Connect with us

Dvgsuddi Kannada | online news portal | Kannada news online

ಶನಿವಾರ- ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಶನಿವಾರ- ರಾಶಿ ಭವಿಷ್ಯ

  • ಶನಿವಾರ- ರಾಶಿ ಭವಿಷ್ಯ ನವೆಂಬರ್-28,2020
  • ಸೂರ್ಯೋದಯ: 06:28, ಸೂರ್ಯಸ್ತ: 17:47
  • ಶಾರ್ವರಿ ನಾಮ ಸಂವತ್ಸರ
    ಕಾರ್ತಿಕ ಮಾಸ ದಕ್ಷಿಣಾಯಣ
  • ತಿಥಿ: ತ್ರಯೋದಶೀ – 10:20 ವರೆಗೆ
    ನಕ್ಷತ್ರ: ಭರಣಿ – 27:19+ ವರೆಗೆ
    ಯೋಗ: ವರಿಯಾನ್ – 09:23 ವರೆಗೆ
    ಕರಣ: ತೈತಲೆ – 10:20 ವರೆಗೆ ಗರಜ – 23:35 ವರೆಗೆ
  • ದುರ್ಮುಹೂರ್ತ: 06:28 – 07:13
    ದುರ್ಮುಹೂರ್ತ : 07:13 – 07:58
  • ರಾಹು ಕಾಲ: 09:00 – 10:30
    ಯಮಗಂಡ: 13:30 – 15:00
    ಗುಳಿಕ ಕಾಲ: 06:30- 08:00
  • ಅಮೃತಕಾಲ: 21:55 – 23:43
    ಅಭಿಜಿತ್ ಮುಹುರ್ತ: 11:45 – 12:30

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೇಷ:ನಿಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಗತಿ ಕಾಣಲಿದೆ . ನಿಮ್ಮ ಮಹತ್ವದ ಕೆಲಸದಲ್ಲಿ ಮತ್ತೊಬ್ಬರ ಹಸ್ತಕ್ಷೇಪದಿಂದ ಮುಜುಗುರ. ವೃತ್ತಿರಂಗದಲ್ಲಿ ಬಯಸದೇ ಧನಪ್ರಾಪ್ತಿ ವಾಗುವುದು.ನೀವು ನಿಮ್ಮ ಕೆಲಸದಲ್ಲಿ ನಿರಂತರ ಉತ್ಸಾಹ ಹಾಗೂ ಶ್ರದ್ಧೆ ದಿಂದ ಕೆಲಸ ಮಾಡುವಿರಿ. ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಉದ್ಯೋಗದಲ್ಲಿ ಒತ್ತಡವಿದ್ದರೂ ಪರಿಸ್ಥಿತಿಯನ್ನು ಜಾಣತನದಿಂದ ನಿಭಾಯಿಸುವಿರಿ. ಸಂಗಾತಿಯ ಜೀವನದಲ್ಲಿ ಅನೇಕ ಬದಲಾವಣೆಗಳು ಆಗಲಿವೆ. ನಿರುದ್ಯೋಗಿ ಮಗನಿಗೆ ಉದ್ಯೋಗ ಪ್ರಾಪ್ತಿ. ಹಿರಿಯರ ಸಲಹೆ ಸ್ವೀಕರಿಸುವುದು ಒಳ್ಳೆಯದು. ಖರ್ಚುವೆಚ್ಚಗಳು ಸಮ ಪ್ರಮಾಣದಲ್ಲಿ ಇರುವುದರಿಂದ ತೊಂದರೆ ಇಲ್ಲ. ಮನೆಯಲ್ಲಿ ಶುಭಮಂಗಲ ಕಾರ್ಯಗೆ ಸೂಚನೆ ಸಿಗಲಿದೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ವೃಷಭ:-
ಮಾನಸಿಕ ವೇದನೆ ಸಂಭವ. ಏಕಾಂಗಿತನದ ಓಡಾಟ ಭಯಭೀತಿ ಎದುರಿಸಲಿದ್ದೀರಿ. ಸಂಗಾತಿಯ ಮುನಿಸು, ಬಾಂಧವ್ಯ ಮತ್ತೆ ಬೆಸೆಯಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೊಸ ಉದ್ಯಮ ಪ್ರಾರಂಭಿಸುವುದು ಬೇಡ. ನಿಮ್ಮ ದೂರಾಲೋಚನೆಯಿಂದ ಹಮ್ಮಿಕೊಂಡ ಕಾರ್ಯದಲ್ಲಿ ತೊಂದರೆ ಅನುಭವಿಸುವಿರಿ. ಕೋರ್ಟ್‌, ಕಚೇರಿ ಕೆಲಸಗಳು ನಿಮ್ಮಂತೆ ಆಗುವವು. ಹೊಸ ನಿವೇಶನ ಖರೀದಿಸುವುದು ಸೂಕ್ತ ಸಮಯ. ಬಹುದಿನದ ನಿರೀಕ್ಷೆಯಿಂದ ಯಶಸ್ಸು ಸಾಧ್ಯ. ಬಹುದಿನದಿಂದ ಪ್ರೀತಿಸುತ್ತಿರುವ ಪ್ರೇಮಿಗಳ ಮದುವೆ ವಿಷಯ ಚರ್ಚೆ ಯಶಸ್ಸು ತರಲಿದೆ. ಆಸ್ತಿ ಮಾರಾಟ ವಿಳಂಬ ಸಾಧ್ಯತೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಮಿಥುನ:- ಪತಿ-ಪತ್ನಿ ಜೀವನದಲ್ಲಿ ಹೊಂದಾಣಿಕೆ ದಿಂದ ಹೊಸ ಮನೆ ಕಟ್ಟುವ ವಿಚಾರ ಯಶಸ್ಸು. ನೀವು ಎಷ್ಟೇ ತಿಳಿವಳಿಕೆಯುಳ್ಳವರಾದರೂ ಮಾತಾಪಿತೃ ಸಲಹೆ ಪಡೆಯಿರಿ. ಉದ್ಯೋಗಕ್ಕಾಗಿ ಆತ್ಮೀಯ ಸ್ನೇಹಿತರ ಸಲಹೆಯನ್ನು ಸ್ವೀಕರಿಸುವುದು ಒಳ್ಳೆಯದು. ರಾಜಕಾರಣಿಗಳು ಚಿಕ್ಕಪುಟ್ಟ ತಪ್ಪುಗಳಿಗೂ ಭಾರೀ ಬೆಲೆ ತೆರಬೇಕಾಗುವುದು. ವಿದೇಶ ಪ್ರವಾಸ ವಿಸಾ ಪಡೆಯುವುದರಲ್ಲಿ ಪ್ರಥಮ ಪ್ರಯತ್ನದಲ್ಲೇ ಯಶಸ್ಸು ಗಳಿಸುವಿರಿ. ಹೊಸದಾಗಿ ಪ್ರಾರಂಭಿಸಿರುವ ವ್ಯಾಪಾರ ವ್ಯವಹಾರದಿಂದ ಹೆಚ್ಚಿನ ತೊಂದರೆಯಿರುವುದಿಲ್ಲ ಧೈರ್ಯದಿಂದ ಮುಂದುವರೆಯಿರಿ. ಇಂದು ಬಹುದಿನದ ಸಾಲದ ಹಣ ಒದಗಿ ಬರುವುದು. ಮದ್ಯ ಸೇವನೆ ಹಾಗೂ ಧೂಮಪಾನದಿಂದ ಅನಾರೋಗ್ಯಕ್ಕೆ ಕಾರಣವಾಗುವುದು. ಇಂದು ದುಶ್ಚಟಗಳನ್ನು ಬಿಡಲು ಸೂಕ್ತ ಸಮಯ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಕಟಕ:- ವೃತ್ತಿ ಕ್ಷೇತ್ರದಲ್ಲಿ ಪ್ರಾಮಾಣಿಕತೆಯೇ ನಿಮ್ಮ ಯಶಸ್ಸಿಗೆ ಸೋಪಾನವಾಗಲಿದೆ. ಸ್ವಂತ ಪ್ರಯತ್ನದಿಂದ ನಿಮ್ಮ ಮಕ್ಕಳು ಉದ್ಯೋಗ ಕಂಡುಕೊಳ್ಳುವರು. ಸ್ವಂತ ಉದ್ಯಮಿ ಆಗಿ ಪ್ರಗತಿ ಕಾಣುವಿರಿ.ಕಮೀಷನ್‌ ಏಜೆಂಟ್‌ ವ್ಯವಹಾರಸ್ಥರಿಗೆ ಮಧ್ಯಮ ಫಲ. ಸರಕಾರಿ ನೌಕರರಾಗಿದ್ದರೆ ಉದ್ಯೋಗದಲ್ಲಿ ಬಡ್ತಿ ಹಾಗೂ ವರ್ಗಾವಣೆಯ ಭಾಗ್ಯ . ನಿಮ್ಮ ನಡಾವಳಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಿ. ದಿನಸಿ ,ಬಟ್ಟೆ, ಸಲೂನ್ ಹಾರ್ಡ್ವೇರ್ ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭ ಬರುವುದು. ಅತಿಲಾಭ ವ್ಯಾಮೋಹ ಕಾಡುವುದು ನಿಯಂತ್ರಿಸಿ. ನಿಮ್ಮನ್ನು ಸಂಗಾತಿ ಜೊತೆ ಅತಿಯಾಸೆಗೆ ನೂಕದಂತೆ ನೋಡಿಕೊಳ್ಳಿ. ಮಕ್ಕಳ ಮದುವೆ ವಿಳಂಬ ಸಾಧ್ಯತೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಸಿಂಹ:- ನೀವಾಗಿಯೇ ಸೃಷ್ಟಿಸಿಕೊಂಡಿದ್ದ ಗೊಂದಲಗಳು ಪತ್ನಿಯ ಮಾರ್ಗದರ್ಶನದಲ್ಲಿ ಪರಿಹಾರ. ಹಣಕಾಸಿನ ಸಮಸ್ಯೆಗಳು ತಾವಾಗಿಯೇ ಪರಿಹಾರ. ನೀವು ಆಸ್ತಿ ಪಾಲುದಾರಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ರಾಜಕಾರಣಿಗಳು ಸಾಮಾಜಿಕ ಜೀವನ ಅತ್ಯುತ್ತಮವಾಗಿದ್ದರೂ ಖಾಸಗಿ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ಅವುಗಳನ್ನು ಚಾಣಾಕ್ಷ ತನದಿಂದ ದೂರ ಮಾಡಿಕೊಳ್ಳುವಿರಿ. ದಾಯಾದಿಗಳ ನೆರವಿನಿಂದ ಚಿಂತೆಗಳು ದೂರಾಗುವುದು. ನಿಮ್ಮಿಂದ ನೂತನ ಕಾರ್ಯಗಳು ಪ್ರಾಯೋಗಿಕವಾಗಿ ಜಾರಿಗೆ ಬರಲಿವೆ. ಮಗನ ಮದುವೆ ವಿಷಯ ಪ್ರಸ್ತಾಪ ಮೂಡಲಿದೆ. ಹಳಸಿಹೋದ ಸಂಬಂಧ ಮತ್ತೊಮ್ಮೆ ಬಂಧುಗಳೊಡನೆ ಚರ್ಚೆಯಾಗುವುದು.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಕನ್ಯಾ:- ಮಕ್ಕಳ ಸಾಧನೆ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮುಂದಿನ ವ್ಯಾಸಂಗದ ಬಗ್ಗೆ ಚಿಂತನೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಭಾಗ್ಯೋದಯ. ಸರಕಾರದಿಂದ ಬರಬೇಕಾಗಿದ್ದ ಬಾಕಿ ಹಣ ವಿಳಂಬ ಸಾಧ್ಯತೆ. ನಿಮಗೆ ಸಿಗಬೇಕಾಗಿದ್ದ ಸೌಭಾಗ್ಯ ಬೇರೆಯವರ ಕೈಸೇರುವುದು. ಆರೋಗ್ಯದ ಕಡೆ ಗಮನವಿರಲಿ. ಆರ್ಥಿಕ ಪರಿಸ್ಥಿತಿ ಮಂದಗತಿಯಲ್ಲಿ ಸುಧಾರಿಸಲಿದೆ. ಪಾಲುದಾರಿಕೆಯಲ್ಲಿ ಹೆಚ್ಚಿನ ಶುಭಫಲಗಳು ದೊರೆಯುವ ನಿರೀಕ್ಷೆಯಲ್ಲಿದ್ದೀರಿ. ರಾಜಕೀಯ ರಂಗ ಪ್ರವೇಶಿಸುವುದು ಉತ್ತಮ. ಶಿಕ್ಷಕ ವೃತ್ತಿಯಲ್ಲಿ ಯಶಸ್ಸು ಕಂಡುಬರಲಿದೆ. ಮಕ್ಕಳ ಮದುವೆ ಯಶಸ್ಸು. ವಿಚ್ಛೇದನ ಪಡೆದ ಮಕ್ಕಳ ಮರುಮದುವೆ ಚಿಂತನೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ತುಲಾ:- ವ್ಯಾಪಾರ ವಹಿವಾಟು ಕಾರ್ಯಗಳು ನೀವು ಎಣಿಸಿದ ವೇಗದಲ್ಲಿ ಜರುಗುವುದಿಲ್ಲ. ನೆಗಡಿ, ಕೆಮ್ಮು ಮೊದಲಾದ ತೊಂದರೆಗಳು ಕಾಡುವ ಸಂಭವ ಮುಂಜಾಗ್ರತೆಯಾಗಿ ವೈದ್ಯರ ಸಲಹೆ ಪಡೆಯಿರಿ. ಸೋದರಿಯು ಆರ್ಥಿಕ ಸಹಾಯ ಕೋರಿ ನಿಮ್ಮ ಬಳಿಗೆ ಬರುವ ಸಂಭವ, ನಿರಾಕರಿಸದೇ ಸಹಾಯ ಮಾಡಿ ಕಳಿಸಿ. ದೂರದಿಂದ ಆತ್ಮೀಯರು ಬರುವರು. ಆಡುವ ಮಾತುಗಳು ನಿಯಂತ್ರಣದಲ್ಲಿಟ್ಟು ಕಾರ್ಯಗಳು ಸಫಲ ಮಾಡಿಕೊಳ್ಳಿ. ಭೋಜನದಲ್ಲಿ ಹಿತಮಿತವಾಗಿರಲಿ. ರಿಯಲ್ ಎಸ್ಟೇಟ್ ಉದ್ಯಮದಾರರು, ಮತ್ತು ವ್ಯಾಪಾರಸ್ಥರಿಗೆ ತೆರಿಗೆ ಅಧಿಕಾರಿಗಳು ಭೇಟಿ ಸಂಭವ. ನೇತ್ರ ಅಥವಾ ನರಸಂಬಂಧಿ ಸಮಸ್ಯೆಗಳಿಂದ ನರಳುವ ಸಾಧ್ಯತೆ. ನಿಮ್ಮನ್ನು ಶತ್ರುಗಳು ಕಾಡಬಹುದು.ದುಷ್ಟರ ಸ್ನೇಹ ವರ್ಗ ಹಾಗೂ ಬಂಧು ವರ್ಗದಿಂದ ದೂರವಿರಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ವೃಶ್ಚಿಕ:- ರಿಯಲ್ ಎಸ್ಟೇಟ್ ಉದ್ಯಮದಾರರು ಹಾಗೂ ಕೈಗಾರಿಕೋದ್ಯಮಿಗಳಿಗೆ ಆರ್ಥಿಕ ಮುಗ್ಗಟ್ಟು ಸಂಭವ. ಹಣಕಾಸಿನ ತೀವ್ರ ಎದುರಾಗುವುದು. ಚಿಂತಿಸದೆ ಹಿಡಿದ ಕಾರ್ಯ ಸಾಧಿಸಲು ಪ್ರಯತ್ನಿಸಿ. ಹಿರಿಯರ ಕಡೆಯಿಂದ ಸಕಾಲಿಕ ನೆರವು ಸಿಗುವುದು. ಅತಿವೃಷ್ಟಿ ಸಂಕಷ್ಟ ಎದುರಿಸುವಿರಿ. ಸಂಗಾತಿ ದೂರಾಗುವ ಸಂಭವ. ಮಕ್ಕಳ ಮದುವೆ ಕಾರ್ಯ ಅನಿರೀಕ್ಷಿತವಾಗಿ ಮುಂದೆ ಹೋಗುವ ಸಾಧ್ಯತೆ. ವಿಚ್ಛೇದನ ಪಡೆದ ಮಕ್ಕಳ ಮದುವೆ ಸಂಬಂಧ ಮುರಿದು ಬೀಳಬಹುದು. ಮಧುರ ಪದಾರ್ಥ, ಸಲೂನ್, ಬ್ಯೂಟಿ ಪಾರ್ಲರ್ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಅಳಿಯನ ನಡಾವಳಿಯಿಂದ ಬೇಸರ ಮೂಡುವುದು. ಸಂಕಷ್ಟಗಳಿಗೆ ಪರಿಹಾರ ವಿಳಂಬ ಕಂಡುಬರಲಿದೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಧನುಸ್ಸು:- ಹೈನುಗಾರಿಕೆ , ಭೂವ್ಯವಹಾರ ನಿಮ್ಮ ಪ್ರಯತ್ನಬಲದಿಂದ ಪ್ರಗತಿ ಕಾಣಲಿದೆ. ಉದ್ಯೋಗದಲ್ಲಿ ವರ್ಗಾವಣೆಯ ಪ್ರಯತ್ನ ಮಾಡಲಿದ್ದೀರಿ. ಪರಿಶ್ರಮದಿಂದಾಗಿಯೇ ನಿಮ್ಮ ಉದ್ಯಮದಲ್ಲಿ ಯಶಸ್ಸು ಕಾಣುವಿರಿ. ನಿಮ್ಮ ಗಟ್ಟಿ ನಿರ್ಧಾರ ಸಂಗಾತಿಯ ಮನಸ್ಸು ಒಗ್ಗೂಡಿಸುವುದು. ಮಂಗಳ ಕಾರ್ಯ ಮತ್ತು ಧಾರ್ಮಿಕ ಕಾರ್ಯಗಳು ಜರುಗುವವು. ಹೊಸ ವ್ಯವಹಾರದ ಚಟುವಟಿಕೆಗಳು ವಿಶೇಷವಾಗಿ ನಡೆಯಲಿವೆ. ಬಂಧುಗಳಿಂದ ಸಹಾಯ. ನಿಮ್ಮ ಸಾಧನೆ ಎಲ್ಲರೂ ಪ್ರಶಂಸಿಸುವರು. ನಡೆದಾಡುವಾಗ ಏಕಾಗ್ರತೆ ಇರಲಿ ಏಕೆಂದರೆ ಎಡವಿ ಬೀಳುವ ಸಂಭವ. ವಾಹನ ಸವಾರಿ ಮಾಡುವಾಗ ಎಚ್ಚರವಿರಲಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಮಕರ:- ರಾಜಕಾರಣಿಗಳು ಉತ್ತಮ ಭಾವನೆ ಹಾಗೂ ಮನಸ್ಸಿನಿಂದಾಗಿ ಎಲ್ಲರ ಪ್ರೀತಿ ಸಂಪಾದಿಸುವಿರಿ. ಇಂದು ನಿಮ್ಮ ಕನಸಿನ ಯೋಜನೆಗಳು ನನಸಾಗಲಿವೆ. ಹೊಸ ಮನೆ ಕಟ್ಟಲು ಬ್ಯಾಂಕ್‌ಗಳಿಂದ ವಿಶೇಷ ಆರ್ಥಿಕ ನೆರವಿನ ಭಾಗ್ಯ. ಯುವ ರಾಜಕೀಯ ಆಕಾಂಕ್ಷಿಗಳಿಗೆ ಸಮಾಜದಲ್ಲಿ ಸ್ಥಾನಮಾನ ಹೆಚ್ಚಲಿದೆ. ಎಲ್ಲರನ್ನು ಪ್ರೀತಿಯಿಂದ ಕಾಣುವಿರಿ. ಯಾರೊಂದಿಗೇ ಆಗಲಿ ಪಾಲುದಾರಿಕೆ ವ್ಯವಹಾರ ಬೇಡ .ಅತಿಯಾದ ಸಂಗಾತಿ ಜೊತೆ ಸಲುಗೆ, ಹಠಾತ್ತಾಗಿ ಮನಸ್ತಾಪ. ವಿದೇಶಕ್ಕೆ ಹೋಗುವ ಸೌಭಾಗ್ಯ ಕೂಡಿಬರಲಿದೆ.ಉದ್ಯೋಗಕ್ಕಾಗಿ ಬೇರೆ ಊರಿಗೆ ಹೋಗುವ ಸಂಭವ. ಆಕಸ್ಮಿಕವಾಗಿ ಮಕ್ಕಳ ಮದುವೆ ಚರ್ಚೆ ಬರಲಿದೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಕುಂಭ:-ಕಛೇರಿಯಲ್ಲಿನ ಲೆಕ್ಕಚಾರ ಆತಂಕ ಬರಲಿದೆ. ನಿಮ್ಮ ಪ್ರಕಾರ ಲೆಕ್ಕಾಚಾರ ಸರಿಯಾಗಿರುತ್ತದೆ, ಆದರೆ ಉನ್ನತಾಧಿಕಾರಿಗಳು ಬಂದಾಗ ಏರುಪೇರು ಸಂಭವ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುವುದು, ಕಸ್ಟಮ ಅಧಿಕಾರಿಗಳ ಬಗ್ಗೆ ಜಾಗ್ರತೆ ಇರಲಿ. ವೃತ್ತಿರಂಗದಲ್ಲಿ ಬದಲಾವಣೆ ಸಾಧ್ಯತೆ. ಅನಿರೀಕ್ಷಿತವಾಗಿ ಹೊಸ ಉದ್ಯೋಗ ಲಭಿಸುವುದು. ಪತ್ನಿಯ ಮಾರ್ಗದರ್ಶನ ಅನಿವಾರ್ಯ ಎಂಬುದನ್ನು ಮರೆಯದಿರಿ. ಜೀವನದ ಸಂಗಾತಿಯ ಉತ್ತಮ ಸಂಸ್ಕಾರ ಪ್ರಶಂಸೆಗೆ ಕಾರಣವಾಗುವುದು. ಅರ್ಥವಿಲ್ಲದ ಮಾತನಾಡಬೇಡಿ. ಹೊಸ ಜಮೀನು ಖರೀದಿಸುವಿರಿ. ನಿವೇಶನದಲ್ಲಿ ಮನೆ ಕಟ್ಟುವ ಯೋಜನೆ ಮಾಡುವಿರಿ. ಹೊಸ ವಾಹನ ಖರೀದಿಸುವಿರಿ. ಹಳೆ ಮನೆ ವಾಸ್ತು ಪ್ರಕಾರ ಪರಿವರ್ತಿಸು ವಿರಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಮೀನ:- ಉದ್ಯೋಗದಲ್ಲಿ ಹೆಚ್ಚಿನ ಒತ್ತಡಕ್ಕೊಳಗಾಗಬಹುದು.
ನಿಗದಿತ ಸಮಯದಲ್ಲಿ ಕೆಲಸ ಮುಗಿಸಲು ಅಸಾಧ್ಯ, ಇದರಿಂದ ಮೇಲಾಧಿಕಾರಿಗಳಿಂದ ಕಿರುಕುಳ. ಶುಭ ಮಂಗಳ ಕಾರ್ಯಕ್ಕೆ ನಿಮ್ಮ ಪ್ರಯತ್ನ ಯಶಸ್ವಿಯಾಗಲಿದೆ. ನೊಂದ ಬಂಧುಗಳಿಗೆ ಧನಸಹಾಯ ಮಾಡುವಿರಿ ಧನಸಹಾಯ ಮಾಡುವಿರಿ. ಸಂಗಾತಿ ಮನೆಗೆ ಸಾಂತ್ವನದ ಮಾತುಗಳನ್ನು ಆಡುವಿರಿ. ಯುವ ರಾಜಕಾರಣಿಗಳಿಗೆ ಜನಪ್ರಿಯತೆ ನಿಮ್ಮನ್ನು ಹುಡುಕಿಕೊಂಡ ಬರಲಿದೆ. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ವೃದ್ಧಿ. ವಾಹನಗಳನ್ನು ಚಲಿಸುವಾಗ ಎಡಭಾಗದಲ್ಲಿ ಸಾಗಿರಿ. ಶತ್ರುಗಳ ಬಗ್ಗೆ ಎಚ್ಚರಿಕೆಯಿರಲಿ. ಸಾಲಗಾರರಿಂದ ಕಿರುಕುಳ ಸಂಭವ. ಮಾತಾಪಿತೃ ಮಕ್ಕಳ ಆರೋಗ್ಯದ ಬಗ್ಗೆ ಸಮಸ್ಯೆ ಕಾಡಲಿದೆ. ವಿನಾಕಾರಣ ಮಕ್ಕಳ ಮದುವೆ ವಿಳಂಬ ಸಾಧ್ಯತೆ. ಆಸ್ತಿ ಮಾರಾಟದಲ್ಲಿ ವಿಘ್ನಗಳು ಮೂಡಲಿವೆ. ಪತಿ-ಪತ್ನಿ ಮಧ್ಯೆ ಪದೇಪದೇ ಮನಸ್ತಾಪ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top