ದಾವಣಗೆರೆ: ನಾಗರಿಕ ಬಂದೂಕು ತರಬೇತಿ ಶಿಬಿರಕ್ಕೆ ಚಾಲನೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಜಿಲ್ಲಾ ಪೊಲೀಸ್ ವತಿಯಿಂದ 34 ನೇ “ನಾಗರಿಕ ಬಂದೂಕು ತರಬೇತಿ ಶಿಬಿರ” ವನ್ನು ಹಮ್ಮಿಕೊಂಡಿದ್ದು, ಡಿಎಆರ್ ಕವಾಯತು ಮೈದಾನದ ಸಮುದಾಯ ಭವನದಲ್ಲಿಂದು ಎಸ್ಪಿ ಶೇಖರ್ ಹೆಚ್ ಟಿ ಶಿಬಿರವನ್ನು ಉದ್ಘಾಟಿಸಿದರು.

ದಾವಣಗೆರೆ: ವಸತಿ ರಹಿತರಿಗೆ ಆಶ್ರಯ ಯೋಜನೆಯಡಿ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ನಾಗರಿಕ ಬಂದೂಕು ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ನಾಗರಿಕ ಬಂದೂಕು ತರಬೇತಿಯನ್ನು ನಾಗರಿಕರ ಸ್ವಯಂ ರಕ್ಷಣೆಗಾಗಿ ಹಾಗೂ ತುರ್ತು ಕರೆ ಬಂದಲ್ಲಿ ಯುದ್ದ ನಿರತ ಸೈನಿಕರಿಗೆ ನೆರವಾಗುವ ಉದ್ದೇಶದಿಂದ ಈ ತರಬೇತಿಯನ್ನು ನೀಡಿಕೊಂಡು ಬರಲಾಗುತ್ತಿದೆ. ಪೊಲೀಸ್ ಇಲಾಖೆಯ ಸಶಸ್ತ್ರ ಮೀಸಲು ಪೊಲೀಸ್ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಾಗರೀಕರಿಗೆ ಬಂದೂಕು ತರಬೇತಿಯನ್ನು ನೀಡಲಾಗುತ್ತಿದ್ದು, ಇದರಿಂದ ಪೊಲೀಸ್ ಮತ್ತು ನಾಗರೀಕರ ಮಧ್ಯ ಉತ್ತಮ ಸಂಬಂಧ ಬೆಸೆಯುವುದಕ್ಕಾಗಿ ಹಾಗೂ ಆತ್ಮ ರಕ್ಷಣೆ ಹಾಗೂ ಆಯುಧಗಳ ಕಿರು ಪರಿಚಯ, ಬಳಸುವ ವಿಧಾನ ಹಾಗೂ ಕಾನೂನು ಅರಿವು ಮೂಡಿಸಲು ಈ ತರಬೇತಿ ಸಹಕಾರಿಯಾಗಿರುತ್ತದೆ ಎಂದರು.

ದಾವಣಗೆರೆ: ಅತಿಥಿ ಶಿಕ್ಷಕ,ಉಪನ್ಯಾಸಕರ ಹುದ್ದೆಗಳಿಗೆ ಭರ್ತಿಗೆ ಅರ್ಜಿ ಆಹ್ವಾನ

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 33 ತಂಡಗಳಿಂದ 1998 ಪುರುಷರು ಹಾಗೂ 480 ಮಹಿಳಾ ಸೇರಿ ಒಟ್ಟು 2478 ಜನರಿಗೆ ತರಬೇತಿ ನೀಡಲಾಗಿರುತ್ತದೆ. ತರಬೇತಿ ಪಡೆದವರಲ್ಲಿ ವಿಶೇಷವಾಗಿ ಜನಪ್ರತಿನಿಧಿಗಳು, ರೈತರು, ವ್ಯಾಪಾರಿಗಳು, ವಿಧ್ಯಾರ್ಥಿಗಳು, ಯುವಕರು, ಸರ್ಕಾರಿ ನೌಕರರು, ಶಿಕ್ಷಕರು, ವೈದ್ಯರು, ಇಂಜಿನಿಯರ್ಗಳು, ವಕೀಲರು, ಪತ್ರಕರ್ತರು, ಮತ್ತು ಇನ್ನಿತರೇ ಆಸಕ್ತರು ತರಬೇತಿಯನ್ನು ಪಡೆದಿರುತ್ತಾರೆ.

ಪ್ರಸ್ತುತ 34 ನೇ ತಂಡದ ನಾಗರಿಕ ಬಂದೂಕು ತರಬೇತಿಯನ್ನು ದಿನಾಂಕ:08/06/2026 ರಿಂದ ದಿ:14/06/2026 ರವರೆಗೆ ನಡೆಸಲು ಉದ್ದೇಶಿಸಿದ್ದು ಈ ದಿನ ತರಬೇತಿ ಶಿಬಿರವನ್ನು ಉದ್ಘಾಟಿಸಲಾಗಿದೆ. ಈ ತರಬೇತಿಯಲ್ಲಿ 210 ಪುರುಷರು ಹಾಗೂ 70 ಮಹಿಳೆಯರು ಒಟ್ಟು 280 ಜನರು ಅರ್ಜಿ ಸಲ್ಲಿಸಿದ್ದು, ತರಬೇತಿಗೆ ಆಗಮಿತ ದಾವಣಗೆರೆ ಜಿಲ್ಲೆಯ ಎಲ್ಲ ಸಾರ್ವಜನಿಕರು ಉತ್ತಮ ತರಬೇತಿಯನ್ನು ಹೊಂದಿ ಇದರ ಸದುಪಯೋಗ ಪಡಿಸಿಕೊಳ್ಳಲು ಹಾಗೂ ಶಿಬಿರಾರ್ಥಿಗಳು ಉತ್ತಮವಾಗಿ, ಶಿಸ್ತಿನಿಂದ ಬಂದೂಕು ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಬಂದೂಕುಗಳ ಬಗ್ಗೆ, ಅವುಗಳ ನಿರ್ವಹಣೆ, ಬಳಕೆ ಬಗ್ಗೆ ಇರುವ ಕಾನೂನುಗಳ ಬಗ್ಗೆ ತಿಳಿಯಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಎಸ್ಪಿ ಪರಮೇಶ್ವರ ಹೆಗಡೆ, ಡಿಎಆರ್ ಡಿವೈಎಸ್ಪಿ ಜಿ ಎಂ ತಿಪ್ಪೇಸ್ವಾಮಿ, ಪೊಲೀಸ್ ನಿರೀಕ್ಷಕರಾದ ಕಿರಣ್ ಕುಮಾರ್, ಶ್ ಪ್ರಶಾಂತ್, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *