ದಾವಣಗೆರೆ: ದಾವಣಗೆರೆ ನಗರ ಉಪವಿಭಾಗ-2 ರ ವ್ಯಾಪ್ತಿಯ ಯರಗುಂಟ ವಿತರಣಾ ಕೇಂದ್ರದಿಂದ ಹೊರುಡುವ ಎಫ್-6 ಶಿವಾಲಿ, ಎಫ್-7 ಶಿವನಗರ ಮತ್ತು ಎಫ್-16 ಎಸ್ಜೆಎಂ, ಎಸ್ಟಿಪಿ ಮಾರ್ಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಡಿ.14 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಸ್ಪಿಎಸ್ ನಗರ , ಬಿಎನ್ -1 ಲೇಔಟ್ , ಭಾಷಾ ನಗರ , ಚೌಡೇಶ್ವರಿ ನಗರ , ಗಾಂಧಿನಗರ , ಶಿವನಗರ ,ಎಸ್ಎಸ್ಎಂ ನಗರ , ಬಿ ಡಿ ಲೇಔಟ್ , ಬಿಸ್ಮಿಲ್ಲಾ ಲೇಔಟ್ , ಹೆಗ್ಡೆ ನಗರ , ಮುಸ್ತಫಾ ನಗರ , ಅಜಾದ್ ನಗರ ,ಭಾಷಾ ನಗರ ಮೇನ್ ರೋಡ್ .ಎಸ್ಜೆಎಂ ನಗರ 1 ನೇ ಕ್ರಾಸ್ ನಿಂದ 16 ನೇ ಕ್ರಾಸ್ ವರೆಗೆ , ಸೇವಾದಳ ಕಾಲೋನಿ , ಹೊಸ ಕ್ಯಾಂಪ್ , ಬಿಎನ್ ಲೇಔಟ್,ಮಾಗನಹಳ್ಳಿ ಲೇಔಟ್ ಸುತ್ತಮುತ್ತ, ಕೊಂಡಜ್ಜಿ ರೋಡ್ ವಿಜಯನಗರ ಬಡಾವಣೆ , ಎಸ್ಎಂಕೆ ನಗರ 2 ನೇ ಹಂತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಕೆ.ಟಿ.ಜೆ ಫೀಡರ್ ವ್ಯಾಪ್ತಿಯ ಕೆ.ಟಿ.ಜೆ. ನಗರ 1 ಮತ್ತು 2ನೇ ಕ್ರಾಸ್, ಶಿವಪ್ಪ ಸರ್ಕಲ್, ಸಿದ್ದಮ್ಮ ಪಾರ್ಕ್, ಮುರಘರಾಜೇಂದ್ರ ಮಠ, ಕ್ರೋಮ್ ಶಾಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.



