ದಾವಣಗೆರೆ: ವಿದ್ಯಾನಗರ ಮನೆಯೊಂದರ ಮುಂದಿನ ಶ್ರೀಗಂಧದ ಮರ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಗಳಿಂದ 50 ಸಾವಿರ ಮೌಲ್ಯದ ಶ್ರೀಗಂಧ ವಶಕ್ಕೆಪಡೆಯಲಾಗಿದೆ.
ಅ.14 ರಂದು ವಿದ್ಯಾ ನಗರದ ಮುದೇಗೌಡರ ಸಿದ್ದರಾಜು ತಮ್ಮ ಮನೆ ಮುಂದಿನ ಶ್ರೀಗಂಧದ ಮರನ್ನು ಯಾರೋ ರಾತ್ರಿ ಗರಗಸದಿಂದ ಮರವನ್ನು ಕೊಯ್ದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಶ್ರೀಗಂಧ ಮರದ ತೂಕ ಸುಮಾರು 40 ಕೆಜಿ ಇದ್ದು, ಬೆಲೆ ಅಂದಾಜು 85 ಸಾವಿರ ರೂಗಳಾಗಬಹುದು. ಈ ಬಗ್ಗೆ ಕಳ್ಳರನ್ನು ಪತ್ತೆ ಮಾಡಿಕೊಡಿ ಎಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಆರೋಪಿ ಪತ್ತೆ ಮಾಡಲು ಎಎಸ್ಪಿ ವಿಜಯಕುಮಾರ.ಎಂ. ಸಂತೋಷ್, ಜಿ. ಮಂಜುನಾಥ ಹಾಗೂ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮತ್ತು ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ.ಎಸ್ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವಿಶ್ವನಾಥ ಜಿ.ಎನ್ ಹಾಗೂ ಸಿಬ್ಬಂದಿಗಳಾದ ಶಂಕರ್ ಜಾದವ್, ಆನಂದ ಎಮ್, ಮಲ್ಲಿಕಾರ್ಜುನ, ಲಕ್ಷ್ಮಣ, ಬೋಜಪ್ಪ, ಚಂದ್ರಪ್ಪ, ಗೋಪಿನಾಥ ಬಿ ನಾಯ್ಕ, ಮಾಲತೇಶ ರವರನ್ನು ಒಳಗೊಂಡ ತಂಡವು ಆರೋಪಿಗಳನ್ನು ಪತ್ತೆ ಮಾಡಿದೆ.
ಎ-1 ಸೈಯ್ಯದ್ ಇಸ್ರಾರ್ (29) ಕಟ್ಟಿಗೆ ಒಡೆಯುವ ಕೆಲಸ, ವಾಸ: ಶಿರಾಳಕೊಪ್ಪ, ಸ್ವಂತ ಸ್ಥಳ: ಶಿಕಾರಿಪುರ ತಾಲ್ಲೂಕು, ಎ2-ಸೈಯ್ಯದ್ ಸಾಬೀರ್ (22 ) ಮರ ಕಡಿಯುವ ಕೆಲಸ ವಾಸ: ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. ಎ3-ರುದ್ರೇಶ @ ರುದ್ರ (27) ಕೂಲಿ ಕೆಲಸ, ವಾಸ: ಶಿಕಾರಿಪುರ ತಾ, ಶಿವಮೊಗ್ಗ ಜಿಲ್ಲೆ. ಇವರನ್ನು ಬಂಧಿಸಿ ಆರೋಪಿತರಿಂದ ಒಟ್ಟು 50,000/-ರೂ ಬೆಲೆಯ 26.150 ಗ್ರಾಂ ತೂಕದ ಶ್ರೀಗಂಧದ ತುಂಡು, ಕೃತ್ಯಕ್ಕೆ ಬಳಸಿದ ಒಂದು ಆಲ್ಟೋ ಕಾರು ಮತ್ತು ಕಬ್ಬಿಣದ ಎರಡು ಮಚ್ಚುಗಳು ಹಾಗೂ ಕಬ್ಬಿಣದ ಒಂದು ಗರಗಸವನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಈ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



