Connect with us

Dvgsuddi Kannada | online news portal | Kannada news online

ಅಡಿಕೆಯ ಹೊಂಬಾಳೆ ತಿನ್ನುವ ರೋಗ ನಿಯಂತ್ರಣಕ್ಕೆ ಏನು ಮಾಡಬೇಕು ಗೊತ್ತಾ…?

ಪ್ರಮುಖ ಸುದ್ದಿ

ಅಡಿಕೆಯ ಹೊಂಬಾಳೆ ತಿನ್ನುವ ರೋಗ ನಿಯಂತ್ರಣಕ್ಕೆ ಏನು ಮಾಡಬೇಕು ಗೊತ್ತಾ…?

ಡಿವಿಜಿ ಸುದ್ದಿ, ದಾವಣಗೆರೆ: ಅಡಿಕೆಯಲ್ಲಿ ಹಿಂಗಾರ (ಹೊಂಬಾಳೆ) ತಿನ್ನುವ ಹುಳುಗಳು ಎಲ್ಲೆಡೆ ಕಾಣಿಸಿಕೊಂಡಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಹಾಗದ್ರೆ, ಈ ರೋಗ ನಿಯಂತ್ರಣಕ್ಕೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಅನ್ನುವುದರ ಸಲಹೆ ಸೂಚನೆ ಇಲ್ಲಿದೆ ನೋಡಿ..

ಅಡಿಕೆಯಲ್ಲಿ ಹಿಂಗಾರ ಬಿಚ್ಚಿ ಕಾಳುಕಟ್ಟುವ ಮೊದಲೇ ಕೀಟಗಳು ಆಕ್ರಮಿಸಿಕೊಳ್ಳುವುದರಿಂದ ಹಿಂಗಾರ ಸಂಪೂರ್ಣವಾಗಿ ನಾಶವಾಗುತ್ತಿದೆ. ಹಿಂಗಾರ ಕೊಲೆಟ್ರೊಟ್ರೈಕಮ್ ಗ್ಲಿಯೋರಿಯಾಯ್ಟಿಸ್ ಎಂಬ ಶಿಲೀಂದ್ರದ ಸೊಂಕಿಗೆ ಒಳಗಾದಾಗ ಈ ಬಾಧೆಯು ಕಂಡುಬರುತ್ತದೆ. ಹುಳುಗಳು ಹಿಂಗಾರದ ಎಸಳುಗಳನ್ನು ಕೆರೆದು ತಿನ್ನುವುದರ ಜೊತೆಗೆ ಅದರ ಹಿಕ್ಕೆಯಿಂದ ಗೂಡು ಕಟ್ಟಿಕೊಂಡು ಅದರಲ್ಲಿ ವಾಸಿಸುತ್ತವೆ.

ಗೊಂಚಲುಗಳ ಎಸಳುಗಳು ತುದಿಯಿಂದ ಬುಡದ ಕಡೆಗೆ ಒಣಗಿ ಹಳದಿಯಾಗಿ ನಂತರ ಕಂದುಬಣ್ಣಕ್ಕೆ ತಿರುಗಿ ಒಣಗುತ್ತವೆ. ತೀವ್ರ ಬಾಧೆಗೊಳಗಾದ ಹಿಂಗಾರದ ಹೆಣ್ಣು ಹೂಗಳು ಮತ್ತು ಮಿಗ್ಗುಗಳು ಉದುರುತ್ತವೆ. ಇದು ಮೊದಲ ಹಂತದಲ್ಲಿ ಕಾಣುವ ಹಿಂಗಾರ ಒಣಗು ರೋಗ. ನಂತರದ ಅವಧಿಯಲ್ಲಿ ಪೆಂಟಾಟೋಮಿಡ್ ಜಾತಿಯ ತಿಗಣಿಗಳು ಬಾಧೆಗೊಳಗಾದ ಕಾಯಿ ಹಾಗೂ ಮೊಗ್ಗುಗಳ ತೊಟ್ಟಿನ ಭಾಗದಲ್ಲಿ ಮಾಡಿದ ಸೂಜಿಯಿಂದ ಚುಚ್ಚಿದಂತಹ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ.

ರೋಗ ನಿಯಂತ್ರಣ ಕ್ರಮಗಳು
ಉತ್ತಮ ಗಿಡಗಳ ಸಂರಕ್ಷಣೆಗಾಗಿ ರೋಗ ಪೀಡಿತ ಹಿಂಗಾರನ್ನು ತೋಟದಿಂದ ತೆಗೆದು ನಾಶಪಡಿಸಬೇಕು. ಪ್ರತಿ ಲೀಟರ್ ನೀರಿಗೆ ಡೈಥೇನ್-ಎಂ-45ನ್ನು 3 ಗ್ರಾಂ ಬೆರೆಸಿ ಹಿಂಗಾರು ಅರಳುವ ಸಮಯದಲ್ಲಿ ಹಾಗೂ ಸುಮಾರು 25 ರಿಂದ 30 ದಿನಗಳ ನಂತರ ಮತ್ತೊಂದು ಬಾರಿ ಸಿಂಪಡಿಸಬೇಕು. ಹಿಂಗಾರ ಕೆರೆದು ತಿನ್ನುವ ಹುಳುಗಳ ನಿಯಂತ್ರಣಕ್ಕಾಗಿ ಶಿಲೀಂದ್ರ ನಾಶಕದ ಜೊತೆಯಲ್ಲಿ ಕ್ಲೋರೋಪೈರಿಪಾಸ್ 2 ಮಿ.ಲೀ ಅನ್ನು ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.

ಈ ಕ್ರಮಗಳನ್ನು ಸಾಮೂಹಿಕವಾಗಿ ಏಕಕಾಲದಲ್ಲಿ ಅನುಸರಿದರೆ ಅಡಿಕೆ ಬೆಳೆಯನ್ನು ಹುಳುಗಳಿಂದ ರಕ್ಷಿಸಬಹುದು.ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಸಲಹಾ ಮತ್ತು ಮಾಹಿತಿ ಕೇಂದ್ರ ದಾವಣಗೆರೆ ಸಂಪರ್ಕಿಸಬಹುದು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top