ದಾವಣಗೆರೆ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಕ್ಷಣಗಣನೆ ಆರಂಭವಾಗಿದೆ. ಶಿವಕುಮಾರ್ ಸಂಪುಟ ಸೇರಲು ಭಾರೀ ಪೈಪೋಟಿ ಶುರುವಾಗಿದೆ. ಮೊದಲ ಬಾರಿ ಶಾಸಕನಾದ್ರೂ ಸಚಿವ ಸ್ಥಾನ ಮೇಲೆ ಸಮರ್ಥ್ ಶಾಮನೂರು ಕಣ್ಣಿಟ್ಟಿದ್ದಾರೆ. ಈ ಬಗ್ಗೆ ಸ್ವತಃ ಸಮರ್ಥ್ ಮಾಧ್ಯಮ ಮುಂದೆ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ; ಸಮರ್ಥ್ ಶಾಮನೂರು
ಹಿರಿಯ ನಾಯಕರಾಗಿದ್ದ ಶಾಮನೂರು ಶಿವಶಂಕರಪ್ಪ (Shamanur Shivashankarappa) ನಿಧನ ನಂತರ ನಡೆದ ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುವ ಶಾಮನೂರು ಮೊಮ್ಮಗ ಸಮರ್ಥ ಶಾಮನೂರು ಮೊದಲ ಪ್ರಯತ್ನದಲ್ಲಿಯೇ ಪ್ರಯಾಸದ ಗೆಲುವು ಸಾಧಿಸಿದ್ದು, ತಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ.
ಸಚಿವ ಸ್ಥಾನ ಸಿಕ್ಕರೆ ನಾನು ಹಿಂದೆ ಸರಿಯಲ್ಲ. ಸಚಿವ ಸ್ಥಾನದಿಂದ ಇನ್ನಷ್ಟು ಅನುದಾನ ತಂದು ಕೆಲಸ ಮಾಡೋದಕ್ಕೆ ಅನುಕೂಲ ಆಗುತ್ತೆ
– ಸಮರ್ಥ್ ಶಾಮನೂರು, ಶಾಸಕ
ಹೈಕಮಾಂಡ್ಗೆ ಬಿಟ್ಟಿದ್ದು
ಡಿಕೆ ಶಿವಕುಮಾರ್ ನೇತೃತ್ವದ ನೂತನ ಕ್ಯಾಬಿನೆಟ್ ರಚನೆ ಹೊತ್ತಲ್ಲೇ ನೂತನ ಶಾಸಕ ಸಮರ್ಥ ಶಾಮನೂರು ತಮ್ಮ ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದ್ದಾರೆ.ಸಚಿವ ಸ್ಥಾನ ಕೊಡೋದು ಬಿಡೋದು ಹೈಕಮಾಂಡ್ಗೆ ಬಿಟ್ಟಿದ್ದು, ಸಚಿವ ಸ್ಥಾನ ಕೊಟ್ಟರೆ ಹಿಂದೆ ಸರಿಯಲ್ಲ, ಸಚಿವ ಸ್ಥಾನ ಇದ್ದರೆ ಕೆಲಸ ಮಾಡಲು ಸಹಕಾರ ಆಗುತ್ತದೆ ಎಂದಿದ್ದಾರೆ
ಆಡಿಯೋ ವೈರಲ್, ಸಮರ್ಥ್ ಹೇಳಿದ್ದೇನು?
ಇನ್ನು ದಾವಣಗೆರೆ ದಕ್ಷಿಣ ಉಪ ಚುನಾವಣೆ ಕುರಿತಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಮೊಹಮ್ಮದ್ ಸಿರಾಜ್ ಆಡಿಯೋ ವೈರಲ್ ವಿಚಾರಕ್ಕೆ ಸಮರ್ಥ ಪ್ರತಿಕ್ರಿಯಿಸಿದ್ದು. ಚುನಾವಣೆ ಸಮಯದಲ್ಲಿ ಇದೆಲ್ಲ ಓಪನ್ ಸಿಕ್ರೇಟ್ ಆಗಿತ್ತು ಎಂದಿದ್ದಾರೆ. ಪ್ರತಿ ಚುನಾವಣೆಯಲ್ಲಿ ಎಲ್ಲ ಪಕ್ಷಗಳಲ್ಲಿ ಎ ಟೀಂ, ಬಿ ಟೀಂ ಅಂತಾ ಇರುತ್ತದೆ. ಅಭ್ಯರ್ಥಿ ಘೋಷಣೆ ಬಳಿಕ ಎಲ್ಲರೂ ಒಗ್ಗೂಡಿ ಇರ್ತಾರೆ. ಆಡಿಯೋ ಕ್ಲಿಪ್ನಲ್ಲಿ ಬಿಜೆಪಿ ಅಭ್ಯರ್ಥಿ ಹೆಸರು ಹೇಳಿ ಮಾತನಾಡಿದ್ದಾರೆ. ಷಡ್ಯಂತ್ರ ನಡೀತಿದೆ ಎಂದು ಕ್ಲೀಯರ್ ಆಗಿತ್ತು ಎಂದಿದ್ದಾರೆ.
ತನಿಖೆ ಮಾಡಿ ಹೈಕಮಾಂಡ್ ಕ್ರಮ ಕೈಗೊಳ್ಳಲಿ
ಆಡಿಯೋ ಬಗ್ಗೆ ಹೈಕಮಾಂಡ್ ತನಿಖೆ ಮಾಡಿಕ್ರಮ ಕೈಗೊಳ್ಳಲಿ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತೆ. ನಾನು ರಾಜಕೀಯಕ್ಕೆ ಹೊಸಬ ಇರಬಹುದು, ಆದರೆ ಷಡ್ಯಂತ್ರ ಮಾಡೋದು ಬಿಡಿ. ಏನೇ ಮಾಡಿದರೂ ತಾಯಿ ದುಗ್ಗಮ್ಮನೇ ನೋಡಿಕೊಳ್ತಾರೆ ಎಂದರು.



