ದಾವಣಗೆರೆ: ಆನ್ಲೈನ್ ಹೂಡಿಕೆ ಮಾಡಿದ್ರೆ ಅಧಿಕ ಲಾಭ ಗಳಿಸಬಹುದು ಎಂಬ ಫೇಸ್ ಬುಕ್ ಜಾಹೀರಾತು ನಂಬಿ, ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರ ವ್ಯಕ್ತಿ 13.8 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ.
2027 ಡಿಸೆಂಬರ್ ಗೆ ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಪೂರ್ಣ: ಸಚಿವ ವಿ. ಸೋಮಣ್ಣ
ಈ ವ್ಯಕ್ತಿ ಜನವರಿ 1ರಂದು ಮೊಬೈಲ್ನಲ್ಲಿ ಫೇಸ್ಬುಕ್ ವೀಕ್ಷಿಸುತ್ತಿದ್ದಾಗ ಬಂದ ಆನ್ಲೈನ್ ಹೂಡಿಕೆ ಜಾಹೀರಾತು ನೋಡಿದ್ದು, ಆ ಜಾಹೀರಾತು ಮೇಲೆ ಕ್ಲಿಕ್ ಮಾಡಿದ್ದಾನೆ. ನಂತರ ವಾಟ್ಸಾಪ್ ಗ್ರೂಪ್ ಗೆ ಸೇರಿಸಿದ್ದಾರೆ. ಅಡ್ವೆಂಟ್ ಸ್ಟಾಕ್ ಬ್ರೋಕಿಂಗ್ ಪ್ರೈ. ಲಿ. ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ರಿಯಾ ಕಪೂರ್ ಎಂದು ಪರಿಚಯಿಸಿಕೊಂಡು ಆಸೆ ಹುಟ್ಟಿಸಿದ್ದರು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಹರಿಹರ ಸೇರಿದ್ರೆ ಇನ್ನಷ್ಟು ಅಭಿವೃದ್ಧಿ; ಸಚಿವ ಎಸ್.ಎಸ್. ಮಲ್ಲಿಕಾರ್ಜುನ
ವಾಟ್ಸಾಪ್ ಗೆ ಬಂದ ಲಿಂಕ್ ಬಳಸಿಕೊಂಡು ಎಡಿವಿಪಿಎಂಎ ಹೆಸರಿನ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಹಣ ಹೂಡಿಕೆ ಮಾಡಿದ್ದಾರೆ. ಆ ಆ್ಯಪ್ ನಿರ್ದೇಶನದಂತೆ ಹಂತ ಹಂತವಾಗಿ ಹಣ ಪಾವತಿಸಿದ್ದಾರೆ. ಉಳಿತಾಯ ಹಣ ಹಾಗೂ ಸ್ನೇಹಿತರಿಂದ ಸಾಲ ಪಡೆದು ಹೂಡಿಕೆ ಮಾಡಿದ್ದರು.
ಹೂಡಿಕೆಯಿಂದ ಒಟ್ಟು 68 ಲಕ್ಷ ಲಾಭ ಬಂದಿರುವುದಾಗಿ ಆ್ಯಪ್ ನಲ್ಲಿ ನಮೂದಾಗಿತ್ತು. ಆದರೆ ಅದನ್ನು ಬಿಡಿಸಿಕೊಳ್ಳಬೇಕಿದ್ರೆ ಮತ್ತೆ 8.8 ಲಕ್ಷ ಕಮಿಷನ್ ಪಾವತಿಸುವಂತೆ ಸೂಚಿಸಲಾಗಿತ್ತು. ಈ ವಿಷಯ ತಿಳಿಸಿದ ನಂತರ ಆ ಆ್ಯಪ್ ಡಿಲಿಟ್ ಆಗಿದೆ. ಆಗ ಇದೊಂದು ಆನ್ ಲೈನ್ ವಂಚನೆ ಎಂಬುದು ಗೊತ್ತಾಗಿದೆ. ಕೂಡಲೇ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



