ ಸುದ್ದಿ
    • ರಾಜ್ಯ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More
    • ಚನ್ನಗಿರಿ
    • ಹರಿಹರ
    • ದಾವಣಗೆರೆ

Subscribe Newsletter

Subscribe to our newsletter to get our newest articles instantly!