Connect with us

Dvgsuddi Kannada | online news portal | Kannada news online

ಕೇಂದ್ರ ಸರ್ಕಾರದ ಕೃಷಿ ಮಸೂದೆ ಪ್ರತಿ ಹರಿದು ಹಾಕಿದ ದೆಹಲಿ ಸಿಎಂ ಕೇಜ್ರಿವಾಲ್ ..!

ರಾಷ್ಟ್ರ ಸುದ್ದಿ

ಕೇಂದ್ರ ಸರ್ಕಾರದ ಕೃಷಿ ಮಸೂದೆ ಪ್ರತಿ ಹರಿದು ಹಾಕಿದ ದೆಹಲಿ ಸಿಎಂ ಕೇಜ್ರಿವಾಲ್ ..!

ನವದೆಹಲಿಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರೂ ಕೃಷಿ ಕಾಯ್ದೆಗಳನ್ನು ವಿರೋಧಿಸಿರುವ  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಸೂದೆ ಪ್ರತಿಯನ್ನು ದೆಹಲಿ ವಿಧಾನಸಭೆಯಲ್ಲಿ ಹರಿದು ಹಾಕಿದ್ದಾರೆ.

ಕೊರೋನಾ ಸಂಕಷ್ಠದ ಸಂದರ್ಭದಲ್ಲಿ ಕೃಷಿ ಕಾಯ್ದೆಗಳನ್ನು  ತರಾತುರಿಯಲ್ಲಿ ಜಾರಿಮಾಡುವ ಅಗತ್ಯವೇನಿತ್ತು ಪ್ರಶ್ನಿಸಿದ್ದಾರೆ. ಈ ಬ್ರಿಟೀಷರಿಗಿಂತ ಕೆಟ್ಟವರಾಗಬಾರದು ಎಂದು ಕಟು ಶಬ್ಧಗಳಿಂದ ಟೀಕಿಸಿದ್ದಾರೆ.  ಈ ಕಾನೂನುಗಳನ್ನು ಬಿಜೆಪಿಯ ಚುನಾವಣೆ ಫಂಡ್‌ಗಾಗಿ ಮಾಡಲಾಗಿದೆ. ರೈತರಿಗಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

2 ಡಿಗ್ರಿ ಸೆಲ್ಸಿಯಸ್ ಚಳಿಯಲ್ಲಿ ರಸ್ತೆಯಲ್ಲಿ ಕುಳಿತಿರುವ ರೈತರನ್ನು ನೋಡಿದರೆ ನೋವಾಗುತ್ತದೆ. ನಾನು ಮೊದಲು ಈ ದೇಶದ ನಾಗರಿಕ, ಆಮೇಲೆ ಮುಖ್ಯಮಂತ್ರಿ ಎಂದಿರುವ ಕೇಜ್ರಿವಾಲ್, ರೈತರ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಆಮ್ ಆದ್ಮಿ ಪಕ್ಷದ ಶಾಸಕರು ಸಹ ಕೃಷಿ ಕಾಯ್ದೆಯ ಪ್ರತಿಗಳನ್ನು ಹರಿದಿದ್ದಾರೆ. ಜೊತೆಗೆ, ಕೇಂದ್ರದ ಕೃಷಿ ಕಾಯ್ದೆಗೆ ಪ್ರತಿಕೂಲವಾಗಿ ಮೂರು ಹೊಸ ಮಸೂದೆಗಳನ್ನ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಈ ಮೂಲಕ ಕೇಂದ್ರದ ಕಾಯ್ದೆಗಳಿಗೆ ಪ್ರತಿಯಾಗಿ ಹೊಸ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದ ಪಂಜಾಬ್, ರಾಜಸ್ಥಾನ ಬಳಿಕ ದೆಹಲಿ ಮೂರನೇ ರಾಜ್ಯವಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

Advertisement

ದಾವಣಗೆರೆ

Advertisement
To Top