Connect with us

Dvgsuddi Kannada | online news portal | Kannada news online

ದಾವಣಗೆರೆ: ಮಾಯಕೊಂಡದಲ್ಲಿ ಈ ಬಾರಿ ಕಾಂಗ್ರೆಸ್ ಗೆದ್ದೇ ಗೆಲ್ಲಲಿದೆ ಎಂದು ಒಂದು ಎಕರೆ ಅಡಿಕೆ ತೋಟ ಪಣಕ್ಕೆ ಇಟ್ಟ ಭೂಪ..!

ದಾವಣಗೆರೆ

ದಾವಣಗೆರೆ: ಮಾಯಕೊಂಡದಲ್ಲಿ ಈ ಬಾರಿ ಕಾಂಗ್ರೆಸ್ ಗೆದ್ದೇ ಗೆಲ್ಲಲಿದೆ ಎಂದು ಒಂದು ಎಕರೆ ಅಡಿಕೆ ತೋಟ ಪಣಕ್ಕೆ ಇಟ್ಟ ಭೂಪ..!

ದಾವಣಗೆರೆ; ಜಿಲ್ಲೆಯ ಮಾಯಕೊಂಡ ವಿಧಾನಸಭೆ ಮೀಸಲು (ಎಸ್ಸಿ) ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಸಾಧಿಸಲಿದೆ ಎಂದು ಕಾಂಗ್ರೆಸ್ ಪಕ್ಷದ ಅಭಿಮಾನಿಯೊಬ್ಬ ತನ್ನ ಒಂದು ಎಕರೆ ಅಡಿಕೆ ತೋಟವನ್ನು ಪಣಕ್ಕೆ ಇಟ್ಟಿದ್ದಾನೆ.

ಚನ್ನಗಿರಿ ತಾಲ್ಲೂಕಿನ ಕವಳಿ ತಾಂಡದ ನಾಗರಾಜ್ ನಾಯ್ಕ್ ಈ ಸವಾಲು ಹಾಕಿದ ವ್ಯಕ್ತಿಯಾಗಿದ್ದಾರೆ. ಮಾಯಕೊಂಡ ವಿಧಾನಸಭಾ ಕ್ಷೇತ್ರವು ದಾವಣಗೆರೆ, ಮಾಯಕೊಂಡ, ಚನ್ನಗಿರಿ ತಾಲ್ಲೂಕಿನ ಸ್ವಲ್ಪ ಭಾಗ ಒಳಗೊಂಡಿದೆ. ಈ ಕ್ಷೇತ್ರವು ಮೀಸಲು ಕ್ಷೇತ್ರವಾಗುದ್ದು, ಕಾಂಗ್ರೆಸ್ ನಿಂದ ಬಸವಂತಪ್ಪ, ಬಿಜೆಪಿಯಿಂದ ಬಸವರಾಜ ನಾಯ್ಕ್ , ಜೆಡಿಎಸ್ ನಿಂದ ಆನಂದಪ್ಪ ಕಣದಲ್ಲಿದ್ದಾರೆ. ಇವರ ಜೊತೆಗೆ ಪಕ್ಷೇತರ ಅಭ್ಯರ್ಥಿಗಳಾಗಿ ಅನೇಕರು ಕಣದಲ್ಲಿದ್ದಾರೆ. ಕಳೆದ ಬಾರಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಕಾಂಗ್ರೆಸ್ ಗೆದ್ದೆ ಗೆಲ್ಲಲಿದೆ ಎಂದು ನಾಗರಾಜ ನಾಯ್ಕ್ ಒಂದು ಎಕರೆ ಅಡಿಕೆ ತೋಟ ಪಣಕ್ಕೆ ಇಟ್ಟಿದ್ದಾರೆ.

ನನಗೆ ವಿಶ್ವಾಸವಿದೆ, ಕಾಂಗ್ರೆಸ್ ನೂರಕ್ಕೆ ನೂರಷ್ಟು ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಗೆಲ್ಲುವುದಿಲ್ಲ ಎನ್ನುವವರು ಯಾರಾದರೂ ಎದುರಾಳಿಗಳು ಸವಾಲು ಸ್ವೀಕರಿಸಿ ಬನ್ನಿ, ನನ್ನ ಒಂದು ಅಡಿಕೆ ತೋಟ ಪಣಕ್ಕೆ ಇಟ್ಟಿದ್ದಾನೆ. ಈ ಬಗ್ಗೆ ಅಗ್ರಿಮೆಂಟ್ ಮಾಡೋಣ ಎಂದಿದ್ದಾರೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top