Connect with us

Dvgsuddi Kannada | online news portal | Kannada news online

ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

ದಾವಣಗೆರೆ

ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

ದಾವಣಗೆರೆ:  ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್, ಸ್ವಾಪ್ ಸಹಯೋಗದೊಂದಿಗೆ ಕಾಲೇಜಿನ ಆವರಣದಲ್ಲಿ ಪ್ರಾಂಶುಪಾಲ ಡಾ.ಆರ್ ಅಂಜಿನಪ್ಪ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಅದರ ಲಾಲನೆ ಪೆÇೀಷಣೆ ಮಾಡಿದರೆ ನಿಸರ್ಗದಲ್ಲಿ ಆಗುವ ಏರುಪೇರುಗಳನ್ನು ತಡೆಗಟ್ಟಿ ಅನಾಹುತವನ್ನು ತಡೆಗಟ್ಟಬಹುದು ಎಂದು ಕರೆ ನೀಡಿದರು. ಇದೇ ವೇಳೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರುಗಳಾದ ಅದಿತಿ ಯು, ರಂಜಿತಾ ಎಲ್, ಅಕ್ಷಯ್ ಎಂ ,ಅಮೃತ ಟಿ, ರಮ್ಯ ಜಿ.ಎಂ, ಮೈನಾ ಹೆಚ್. ಎಸ್, ಸುದೀಪ್ ಎಸ್, ಭೀಮ ನಾಯ್ಕ್, ಅವರು ಸಸಿಗಳನ್ನು ದತ್ತು ತೆಗದುಕೊಳ್ಳುವ ಮೂಲಕ ಅವುಗಳನ್ನು ಬೆಳೆಸಿ, ಉಳಿಸಿ,ಪೆÇೀಷಣೆ ಮಾಡಿ ಸಂರಕ್ಷಿಸುವ ಜವಾಬ್ದಾರಿಯನ್ನು ತಗೆದುಕೊಳ್ಳುವ ಪ್ರತಿಜ್ಞೆ ಮಾಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿಗಳಾದ ಪ್ರೊ. ಭೀಮಣ್ಣ. ಸುಣಗಾರ, ಪ್ರೊ. ಗಿರಿಸ್ವಾಮಿ, ಪ್ರೊ. ಗುರುದೇವ, ಪ್ರೊ. ನಟರಾಜ್, ಡಾ. ಶಿವಕುಮಾರ್, ಡಾ. ದಿನೇಶ್, ಡಾ ತಿರುಮಲ, ಡಾ. ಯೋಗೀಶ್, ಡಾ.ಸೋಮಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top