Connect with us

Dvgsuddi Kannada | online news portal | Kannada news online

ದಾವಣಗೆರೆ: ಬೃಹತ್‌ ಲೋಕ ಅದಾಲತ್‌ ನಲ್ಲಿ ವಿವಿಧ ನ್ಯಾಯಾಲಯದ 7,362 ಪ್ರಕರಣ ಇತ್ಯರ್ಥ

ದಾವಣಗೆರೆ

ದಾವಣಗೆರೆ: ಬೃಹತ್‌ ಲೋಕ ಅದಾಲತ್‌ ನಲ್ಲಿ ವಿವಿಧ ನ್ಯಾಯಾಲಯದ 7,362 ಪ್ರಕರಣ ಇತ್ಯರ್ಥ

ದಾವಣಗೆರೆ: ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ನಡೆದ ಬೃಹತ್‌ ಲೋಕ ಅದಾಲತ್‌ನಲ್ಲಿ ಒಟ್ಟು 7,362 ಪ್ರಕರಣಗಳನ್ನು ಇತ್ಯರ್ಥಗೊಳಿಸಿ, 10.78 ಕೋಟಿ ಪರಿಹಾರ ಕೊಡಿಸಲಾಗಿದೆ.

ಜಿಲ್ಲಾ ನ್ಯಾಯಾಲಯದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ನೇತೃತ್ವದಲ್ಲಿ ಬೃಹತ್ ಲೋಕ ಅದಾಲತ್ ನಡೆದಿದ್ದು, ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ನಡೆದ ಅದಾಲತ್‌ನಲ್ಲಿ ಒಟ್ಟು 15,918 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇವುಗಳ ಪೈಕಿ 7,362 ಪ್ರಕರಣಗಳು ಇತ್ಯರ್ಥಗೊಂಡಿವೆ.

ರಾಜಿಯಾಗುವ 331 ಅಪರಾಧ ಪ್ರಕರಣಗಳಲ್ಲಿ 30 ಪ್ರಕರಣಗಳು ಇತ್ಯರ್ಥಗೊಂಡಿವೆ. 65 ಚೆಕ್‌ ಬೌನ್ಸ್ ಪ್ರಕರಣದಲ್ಲಿ 1.29 ಕೋಟಿ ಪರಿಹಾರ ಒದಗಿಸಲಾಯಿತು. ಬ್ಯಾಂಕ್‌ ನ 26 ಇತ್ಯರ್ಥ ಪಡಿಸಿ 19.33 ಲಕ್ಷ ಪರಿಹಾರ ಹಾಗೂ ಹಣ ವಸೂಲಾತಿಯ 14 ಪ್ರಕರಣಗಳಲ್ಲಿ 52 ಲಕ್ಷ ಪರಿಹಾರ ಸಿಕ್ಕಿದೆ.ಮೋಟರ್‌ ವಾಹನ ಕಾಯ್ದೆಯಡಿ 71 ಪ್ರಕರಣ‌ ಬಗೆಹರಿಸಿ 3.36 ಕೋಟಿ ಪರಿಹಾರವನ್ನು ಕೊಡಿಸಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top