ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ವಿದ್ಯಾನಗರ, ಆಂಜನೇಯ ಬಡಾವಣೆ, ತರಳಬಾಳು ಬಡಾವಣೆ, ಸಿದ್ಧವೀರಪ್ಪ ಬಡಾವಣೆಗಳಲ್ಲಿ ಜಲಸಿರಿ ಯೋಜನೆಯ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು. ಸೆ. 10 ರಿಂದ ಜಲಸಿರಿ ಯೋಜನೆಯ ಪೈಪ್ಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಈ ಪ್ರದೇಶಗಳಲ್ಲಿ ಹಾಲಿ ಇರುವ ಹಳೆಯ ಪೈಪ್ಲೈನ್ಗಳ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು ಈ ಪ್ರದೇಶದ ಸಾರ್ವಜನಿಕರು ಜಲಸಿರಿ ಯೋಜನೆಯ ಪೈಪ್ಲೈನ್ಗಳನ್ನು ತಮ್ಮ ಮನೆಯ ನೀರಿನ ತೊಟ್ಟಿಗಳಿಗೆ ಜೋಡಣಿ ಮಾಡಿಕೊಳ್ಳಬಹುದು. ಈ ಪ್ರದೇಶದ ಸಾರ್ವಜನಿಕರಿಗೆ ನೀರು ಸರಬರಾಜುವಿನಲ್ಲ ವ್ಯತ್ಯಯವಾದಲ್ಲಿ ಜಲಸಿರಿ ಸಹಾಯವಾಣಿ ಸಂಖ್ಯೆ 9036544419 ಗೆ ಸಂಪರ್ಕಿಸಬಹುದೆಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



