Connect with us

Dvgsuddi Kannada | online news portal | Kannada news online

ದಾವಣಗೆರೆ: KSRTC ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸ್ಥಳ, ಮಳಿಗೆ ಪರವಾನಿಗೆ ಪಡೆಯಲು ಅರ್ಜಿ ಆಹ್ವಾನ

ದಾವಣಗೆರೆ

ದಾವಣಗೆರೆ: KSRTC ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸ್ಥಳ, ಮಳಿಗೆ ಪರವಾನಿಗೆ ಪಡೆಯಲು ಅರ್ಜಿ ಆಹ್ವಾನ

ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ವಿಭಾಗದ ವ್ಯಾಪ್ತಿಗೆ ಬರುವ ಹರಿಹರ ಬಸ್ ನಿಲ್ದಾಣದ ದ್ವಿ-ಚಕ್ರ ವಾಹನ ನಿಲ್ದಾಣ (ತೆರೆದ ಸ್ಥಳ 03 ವರ್ಷ) ಹಾಗೂ ಮಲೆಬೆನ್ನೂರು ಜನರಲ್ ಮಳಿಗೆ ಸಂಖ್ಯೆ-01ಕ್ಕೆ (ಶಾಶ್ವತ ಸ್ಥಳ 05 ವರ್ಷ) ಪರವಾನಗಿದಾರರನ್ನು ಆಯ್ಕೆ ಮಾಡಲು ಸಂಧಾನದ ಮೂಲಕ (ಮಾತುಕತೆಯ ಮೂಲಕ) ಅರ್ಜಿ ಆಹ್ವಾನಿಸಲಾಗಿದೆ.

ಈ ಬಗ್ಗೆ ಮಾಹಿತಿಯನ್ನು ನಿಗಮದ ವೆಬ್‌ಸೈಟ್ ksrtc.karnataka.gov.in ನಿಂದ ದಿನಾಂಕ: 01.03.2023ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ‌ ವಿವರಗಳಿಗಾಗಿ ವಿಭಾಗೀಯ ಕಛೇರಿ, ಕ.ರಾ.ರ.ಸಾ.ನಿಗಮ, ದಾವಣಗೆರೆ ವಿಭಾಗ –
577002 ಇಲ್ಲಿ ಕಛೇರಿ ಅವಧಿಯಲ್ಲಿ ಸಂಪರ್ಕಿಸಲು ಕೋರಲಾಗಿದೆ. ದೂರವಾಣಿ ಸಂಖ್ಯೆ: ವಿಭಾಗೀಯ ಸಂಚಾರ ಅಧಿಕಾರಿಗಳು – 7760990452, ಸಹಾಯಕ
ಸಂಚಾರ ಅಧೀಕ್ಷಕರು-7022030183 ಸಂಪರ್ಕಿಸಿ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top