ದಾವಣಗೆರೆ: ಜಿಲ್ಲಾ ಮಟ್ಟದ ಅಮೆಚೂರು ಕಬ್ಬಡಿ ಸಂಸ್ಥೆ ಹಾಗೂ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಸಹಯೋಗದೊಂದಿಗೆ ಸೆ.17 ರಿಂದ ಎರಡು ದಿನ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ಆಯೋಜಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಅಂಗವಾಗಿ ಪ್ರಥಮ ಬಾರಿಗೆ ಕಬ್ಬಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಈ ಪಂದ್ಯಾವಳಿಯ ಪ್ರಥಮ ಬಹುಮಾನ ಟ್ರೋಪಿಯೊಂದಿಗೆ 15,0001 ಸಾವಿರ, ದ್ವಿತೀಯ ಬಹುಮಾನ 10,0001 ಸಾವಿರ , ತೃತೀಯ ಬಹುಮಾನ 5.0001 ಹಾಗೂ ಚತುರ್ಥ ಬಹುಮಾನ 30001 ರೂಪಾಯಿ ಆಗಿದೆ. ಉತ್ತಮ ಕ್ಯಾಚರ್ಹಾಗೂ ರೈಡರ್ ಪ್ರತ್ಯೇಕ ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 9632 85045, 7676352772, 9036301365 ಸಂಪರ್ಕಿಸಿ.



