Connect with us

Dvgsuddi Kannada | online news portal | Kannada news online

ದಾವಣಗೆರೆ: ರುದ್ರನಕಟ್ಟೆ ಗ್ರಾಮದಲ್ಲಿ ಹಸುವಿನ ಕರು ಕೊಂದು ಹಾಕಿದ ಚಿರತೆ

ದಾವಣಗೆರೆ

ದಾವಣಗೆರೆ: ರುದ್ರನಕಟ್ಟೆ ಗ್ರಾಮದಲ್ಲಿ ಹಸುವಿನ ಕರು ಕೊಂದು ಹಾಕಿದ ಚಿರತೆ

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಕಂದನಕೋವಿ ಗ್ರಾಮದ ಸುತ್ತಮುತ್ತಲಿನ ಜಮೀನೊಂದರಲ್ಲಿ ಚಿರತೆ ಪತ್ತೆಯಾಗಿದ್ದು, ಗ್ರಾಮಸ್ಥರು ಭಯಗೊಂಡಿದ್ದಾರೆ. ಸಾರ್ವಜನಿಕರು ನಿರ್ಭಯದಿಂದ ಓಡಾಟಕ್ಕೆ ತೊಂದರೆ ಉಂಟಾಗಿದೆ.‌ ನಿನ್ನೆ ತಡ ರಾತ್ರಿ ಕಂದನಕೋವಿ ಸಮೀಪದ ರುದ್ರನಕಟ್ಟೆ ಗ್ರಾಮದ ಹಸುವಿನ ಕೊಟ್ಟಿಗೆ ಮೇಲೆ ದಾಳಿ ಮಾಡಿದ ಚಿರತೆ, ಹಸುವಿನ ಕರುವನ್ನು ಕೊಂದು ಹಾಕಿದೆ.

ಇತ್ತೀಚೆಗೆ ಜಮೀನಲ್ಲಿ ನರಿಯೊಂದನ್ನು ಕೊಂದು ಹಾಕಿದ್ದ ಇದೇ ಚಿರತೆ, ಇದೀಗ ಹಸುವಿನ ಕರು ಕೊಂದು ಹಾಕಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಬೇಕೆಂದು ಕಂದನಕೋವಿ ಗ್ರಾಮ ಪಂಚಾಯತಿ ಕಾರ್ಯಾಲಯ ಅರಣ್ಯ ಇಲಾಖೆಗೆ ಕೋರಿತ್ತು.‌ ಸೆ.21 ರಂದು ಕಂದನಕೋವಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಪಾವಡರಂಗವ್ವನಹಳ್ಳಿ ರಸ್ತೆಯ ಆಲದ ಮರ‌ ಬಳಿ ಹಾಗೂ ರಾತ್ರಿ 8 ಗಂಟೆಗೆ ರುದ್ರನಕಟ್ಟೆ ಗ್ರಾಮದ ಸರ್ವೆ ನಂ. 28 ರಲ್ಲಿನ ಲೋಕೆಶ್ ಎಂಬುವರ ಜಮೀನಲ್ಲಿ ಚಿರತೆ ಕಂಡು ಬಂದಿದೆ. ಈ ಬಗ್ಗೆ ದಾವಣಗೆರೆ ಅರಣ್ಯ ‌ಇಲಾಖೆ ಅಧಿಕಾರಿಗಳು ಸ್ಥಳ ಪರಿಶಲಶೀಲಿಸಬೇಕು ಎಂದು ಕಂದನಕೋವಿ ಗ್ರಾಮ ಪಂಚಾಯತಿ ಕಾರ್ಯಾಲಯ ಪತ್ರ ಬರೆದಿತ್ತು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top