ದಾವಣಗೆರೆ:ಜಲಾವೃತಗೊಂಡ ಅಡಿಕೆ ತೋಟ; ತೆಪ್ಪದ ಮೂಲಕ ಕೊಯ್ಲು ಮಾಡಿದ ರೈತರು..!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ : ಮಳೆ ನೀರಿನಿಂದ ಅಡಿಕೆ ತೋಟ‌ ಜಲಾವೃತವಾಗಿದ್ದು, ತೆಪ್ಪದ ಸಹಾಯದಿಂದ ರೈತರು ಜಲಾವೃತವಾಗಿದ್ದ ತೋಟದಲ್ಲೇ ಅಡಿಕೆ ಕೊಯ್ಲು ಮಾಡಿದ್ದಾರೆ.

ಭಾರೀ ಮಳೆಗೆ ದಾವಣಗೆರೆ ತಾಲೂಕಿನ ಅಣಜಿ ಗ್ರಾಮ ಕೆರೆ ಕೋಡಿ 40 ರವರ್ಷದ ನಂತರ ಬಿದ್ದಿದೆ. ಕೆರೆ ಪೂರ್ಣ ತುಂಬಿದ್ದರ ಪರಿಣಾಮ ಅಣಜಿ ಬಳಿಯ ಕೆರೆಯ ಅಗಲ ಹಳ್ಳಿಯ ಅಡಿಕೆ ತೋಟಗಳು ಜಲಾವೃತವಾಗಿವೆ. ಇದರಿಂದ ಅಡಿಕೆ ತೋಟದಲ್ಲಿ ರೈತರು ಫಸಲಿಗೆ ಬಂದ ಅಡಕೆ ಕೊಯ್ಲು ಮಾಡಲು ಪರದಾಡುತ್ತಿದ್ದರು. ಆಗ ತೆಪ್ಪದ ಸಹಾಯದಿಂದಲೇ ಅಡಿಕೆ ಕೊಯ್ಲು ಮಾಡಿದ್ದಾರೆ.

ತೆಪ್ಪ ಹಾಗೂ ಉದ್ದನೆಯ ಕೋಲು ಬಳಸಿ ಅಡಕೆ ಕೊಯ್ಯುತ್ತಿದ್ದಾರೆ. ಜಲಾವೃತವಾಗಿರುವ ತೋಟಗಳಲ್ಲಿ ಅಡಕೆಯನ್ನು ಹಾಗೇ ಬಿಟ್ಟರೆ ಕೊಳೆ ರೋಗಕ್ಕೆ ತುತ್ತಾಗುವ ಆತಂಕ ರೈತರಿಗೆ ಎದುರಾಗಿತ್ತು.ಮಾರುಕಟ್ಟೆಯಲ್ಲಿ ಅಡಕೆ ಕ್ವಿಂಟಾಲ್​ಗೆ 50 ರಿಂದ 58 ಸಾವಿರ ರೂ. ತಲುಪಿದೆ. ಹೀಗಾಗಿ ಬಂಗಾರದಂತಹ ಬೆಳೆ ಜಲಾವೃತವಾಗಿದ್ದರೂ ರೈತರು ಅಡಕೆ ಕೊಯ್ಲು ಮಾಡುತ್ತಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *