ಚನ್ನಗಿರಿ ಐತಿಹಾಸಿಕ ಸೂಳೆಕೆರೆಯಲ್ಲಿ ಕವನ ಸಂಕಲನ ಲೋಕಾರ್ಪಣೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಚನ್ನಗಿರಿ: ಸಂತೇಬೆನ್ನೂರಿನ ಫೈಜ್ನಟ್ರಾಜ್ ಅವರ  ‘ಮತ್ತೆ ಮತ್ತೆ ಹೇಗೆ ಹಾಡಲಿ’ ಕವನ ಸಂಕಲನ್ನು ಐತಿಹಾಸಿಕ ಸೂಳೆಕೆರೆಯಲ್ಲಿ ಚನ್ನಗಿರಿ ಕಸಾಪ ಅಧ್ಯಕ್ಷ ಎಲ್.ಜಿ‌.ಮಧುಕುಮಾರ್ ರ್ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿದ ಮಧುಕುಮಾರ್, ಆಧುನಿಕ ಪ್ರಪಂಚ ಎಲ್ಲವನ್ನೂ ಕೊಟ್ಟಿದೆ .ಆದರೆ ಮನುಷ್ಯ ಮನುಷ್ಯರ ಮಧ್ಯೆ ದ್ವೇಷ,ಅಸೂಯೆ,ಈರ್ಷೆ ಮನೋಭಾವಗಳ ಸಣ್ಣತನದ ಗೋಡೆಗಳನ್ನು ಕಟ್ಟಿದೆ.
ಮಾನವೀಯ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿ ಒಬ್ಬರು ಇನ್ನೊಬ್ಬರ ಮೇಲೆ ಕರುಬುವ ಮನೋಭಾವ ಹೆಚ್ಚಾಗಿದೆ.ಇವೆಲ್ಲದಕ್ಕೂ ಕಾವ್ಯ ಉತ್ತರವಾಗಬೇಕಾಗಿದೆ. ಕಾವ್ಯಗಳು ಸಾಮಾಜಿಕ ಕಳಕಳಿ,ಸಾಂಸ್ಕೃತಿಕ ಪ್ರಜ್ಞೆ ಹಾಗೂ ಸಮಕಾಲೀನ ಸಮಸ್ಯೆಗಳಿಗೆ ಧ್ವನಿಯಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಫೈಜ್ನಟ್ರಾಜ್ ದಾವಣಗೆರೆ ಜಿಲ್ಲೆಯ ಹೆಮ್ಮೆಯ ಕವಿ. ಈಗಾಗಲೇ ಎಂಟು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವೀರೇಶ್ ಪ್ರಸಾದ್ ಮಾತನಾಡಿ ನಾಡು ಕಂಡ ಉತ್ತಮ ಕವಿಗಳಲ್ಲಿ ಫೈಜ್ನಟ್ರಾಜ್ ಕೂಡ ಒಬ್ಬರು. ಹತ್ತು ಹಲವಾರು ಪ್ರಶಸ್ತಿ ಗಳನ್ನು ಪಡೆದಿರುವ ಇವರ ಸಾಹಿತ್ಯ ಗಣನೀಯ ಮಾನ್ಯತೆ ಪಡೆದಿದೆ ಎಂದು ಅಭಿಪ್ರಾಯ ಪಟ್ಟರು.
ಮತ್ತೆ ಮತ್ತೆ ಹೇಗೆ ಹಾಡಲಿ ಕೃತಿ ಕುರಿತಾಗಿ ಕಾದಂಬರಿಕಾರ ಪಾಪುಗುರು ಮಾತನಾಡಿ ‘ ಸಮಾಜ ಮುಖಿ ಬರಹಗಳ ಮೂಲಕ ಹೆಸರಾಗಿರುವ ಫೈಜ್ನಟ್ರಾಜ್ ರ ಈ ಕೃತಿ ಗವಿಸಿದ್ದ ಎನ್ ಬಳ್ಳಾರಿ ಪ್ರಶಸ್ತಿ ಪಡೆದಿದ್ದು ಸಾರ್ಥಕವಾಗಿದೆ. ಕಾವ್ಯದ ಮೂಲಕ ಸಮಾಜ ತಿದ್ದುವ ಸಣ್ಣ ಕೆಲಸ ಫೈಜ್ನಟ್ರಾಜ್ ಮಾಡುತ್ತಿದ್ದಾರೆ ಅಂತಹ ಕಾವ್ಯ ಕೃಷಿ ಈ ಕೃತಿಯಲ್ಲಿ ಕಾಣಸಿಗುತ್ತವೆ ಎಂದರು.

ಕವಿ ಸನಾವುಲ್ಲಾ ನವಿಲೇಹಾಳು, ಬಿ.ಆರ್ ಬಾಲಚಂದ್ರ, ಶಿವು ಮುದಿಯಪ್ಪರ, ಓಂಕಾರಪ್ಪ ಬಾವಿಕಟ್ಟೆ, ಫೈಜ್ನಟ್ರಾಜ್, ನಾಗೇಂದ್ರಪ್ಪ, ಕವಿ ಆನಂದ ಋಗ್ವೇದಿ, ಕತೆಗಾರ ಇಂದ್ರಕುಮಾರ್, ಕವಿ ರೇವಣಸಿದ್ದಪ್ಪ ಭಾಗವಹಿಸಿದ್ದರು
ಅಬ್ದುಲ್ ಗಫಾರ್ ಸೈಫುಲ್ಲಾ ಪ್ರಾರ್ಥಿಸಿದರು, ಶರತ್ ಸ್ವಾಗತ ಕೋರಿದರು, ಕವಿ ಉಚ್ಚಂಗಿ ಪ್ರಸಾದ್ ಪ್ರಾಸ್ತಾವಿಕ ನುಡಿಗಳಾಡಿದರು. ಶ್ವೇತಾ ಮಲ್ಲಿಕಾರ್ಜುನ ವಂದಿಸಿದರು. ಶಿಕ್ಷಕ ಮಾರುತಿ ಕಾರ್ಯಕ್ರಮ ನಿರೂಪಿಸಿದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *