Connect with us

Dvgsuddi Kannada | online news portal | Kannada news online

ವಿನಯ್ ಕುಲಕರ್ಣಿ ಬಂಧನ ಖಂಡನೀಯ:  ಜಯಮೃತ್ಯುಂಜಯ ಸ್ವಾಮೀಜಿ

ಪ್ರಮುಖ ಸುದ್ದಿ

ವಿನಯ್ ಕುಲಕರ್ಣಿ ಬಂಧನ ಖಂಡನೀಯ:  ಜಯಮೃತ್ಯುಂಜಯ ಸ್ವಾಮೀಜಿ

ಡಿವಿಜಿ ಸುದ್ದಿ, ಧಾರವಾಡ: ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶಗೌಡ ಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧಿಸಿರುವುದು  ಖಂಡನೀಯ, ಇದೊಂದು ರಾಜಕೀಯ ಪ್ರೇರಿತ ಘಟನೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕಣದಲ್ಲಿ ವಿನಯ್ ಕುಲಕರ್ಣಿಗೆ ನೋಟಿಸ್ ನೀಡದೆ,  ಏಕಾಏಕಿ ಕರೆದುಕೊಂಡು  ಹೋಗಿದ್ದಾರೆ. ಈ ಮೂಲಕ ರಾಜಕೀಯವಾಗಿ ತೇಜೋವಧೆ ಮಾಡವ ಪ್ರಯತ್ನ ನಡೆದಿದೆ. ಇದೊಂದು ರಾಜಕೀಯ ಪ್ರೇರಿತವಾಗಿದ್ದು, ಕುಲಕರ್ಣಿ ಯಾವುದೇ ತಪ್ಪು ಮಾಡಿಲ್ಲ ಎಂದರು.

ವಿನಯ್ ಕುಲಕರ್ಣಿ ಮನೆತನದ  ಇತಿಹಾಸ ಬಹಳ ದೊಡ್ಡದಿದೆ. ಈ ಪ್ರಕರಣದಲ್ಲಿ  ಕುಲಕರ್ಣಿ ತಪ್ಪು ಮಾಡಿಲ್ಲ ಅಂತಾ ಜನ ಹೇಳುತ್ತಿದ್ದಾರೆ. ಹೀಗಾಗಿ ಸಿಬಿಐ ಪಾರದರ್ಶಕವಾಗಿ ತನಿಖೆ ನಡೆಸಬೇಕು. ಈ ಮೂಲಕ ಸತ್ಯಾಸತ್ಯತೆ ಹೊರ ಬರಲಿದೆ ಎಂದು ತಿಳಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top