Connect with us

Dvgsuddi Kannada | online news portal | Kannada news online

ರೈತರಿಗೆ ಸಿಹಿ ಸುದ್ದಿ: 24 ಗಂಟೆಯೊಳಗೆ ಟಿಸಿ ದುರಸ್ತಿಗೆ ಕ್ರಮ; ಇಂಧನ ಸಚಿವ ಸುನೀಲ್ ಕುಮಾರ್

ಪ್ರಮುಖ ಸುದ್ದಿ

ರೈತರಿಗೆ ಸಿಹಿ ಸುದ್ದಿ: 24 ಗಂಟೆಯೊಳಗೆ ಟಿಸಿ ದುರಸ್ತಿಗೆ ಕ್ರಮ; ಇಂಧನ ಸಚಿವ ಸುನೀಲ್ ಕುಮಾರ್

ಬೆಂಗಳೂರು: ರಾಜ್ಯದಲ್ಲಿ160 ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಸ್ಥಾಪಿಸಲಾಗಿದೆ.  24 ಗಂಟೆಯೊಳಗೆ  ಟಿಸಿ ದುರಸ್ತಿಪಡಿಸಲು ಇಲಾಖೆಯಲ್ಲಿ ವಿಶೇಷ ಆ್ಯಪ್ ರೂಪಿಸಲಾಗುವುದು  ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಇಂದು ವಿಧಾನಸಭೆ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಸಚಿವರು, ಇದರಿಂದ ಕೆಟ್ಟು ಹೋಗಿರುವ ಟಿಸಿಗಳು ಯಾವಾಗ ದುರಸ್ತಿಯಾಗುತ್ತದೆ..? ಯಾವಾಗ ಮರು ಪ್ರತಿಷ್ಠಾಪಿಸಲಾಗುತ್ತದೆ ಎಂಬ ವಿವರಗಳನ್ನು ರೈತರು, ಜನಸಾಮಾನ್ಯರು ಕುಳಿತ ಕಡೆಯಿಂದಲೇ ಅರಿಯಬಹುದು ಎಂದರು.

ಇನ್ನು ರಾಜ್ಯದಲ್ಲಿ ಇಂಧನ ವಲಯವನ್ನು  ಖಾಸಗಿಕರಣ ಮಾಡುವುದಿಲ್ಲ. ಆ ಉದ್ದೇಶವೂ ಇಲ್ಲ.ಕೈಗಾರಿಕೋದ್ಯಮಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸಲು ಸರ್ಕಾರ ಗಂಭೀರ ಪ್ರಯತ್ನ ಮಾಡಿದೆ. ವಿದ್ಯುತ್ ವಲಯವನ್ನು ರಾಜ್ಯದಲ್ಲಿ ಖಾಸಗೀಕರಿಸಲಾಗುತ್ತದೆ ಎಂಬುದು ಕೇವಲ ಊಹಾಪೋಹಾ ಎಂದು ಸಚಿವರು ಸ್ಪಷ್ಟಪಡಿಸಿದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top