Connect with us

Dvgsuddi Kannada | online news portal | Kannada news online

ತರಳಬಾಳು ಶ್ರೀಗಳ ಸಂಕಲ್ಪದಿಂದ ಬರದನಾಡು ಭರಮಸಾಗರ ಕೆರೆಗೆ ಹರಿದ ತುಂಗಭದ್ರೆ; ರೈತರ ಹರ್ಷ..!

Home

ತರಳಬಾಳು ಶ್ರೀಗಳ ಸಂಕಲ್ಪದಿಂದ ಬರದನಾಡು ಭರಮಸಾಗರ ಕೆರೆಗೆ ಹರಿದ ತುಂಗಭದ್ರೆ; ರೈತರ ಹರ್ಷ..!

ಭರಮಸಾಗರ: ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಸಂಕಲ್ಪದಂತೆ ಭರಮಸಾಗರದ ಐತಿಹಾಸಿಕ ಭರಮಣ್ಣನಾಯಕನ ಕೆರೆಗೆ ತುಂಗಭದ್ರ ನದಿಯಿಂದ ಏತನೀರಾವರಿ ಮೂಲಕ ಇಂದು ಮಧ್ಯಾಹ್ನ 3 ಗಂಟೆಗೆ ನೀರು ಹರಿಸಲಾಯಿತು. ಬರದನಾಡಿಗೆ ಬಂದ ತುಂಗೆಯನ್ನು ಕಂಡ ರೈತರ ಹರ್ಷಗೊಂಡರು.

2018 ರ ಭರಮಸಾಗರ ವ್ಯಾಪ್ತಿಯ 42 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ತುಂಬಿಸುವ ಯೋಜನೆ ಇದಾಗಿದೆ. ರಾಜನಹಳ್ಳಿಯಿಂದ ನೀರು ತುಂಬಿಸುವ ಭರಮಸಾಗರ ಏತನೀರಾವರಿ ಯೋಜನೆಯು ತರಳಬಾಳು ಶ್ರೀಗಳ ಕನಸಾಗಿತ್ತು. ಶ್ರೀಗಳ ಒತ್ತಾಸೆಯಂತೆ ರೂ.565 ಕೋಟಿ ರೂ.ಗಳ ಈ ಬೃಹತ್ ಯೋಜನೆಗೆ ಸರ್ಕಾರದಿಂದ ಅನುಷ್ಠಾನಗೊಂಡಿದೆ. ಭರಮಸಾಗರ ಕೆರೆಗೆ ಸೀಮಿತವಾಗಿ ನೇರ ಪೈಪ್ ಲೈನ್ ಅಳವಡಿಕೆಯ ಕಾಮಗಾರಿಯು ವೈಜ್ಞಾನಿಕ ಮಾನದಂಡದಡಿ ಭರದಿಂದ ಮುಕ್ತಾಯವಾಗಿದೆ.

ಕೊರೊನಾ ಮಹಾಮಾರಿ ಸಮಸ್ಯೆ ಎದುರಾಗದಿದ್ದರೆ ಆಗಸ್ಟ್ ವೇಳೆಗೆ 1000 ಎಕರೆಯಲ್ಲಿ ಪಸರಿಸಿರುವ ಭರಮಸಾಗರದ ದೊಡ್ಡ ಕೆರೆಯಲ್ಲಿ ತುಂಗಭದ್ರೆ ಅವಿರ್ಭವಿಸುತ್ತಿದ್ದಳು. ಆದರೂ ಕೆರೆತುಂಬಿಸುವ ಶ್ರೀಗಳು ನಿರಂತರ ಒತ್ತಾಸೆಯ ಫಲವಾಗಿ ಪೈಪ್ ಲೈನ್ ಅಳವಡಿಕೆ ಕಾರ್ಯವು ತ್ವರಿತವಾಗಿ ಮುಕ್ತಾಯವಾಗಿದೆ. ನದಿಯಿಂದ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು ಪ್ರತಿ ಸೆಕೆಂಡಿಗೆ 2790 ಲೀಟರ್ ನೀರು ಹರಿದು ಬರುತ್ತಿದೆ.

ಇಂದು ಮಧ್ಯಾಹ್ನ 3 ಗಂಟೆಗೆ ನೀರು ಹರಿಯಲು ಆರಂಭವಾಗಿದೆ. ಸಂಪೂರ್ಣ ಕೆರೆ ತುಂಬಲು ಕೇವಲ 23 ದಿನ ಸಾಕಾಗುತ್ತದೆ. ಭರದ ನಾಡಿನ ಭಗೀರಥರಾದ ಡಾ. ಶಿವಮೂರ್ತಿ ಶಿವಾಚಾರ್ಯ ಸಂಕಲ್ಪ ಶಕ್ತಿಯ ಆಶೀರ್ವಾದದಿಂದ ಭರಮಸಾಗರ ವ್ಯಾಪ್ತಿಯ 40 ಕ್ಕೂ ಹೆಚ್ಚು ಕೆರೆಗಳು ತುಂಬಿಸುವ ಯೋಜನೆ ಸಾಕಾರಗೊಂಡಿದೆ. ಈ ಭಾಗದ ಜನರ ಬಹುದಿನಗಳ ಕನಸು ನನಸಾಗಿದೆ. ಕೆರೆ ತುಂಬುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಕೆರೆಯ ಬಳಿ ಬೆಳಗ್ಗೆಯಿಂದಲೇ ಜಮಾಯಿಸಿದ್ದರು. ರೈತರು ಶ್ರೀಗಳ ಕಾರ್ಯ ಕಂಡು ಧನ್ಯತಾ ಭಾವದಿಂದ ನೆನೆದು ಭಾವುಕರಾದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in Home

  • Home

    ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024

    By

    ಈ ರಾಶಿಯವರು ಸಿಹಿ ಸಂದೇಶಗಳ ಮೇಲೆ ಸಿಹಿ ಸಂದೇಶ ಪಡೆಯಲಿದ್ದೀರಿ, ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024 ಸೂರ್ಯೋದಯ: 06:29, ಸೂರ್ಯಾಸ್ತ :...

  • Home

    ಗುರುವಾರ- ರಾಶಿ ಭವಿಷ್ಯ ಜನವರಿ-4,2024

    By

    ಈ ರಾಶಿಗಳ ಕಿರುತೆರೆಯ ನಟ-ನಟಿಯರಿಗೆ, ಹಿನ್ನೆಲೆ ಗಾಯಕರಿಗೆ, ಸಂಗೀತಗಾರರಿಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ಬೆಳ್ಳಿತೆರೆಯಲ್ಲಿ ಸಾಕಷ್ಟು ಅವಕಾಶಗಳು ಸಿಗಲಿವೆ. ಗುರುವಾರ- ರಾಶಿ ಭವಿಷ್ಯ...

  • Home

    ಮರದ ಬಾಗಿಣ ವಿಶೇಷತೆ..!

    By

    ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು. ಸೋಮಶೇಖರ ಗುರೂಜಿB.Sc ಜ್ಯೋತಿಷ್ಯರು, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.MOB.93534 88403 ೧....

  • Home

    ಬುಧವಾರ- ರಾಶಿ ಭವಿಷ್ಯ ನವೆಂಬರ್-29,2023

    By

    ಈ ರಾಶಿಯವರಿಗೆ ಬಂಧುಗಳ ಅವಹೇಳನ ಮಾತುಗಳಿಂದ ಪ್ರಗತಿಗೆ ದಾರಿದೀಪ, ಈ ರಾಶಿಯವರಿಗೆ ಒತ್ತಡದ ಮೇರೆಗೆ ಹಣ ಸ್ವೀಕಾರ, ಈ ರಾಶಿಯವರು ಚಿನ್ನಾಭರಣ...

  • Home

    ಬುಧವಾರ- ರಾಶಿ ಭವಿಷ್ಯ ನವೆಂಬರ್-22,2023

    By

    ಈ ಪಂಚ ರಾಶಿಗಳ ತುಳಸಿ ಪೂಜೆ ನಂತರ ವಿವಾಹ ಕಾರ್ಯ ನೆರವೇರುವುದು, ರಿಯಲ್ ಎಸ್ಟೇಟ್ ಉದ್ಯಮದಾರರು ಬಹು ಮುಖ್ಯವಾದ ಪ್ರಾಜೆಕ್ಟ್ ಗೆ...

To Top