ದಾವಣಗೆರೆ: ಚಿನ್ನದ ವ್ಯಾಪಾರಿಗಳ ಜತೆ ಸೇರಿ ದರೋಡೆ; ಇಬ್ಬರು ಪಿಎಸ್ ಐ ಅಮಾನತ್ತು ಮಾಡಿ ಆದೇಶ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಚಿನ್ನದ ವ್ಯಾಪಾರಿಗಳ ಜತೆ ಸೇರಿ ಚಿನ್ನ ತಯಾರಿಕನಿಂದ ಚಿನ್ನ‌ ದರೋಡೆ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಪಿಎಸ್ ಐ ಗಳನ್ನು ಅಮಾನತ್ತು (PSI suspension) ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

ದಾವಣಗೆರೆ: ಪೊಲೀಸರೇ ಚಿನ್ನದ ದರೋಡೆಗೆ ಸಾಥ್; ಇಬ್ಬರು ಪಿಎಸ್‌ಐ ಸೇರಿದಂತೆ 7 ಆರೋಪಿಗಳ ಬಂಧನ 8 ಲಕ್ಷ ಮೌಲ್ಯದ ಚಿನ್ನ ವಶ

ಆರೋಪಿಗಳಾದ ಎ1 ಮಾಳಪ್ಪ ಯಲ್ಲಪ್ಪ ಚಿಪ್ಪಲಕಟ್ಟಿ ಪ್ರೋ. ಪಿಎಸ್‌ಐ ಹಂಸಭಾವಿ ಪೊಲೀಸ್ ಠಾಣೆ ಹಾಗೂ ಎ2 ಪ್ರವೀಣ್‌ಕುಮಾರ್ (ಪಿಎಸ್‌ಐ-1 ಸಾಗರ ಟೌನ್ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯ ಆದೇಶದಲ್ಲಿರುವ) ಇವರನ್ನು ಅಮಾನತ್ತು ಮಾಡಲಾಗಿದೆ.

ದಾವಣಗೆರೆ-ಮಂತ್ರಾಲಯ ಎಸಿ ವೋಲ್ವೊ ಬಸ್‌ ಸೌಲಭ್ಯಕ್ಕೆ ಸಂಸದೆ ಚಾಲನೆ; ಸಮಯ, ಮಾರ್ಗ, ದರ ಪಟ್ಟಿ ಮಾಹಿತಿ ಇಲ್ಲಿದೆ..

ಈ ಇಬ್ಬರು ಪಿಎಸ್ ಐ ಗಳು ದಿನಾಂಕ: 24/11/2025 ರಂದು ಬೆಳಗಿನ ಜಾವ 03 ಗಂಟೆಗೆ ಪರಿಚಯವಿರುವ ಮೂವರು ಚಿನ್ನದ ವ್ಯಾಪಾರಿಗಳ ಜೊತೆ ಸೇರಿಸಿಕೊಂಡು ಕಾರವಾರದ ಆಭರಣ ತಯಾರಿಕೆಗಾರ ವಿಶ್ವನಾಥ್ ಎಂ ಅರ್ಕಸಾಲಿ ಎಂಬುವವರಿಂದ ದಾವಣಗೆರೆ ಬಸ್ ನಿಲ್ದಾಣದಲ್ಲಿ 78.15 ಗ್ರಾಂ ಬಂಗಾರದ ಗಟ್ಟಿ ಹಾಗೂ ಬಂಗಾರದ ಆಭರಣ ದರೋಡೆ ನಡೆಸಿದ್ದರು.

ದಾವಣಗೆರೆ: ಲೋಕಾಯುಕ್ತ ಭರ್ಜರಿ ಬೇಟೆ; APMC ಸಹಾಯಕ‌ ನಿರ್ದೇಶಕ ಮನೆಯಲ್ಲಿ ಸಿಕ್ತು ಬರೋಬ್ಬರಿ 1 ಕೆಜಿ ಚಿನ್ನ, 10 ಕೆಜಿ ಬೆಳ್ಳಿ, 7.5 ಲಕ್ಷ ನಗದು, 6 ನಿವೇಶ ಪತ್ರ ಪತ್ತೆ

ಈ ಕುರಿತು ದಾವಣಗೆರೆ ಜಿಲ್ಲೆಯ ಕೆಟಿಜೆ ನಗರ ಪೊಲೀಸ್ ಠಾಣೆಯ ಘೋರ ಅಪರಾಧ ಪ್ರಕರಣದಲ್ಲಿ ಕ್ರಮವಾಗಿ ಎ-1 ಮತ್ತು ಎ-2 ಸೇರಿ 7 ಜನರನ್ನು ಬಂಧಿಸಲಾಗಿತ್ತು. ಸಾರ್ವಜನಿಕರಿಗೆ ರಕ್ಷಣೆ ನೀಡುವ ಮತ್ತು ನೊಂದವರಿಗೆ ನ್ಯಾಯಕೊಡಿಸುವಂತಹ ಬಹುಮಖ್ಯವಾದ ಜವಾಬ್ದಾರಿಯುತ ಪಿಎಸ್‌ಐ ಹುದ್ದೆಯಲ್ಲಿದ್ದುಕೊಂಡು, ಇಂತಹ ಘೋರ ಅಪರಾಧ ಕೃತ್ಯವನ್ನು ಎಸಗಿದ ಕಾರಣ ಪ್ರಕರಣದ ಎ-1 ಆರೋಪಿ ಪಿಎಸ್ ಐ ಮಾಳಪ್ಪ ಯಲ್ಲಪ್ಪ ಚಿಪ್ಪಲಕಟ್ಟಿ ಇನ್ನೂ ಪಿಎಸ್‌ಐ ಹುದ್ದೆಯ ಪರೀಕ್ಷಾರ್ಥ ಅವಧಿಯಲ್ಲಿರುವುದರಿಂದ ದಿನಾಂಕ: 24/11/2025ರಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ವಜಾ ಮಾಡಲಾಗಿದೆ.

ಪ್ರಕರಣದ ಎ-2 ಆರೋಪಿ ಪಿಎಸ್ ಐ ಪ್ರವೀಣ್‌ಕುಮಾರ್ 24/11/2025 ರಿಂದಲೇ ಸೇವೆಯಿಂದ ಅಮಾನತ್ತುಗೊಳಿಸಿ ಪೊಲೀಸ್ ಇಲಾಖಾ ವಿಚಾರಣೆಗೆ ಆದೇಶಿಸಿದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *