Connect with us

Dvgsuddi Kannada | online news portal | Kannada news online

ರಾಜ್ಯಕ್ಕೆ ದಾವಣಗೆರೆ ದಕ್ಷಿಣ ಮಾದರಿ ಕ್ಷೇತ್ರ; 40 ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ಬಳಿಕ ಶಾಮನೂರು ಶಿವಶಂಕರಪ್ಪ ಹೇಳಿಕೆ

ದಾವಣಗೆರೆ

ರಾಜ್ಯಕ್ಕೆ ದಾವಣಗೆರೆ ದಕ್ಷಿಣ ಮಾದರಿ ಕ್ಷೇತ್ರ; 40 ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ಬಳಿಕ ಶಾಮನೂರು ಶಿವಶಂಕರಪ್ಪ ಹೇಳಿಕೆ

ದಾವಣಗೆರೆ: ದಾವಣಗೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ರಾಜ್ಯಕ್ಕೆ ಮಾದರಿ ಕ್ಷೇತ್ರವಾಗಿದೆ ಎಂದು ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ದಾವಣಗೆರೆ ತಾಲೂಕು ದಕ್ಷಿಣ ಕ್ಷೇತ್ರದಲ್ಲಿ 40 ಕೋಟಿ ವೆಚ್ಚದ ಸಿಸಿ ರಸ್ತೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮೂರು ತಿಂಗಳ ಹಿಂದೆ ಸರ್ಕಾರದಿಂದ 20 ಕೋಟಿ ವಿಶೇಷ ಅನುದಾನ ತಂದು ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ್ದು, ಇದೀಗ ಮತ್ತೆ 40 ಕೋಟಿ
ವಿಶೇಷಾನುದಾನ ಬಿಡುಗಡೆ ಮಾಡಿಸುವ ಮೂಲಕ ಗ್ರಾಮಾಂತರ ಪ್ರದೇಶದ ರಸ್ತೆಗಳನ್ನು ಸಂಪೂರ್ಣ ಸಿಸಿ ರಸ್ತೆಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ತಾಲೂಕಿನ ತರಳಬಾಳು ನಗರ, ಜವಳಘಟ್ಟ, ಕೈದಾಳೆ, ಕುಕ್ಕವಾಡ,ಕನಗೊಂಡನಹಳ್ಳಿ ಗ್ರಾಮಗಳಲ್ಲಿ 40 ಕೋಟಿ ವೆಚ್ಚದ ವಿವಿಧ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ದಕ್ಷಿಣ ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಗ್ರಾಮಾಂತರ ಪ್ರದೇಶದ ತರಳಬಾಳು ನಗರ, ಕೈದಾಳೆ, ಜವಳಘಟ್ಟ, ಕುಕ್ಕವಾಡ,ಕನಗೊಂಡನಹಳ್ಳಿ ಗ್ರಾಮಗಳಿಗೆ ಹೊಂದಿಕೊಂಡಿರುವ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಲಾಗಿದೆ. ಕಾಂಗ್ರೆಸ್ ಪಕ್ಷವು ಅಭಿವೃದ್ಧಿಗೆ ಮತ್ತೊಂದು ಹೆಸರಾಗಿದೆ.

ಉದ್ಯಮಿ ಎಸ್.ಎಸ್.ಗಣೇಶ್, ಜಿಂಪ ಮಾಜಿ ಸದಸ್ಯ ಹದಡಿ ಜಿ.ಸಿ.ನಿಂಗಪ್ಪ, ತಾಪಂ ಮಾಜಿ ಸದಸ್ಯಆರನೇಕಲ್ಲು ಮಂಜಣ್ಣ, ಕುಕ್ಕವಾಡ ಕೆ.ಎನ್.ಮಂಜುನಾಥ, ಕುಕ್ಕವಾಡ ಡಿ.ಮಲ್ಲೇಶಪ್ಪ, ಶಿರಮಗೊಂಡನಹಳ್ಳಿ ಎಸ್.ಎಂ.ರುದ್ರೇಶ, ಹನುಮಂತಪ್ಪ, ಹದಡಿ ಮಾಲತೇಶ, ಹೊಸಳ್ಳಿಗಿರೀಶ, ಜಂಭು, ಕನಗೊಂಡನಹಳ್ಳಿ ಪರಮೇಶ್ವರಪ್ಪ, ದೊಡ್ಡಪ್ಪ, ಕರಿಬಸಪ್ಪ, ಹದಡಿ ರಮೇಶ, ಬಲ್ಲೂರುಬಸವರಾಜ, ಚಿಕ್ಕಣ್ಣ, ಕುಕ್ಕವಾಡ ಕೆ.ಟಿ.ಹನುಮೇಗೌಡ, ಡಿ.ಬಿ.ಶಂಕರ್, ಎ.ಎಸ್.ರಾಜು, ಕೆ.ಲಿಂಗೇಶ, ಪರಮೇಶ್ವರಯ್ಯ, ಕೆ.ನಂದೀಗೌಡ, ತಿಪ್ಪೇಸ್ವಾಮಿ,ಜವಳಪುಟದ ರಾಮನ, ಹನಮಂತನ, ಕೆಆರ್‌ಐಡಿಎಲ್ ಸಹಾಯಕ ಕಾರ್ಯ ಪಾಲಕ ಅಭಿಯಂ ಣೇಶ ಬಾಬು, ಪಂ ಸದಸ್ಯರು, ಗ್ರಾಮಸ್ಥರು ಇದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top