Connect with us

Dvgsuddi Kannada | online news portal | Kannada news online

ಮಾಜಿ ಶಾಸಕ ಕೆ.ಮಲ್ಲಪ್ಪನವರ ನಿಧನಕ್ಕೆ ಎಸ್ ಎಸ್,  ಎಸ್ ಎಸ್ ಎಂ ಸಂತಾಪ

ದಾವಣಗೆರೆ

ಮಾಜಿ ಶಾಸಕ ಕೆ.ಮಲ್ಲಪ್ಪನವರ ನಿಧನಕ್ಕೆ ಎಸ್ ಎಸ್,  ಎಸ್ ಎಸ್ ಎಂ ಸಂತಾಪ

ಡಿವಿಜಿ ಸುದ್ದಿ, ದಾವಣಗೆರೆ: ಹಿರಿಯ ಕಾಂಗ್ರೆಸ್ ಮುಖಂಡರು, ಮಾಜಿ ಶಾಸಕ  ಕೆ.ಮಲ್ಲಪ್ಪ ಅವರ  ನಿಧನಕ್ಕೆ ಮಾಜಿ ಸಚಿವ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಲ್ಲಪ್ಪನವರು ಸರಳ ಸಜ್ಜನಿಕೆಯ ಒಬ್ಬ ಆದರ್ಶ ರಾಜಕಾರಣಿ, ಒಬ್ಬ ಧೀಮಂತ ಹಿಂದುಳಿದ ವರ್ಗಗಳ ನಾಯಕರಾಗಿದ್ದು,  ದೇವರಾಜ್ ಅರಸ್ ಅವರ ಅಪ್ಪಟ್ಟ ಅಭಿಮಾನಿಗಳಾಗಿ ಅವರ ಹಾಕಿದ್ದ ಮಾರ್ಗದರ್ಶನದಲ್ಲೇ ನಡೆಯುತ್ತಿದ್ದರು.  ಮಲ್ಲಪ್ಪನವರ ನಿಧನ ದಾವಣಗೆರೆ ಜಿಲ್ಲೆಗೆ ತುಂಬಲಾರದ ನಷ್ಟ ಎಂದು ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಕಂಬನಿ ಮಿಡಿದಿದ್ದಾರೆ.

ಅಪ್ಪಟ ಗಾಂಧಿವಾದಿ, ಸಾವಿರಾರು ಕ್ರೀಡಾಪಟುಗಳ ಪ್ರೋತ್ಸಾಹಕರಾಗಿದ್ದ, ನಮ್ಮೆಲ್ಲರ ಮಾರ್ಗದರ್ಶಕರಾಗಿದ್ದ ಹಿರಿಯ ಮುತ್ಸದ್ದಿ ರಾಜಕಾರಣಿ ಮಾಜಿ ಶಾಸಕ  ಕೆ.ಮಲ್ಲಪ್ಪನವರಂತಹ ಸರಳ ಸಜ್ಜನಿಕೆಯ ರಾಜಕಾರಣಿಯನ್ನು ಕಳೆದುಕೊಂಡಿರುವುದು ತುಂಬಾ ದುಃಖಕರ ಎಂದು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top