Connect with us

Dvgsuddi Kannada | online news portal | Kannada news online

ದಾವಣಗೆರೆ: ಪ್ಲಾಸ್ಟಿಕ್ ಬಳಕೆ ಅಂಗಡಿ ಮೇಲೆ ಪಾಲಿಕೆ ಅಧಿಕಾರಿಗಳು ದಾಳಿ; ದಂಡ ವಸೂಲಿ

ದಾವಣಗೆರೆ

ದಾವಣಗೆರೆ: ಪ್ಲಾಸ್ಟಿಕ್ ಬಳಕೆ ಅಂಗಡಿ ಮೇಲೆ ಪಾಲಿಕೆ ಅಧಿಕಾರಿಗಳು ದಾಳಿ; ದಂಡ ವಸೂಲಿ

ದಾವಣಗೆರೆ: ನಗರದ ವಿವಿಧೆಡೆ ಪ್ಲಾಸ್ಟಿಕ್ ಬಳಕೆ ಅಂಗಡಿ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ಮಾಡಿದ್ದು, ಏಕಬಳಕೆ ಪ್ಲಾಸ್ಟಿಕ್ ನ್ನು ವಶ ಪಡಿಸಿಕೊಂಡು ಒಟ್ಟು ರೂ.16,300 ದಂಡ ವಸೂಲಿ ಮಾಡಲಾಯಿತು.

ಮಹಾನಗರ ಪಾಲಿಕೆಯ ಆಯುಕ್ತರ ಮಾರ್ಗದರ್ಶನದಲ್ಲಿ ಇಂದು (ಮೇ 11) ರಂದು ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ಆರೋಗ್ಯ ನಿರೀಕ್ಷಕರುಗಳಾದ ಹರೀಶ್ ಕೆ.ಎನ್. ನಿಖಿಲ್ ಜೆ.ಹೆಚ್. ಮಲ್ಲಿಕಾ ಗುಡೆಕೋಟೆ ಮತ್ತು ಉಷಾ ಅವರನ್ನೊಳಗೊಂಡ ತಂಡ ನಗರದ ಆಂಜನೇಯ ಬಡಾವಣೆ, ಕೆ.ಬಿ. ಬಡಾವಣೆ, ಪಿ.ಜೆ. ಬಡಾವಣೆ, ವಿದ್ಯಾರ್ಥಿ ಭವನ, ಹೂವಿನ ಮಾರುಕಟ್ಟೆ ಮತ್ತಿತರ ಭಾಗಗಳಲ್ಲಿ, ಅಂಗಡಿ, ಬೇಕರಿ, ತಳ್ಳುಗಾಡಿಗಳು, ಹೂವಿನ ಅಂಗಡಿಗಳ ಮೇಲೆ ದಾಳಿ ನಡೆಸಿ ಲಲಿತ ಟಿಫನ್ಸ್, ಕಾವೇರಿ ಬೇಕರಿ ಮುಂತಾದ ಕಡೆ ದಾಳಿ ಮಾಡಲಾಯಿತು.

ದಾಳಿಯಲ್ಲಿ ಬಸವರಾಜ, ಶಫಿ, ಅತಾವುಲ್ಲ, ವಿಲಿಯಮ್ಸ್, ಸುಬ್ಬಣ್ಣ, ರವೀಂದ್ರ, ಅಕ್ಕಮಹಾದೇವಿ, ಆನಂದರಾಮ್, ಆರೀಫ್, ತುಳಜಾರಾಮ್, ಶಿವಶಂಕರ್, ಪ್ರಭಾಕರ ಭಾಗಿಯಾಗಿದ್ದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top