Connect with us

Dvgsuddi Kannada | online news portal | Kannada news online

ಮಲೇಬೆನ್ನೂರಿನ ಖ್ಯಾತ ವೈದ್ಯ ಅರುಣ್ ಬಿ. ದಾವಣಗೆರೆ ನಿವಾಸದಲ್ಲಿ ಆತ್ಮಹತ್ಯೆ

ದಾವಣಗೆರೆ

ಮಲೇಬೆನ್ನೂರಿನ ಖ್ಯಾತ ವೈದ್ಯ ಅರುಣ್ ಬಿ. ದಾವಣಗೆರೆ ನಿವಾಸದಲ್ಲಿ ಆತ್ಮಹತ್ಯೆ

ದಾವಣಗೆರೆ:ಮಲೇಬೆನ್ನೂರಿನ ಖ್ಯಾತ ವೈದ್ಯ ಡಾ. ಅರುಣ ಬಿ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಲೇಬೆನ್ನೂರು ಖ್ಯಾತ ವೈದ್ಯ ಡಾ. ಬಿ. ಚಂದ್ರಶೇಖರ್ ಮತ್ತು ಜ್ಯೋತಿ ಅವರ ಪುತ್ರ ಡಾ. ಅರುಣ್ ಬೆಣ್ಣಿಹಳ್ಳಿ (37) ಇಂದು ಮಧ್ಯಾಹ್ನ 1 ಗಂಟೆಗೆ ದಾವಣಗೆರೆಯ  ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಾ. ಅರುಣ ಬಿ ಅವರು ಶಸ್ತ್ರ ಚಿಕಿತ್ಸೆ ತಜ್ಞರಾಗಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ, ಪುತ್ರಿ, ತಂದೆ, ತಾಯಿ ಹಾಗೂ ಒರ್ವ ಸಹೋದರಿಯನ್ನು ಅಗಲಿದ್ದಾರೆ.

ಘಟನ ಸ್ಥಳಕ್ಕೆ ಎಸ್ ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಪರಿಶೀಲಿಸಿದರು. ತನಿಖಾಧಿಕಾರಿಗಳಿಗೆ ಸೂಕ್ತ ತನಿಖಾ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಪಿಎಸ್ ಐ ಧನಂಜಯ್ ಉಪಸ್ಥಿತರಿದ್ದರು.
ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top