Connect with us

Dvgsuddi Kannada | online news portal | Kannada news online

ದಾವಣಗೆರೆ: ಮೇ 14 ರಂದು ಜಿಲ್ಲಾ ಬಿಜೆಪಿ ಸಮಾವೇಶ

ದಾವಣಗೆರೆ

ದಾವಣಗೆರೆ: ಮೇ 14 ರಂದು ಜಿಲ್ಲಾ ಬಿಜೆಪಿ ಸಮಾವೇಶ

ದಾವಣಗೆರೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ  ಬಹುಮತ ಪಡೆಯುವ ನಿಟ್ಟಿನಲ್ಲಿ ಬಿಜೆಪಿ ಕರ್ನಾಟಕ ಪ್ರಕೋಷ್ಠಗಳ ಜಿಲ್ಲಾ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ದಾವಣಗೆರೆಯಲ್ಲಿ ಮೇ 14 ರಂದು ನಡೆಯಲಿದೆ  ಎಂದು ಪ್ರಕೋಷ್ಠಗಳ  ರಾಜ್ಯ ಸಹ ಸಂಯೋಜಕ ಡಾ. ಎ. ಹೆಚ್. ಶಿವಯೋಗಿ ಸ್ವಾಮಿ ಹೇಳಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶ  ವಿನೋಬನಗರದ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ  ಬೆಳಿಗ್ಗೆ 10.30 ಕ್ಕೆ ಆಯೋಜಿಸಲಾಗಿದೆ. ಕೇಂದ್ರ ಘಟಕ ನಿರ್ಣಯದಂತೆ 24 ಪ್ರಕೋಷ್ಠಗಳನ್ನು ರಚಿಸಲಾಗಿದ್ದು, ಕರ್ನಾಟಕದಲ್ಲಿ ಬಹು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದರು.

ದಾವಣಗೆರೆ ಸಮಾವೇಶದ ಉದ್ಘಾಟನೆಯನ್ನು ರಾಜ್ಯದ ಕನ್ನಡ ಸಂಸ್ಕೃತಿ ಸಚಿವರು ಹಾಗೂ ಇಂಧನ ಸಚಿವ ಸುನಿಲ್ ಕುಮಾರ್  ನೆರವೇರಿಸಲಿದ್ದಾರೆ. ಸಭೆಯಲ್ಲಿ  ಸಂಸದ ಜಿಎಂ ಸಿದ್ದೇಶ್ವರ ಹಾಗೂ ಶಾಸಕರುಗಳಾದ  ಎಸ್.ಎ. ರವೀಂದ್ರನಾಥ್ ,  ಎಂ.ಪಿ. ರೇಣುಕಾಚಾರ್ಯ ,  ಮಾಡಾಳು ವಿರೂಪಾಕ್ಷಪ್ಪ ,  ಎಸ್.ವಿ. ರಾಮಚಂದ್ರ ,  ಎನ್ . ಲಿಂಗಣ್ಣ , ರಾಜ್ಯ ಕಾರ್ಯದರ್ಶಿ , ಎಂಎಲ್ಸಿ ಕೆ . ಎಸ್ . ನವೀನ್ , ರಾಜ್ಯ ಕಾರ್ಯದರ್ಶಿ  ಸುಧಾ ಜಯರುದ್ರೇಶ್,  ಶಿಕ್ಷಕರ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಸುರೇಶ್ , ಜಿಲ್ಲಾ ಬಿಜೆಪಿಯ ಪದಾಧಿಕಾರಿಗಳು , ಮೋರ್ಚಾ ಪದಾಧಿಕಾರಿಗಳು , ಜಿಲ್ಲೆಯ ಸಂಕುಲ ಪ್ರಭಾರಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ  ಸಭೆಯ ಅಧ್ಯಕ್ಷತೆ ವಹಿಸುವರು . ಸಮಾವೇಶದಲ್ಲಿ ಜಿಲ್ಲೆಯ ಸುಮಾರು 600 ಕ್ಕೂ ಹೆಚ್ಚು ಸದಸ್ಯರು ಭಾಗವಹಿಸುವರು ಎಂದರು.  ಈ ಸಂದರ್ಭದಲ್ಲಿ  ಧೂಡಾ ಅಧ್ಯಕ್ಷ ಕೆ.ಎಂ. ಸುರೇಶ್,  ಬಿ.ಎಸ್.ಜಗದೀಶ್, ಶಿವರಾಜ್ ಪಾಟೀಲ್, ಶ್ರೀನಿವಾಸ್ ದಾಸಕರಿಯಪ್ಪ, ಲಕ್ಷ್ಮಣ್, ಡಿ.ಎಸ್. ಶಿವಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top