Connect with us

Dvgsuddi Kannada | online news portal | Kannada news online

ಬ್ಯಾಂಕ್ ಖಾಸಗಿಕರಣ ವಿರೋಧಿಸಿ ಮಾ.15,16ರಂದು ಮುಷ್ಕರ

ಪ್ರಮುಖ ಸುದ್ದಿ

ಬ್ಯಾಂಕ್ ಖಾಸಗಿಕರಣ ವಿರೋಧಿಸಿ ಮಾ.15,16ರಂದು ಮುಷ್ಕರ

ನವದೆಹಲಿ: ಬ್ಯಾಂಕ್ ಖಾಸಗಿಕರಣ ವಿರೋಧಿಸಿ ಯುನೈಟೆಡ್​ ಫೋರಂ ಆಫ್​ ಬ್ಯಾಂಕ್ ಯೂನಿಯನ್ಸ್​(ಯುಎಫ್​ಬಿಯು) ಮಾ. 15, 16ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ ನಡೆಸಲು ನಿರ್ಧರಿಸಿವೆ.

ಕೇಂದ್ರ ಬಜೆಟ್​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬ್ಯಾಂಕ್​ಗಳ ಖಾಸಗೀಕರಣ ಕುರಿತು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್​ ಅಧಿಕಾರಿ-ಸಿಬ್ಬಂದಿ ಈಗ ಖಾಸಗೀಕರಣ ವಿರೋಧಿಸಿ ಮುಷ್ಕರ ಕೈಗೊಳ್ಳಲು ಮುಂದಾಗಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್​ಗಳ ಖಾಸಗೀಕರಣ ಕುರಿತು ಬಜೆಟ್​ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್​ ಪ್ರಸ್ತಾಪಿಸಿದ್ದನ್ನು ವಿರೋಧಿಸಿ ಯುಎಫ್​ಬಿಯು ರಾಷ್ಟ್ರವ್ಯಾಪಿ ಬಂದ್​ಗೆ ಕರೆ ನೀಡಿದೆ. ಹೈದರಾಬಾದ್​ನಲ್ಲಿ 9 ಬ್ಯಾಂಕ್ ಸಂಘಟನೆಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಲ್​ ಇಂಡಿಯಾ ಬ್ಯಾಂಕ್​ ಎಂಪ್ಲಾಯಿಸ್​ ಅಸೋಸಿಯೇಷನ್​ (ಎಐಬಿಇಎ) ಜತೆಗೆ ಎಐಬಿಒಸಿ, ಎನ್​ಸಿಬಿಇ, ಎಐಬಿಒಎ, ಬಿಇಎಫ್​ಐ, ಐಎನ್​ಬಿಇಎಫ್​, ಐಎನ್​ಬಿಒಸಿ, ಎನ್​ಒಬಿಡಬ್ಲ್ಯು ಮತ್ತು ಎನ್​ಒಬಿಒ ಮುಂತಾದ ಸಂಘಟನೆಗಳು ಒಗ್ಗೂಡಿ ಈ ಬಂದ್​ಗೆ ನಿರ್ಧರಿಸಿವೆ.

ಹೈದರಾಬಾದ್​ನಲ್ಲಿ ನಡೆದ ಸಭೆಯಲ್ಲಿ ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿರುವ ಐಡಿಬಿಐ ಬ್ಯಾಂಕ್​ ಹಾಗೂ ಇನ್ನೂ ಎರಡು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್​ಗಳ ಖಾಸಗೀಕರಣ, ಎಲ್​ಐಸಿ ಬಂಡವಾಳ ಹಿಂದೆಗೆತ, ಜನರಲ್​ ಇನ್ಶೂರೆನ್ಸ್ ಕಂಪನಿ ಖಾಸಗೀಕರಣ ಇತ್ಯಾದಿಗಳು ಸಾರ್ವಜನಿಕ ಕ್ಷೇತ್ರದ ಕಂಪನಿಗಳಿಗೆ ಮಾರಕ. ಹೀಗಾಗಿ ಫೆ. 19ರಂದು ಎಲ್ಲ ರಾಜ್ಯಗಳ ರಾಜಧಾನಿಯಲ್ಲಿ ಧರಣಿ ನಡೆಸಲಾಗುವುದು. ಬಳಿಕ ಫೆ. 20ರಿಂದ ಮಾ. 10ರವರೆಗೆ ಎಲ್ಲ ರಾಜ್ಯ, ಜಿಲ್ಲೆ, ನಗರಗಳಲ್ಲಿ ಧರಣಿಗಳನ್ನು ನಡೆಸಿ, ಮಾರ್ಚ್​ 15 ಮತ್ತು 16ರಂದು ಎರಡು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಸಲಿವೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top