Connect with us

Dvgsuddi Kannada | online news portal | Kannada news online

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಇಂದು ಮೀಟಿಂಗ್; ಶಾಲೆ ಆರಂಭಕ್ಕೆ ಸಿಗಲಿದ್ಯಾ ಗ್ರೀನ್ ಸಿಗ್ನಲ್ ..?

ಪ್ರಮುಖ ಸುದ್ದಿ

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಇಂದು ಮೀಟಿಂಗ್; ಶಾಲೆ ಆರಂಭಕ್ಕೆ ಸಿಗಲಿದ್ಯಾ ಗ್ರೀನ್ ಸಿಗ್ನಲ್ ..?

ಡಿವಿಜಿ ಸುದ್ದಿ, ಬೆಂಗಳೂರು : ಕೊರೊನಾ ಲಾಕ್ ಡೌನ್ ನಂತರ ಶಾಲೆಗಳ ಆರಂಭ ವಿಚಾರದಲ್ಲಿ ಈಗಾಗಲೇ ಅನೇಕ ಸಭೆಗಳು ನಡೆದಿವೆ. ಈ ಎಲ್ಲ ಸಭೆಯಲ್ಲಿ ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವುದು ಬೇಡ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಇಂದು ಮತ್ತೊಂದು ಹಂತದ ಸಭೆ ನಡೆಯಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಅನ್ಬಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಶಾಲಾ ಆರಂಭ ಕುರಿತಂತೆ ಇವತ್ತಾದ್ರೂ  ಗ್ರೀನ್ ಸಿಗ್ನಲ್ ಸಿಗುತ್ತಾ ಎಂಬ ಕುತೂಹಲ ಮೂಡಿದೆ.

ಇಂದು ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದಂತ ಅನ್ಬಕುಮಾರ್ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ, ಆಯುಕ್ತರ ಕಚೇರಿಯಲ್ಲಿ ನಡೆಯಲಿದೆ. ಅಲ್ಲದೇ ಇಂದು ಖಾಸಗೀ ಶಾಲೆಗಳ ಒಕ್ಕೂಟದವರೊಂದಿಗೂ ಚರ್ಚೆ ಕೂಡ ಶಾಲಾ ಆರಂಭ ಕುರಿತಂತೆ ನಡೆಯಲಿದೆ. ಶಾಲೆ ಆರಂಭಿಸಲು ಖಾಸಗೀ ಶಾಲೆಗಳಲ್ಲಿ ಎಲ್ಲಾ ರೀತಿಯ ಅನುಕೂಲ ವ್ಯವಸ್ಥೆ ಇದೆಯಾ ಅನ್ನೋ ಕುರಿತಂತೆಯೂ ಚರ್ಚೆ ನಡೆಯಲಿದೆ. ಈ ಸಭೆಯ ನಂತರ ಶಾಲೆ ಆರಂಭದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top