Connect with us

Dvgsuddi Kannada | online news portal | Kannada news online

ದಾವಣಗೆರೆ: ಫೆ.26 ರಂದು ಎವಿಕೆ ಕಾಲೇಜು ರಸ್ತೆಯಲ್ಲಿ ಚಿತ್ರಸಂತೆ

ದಾವಣಗೆರೆ

ದಾವಣಗೆರೆ: ಫೆ.26 ರಂದು ಎವಿಕೆ ಕಾಲೇಜು ರಸ್ತೆಯಲ್ಲಿ ಚಿತ್ರಸಂತೆ

ದಾವಣಗೆರೆ: ಫೆ.26ರಂದು ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ಚಿತ್ರಕಲಾ ಪರಿಷತ್ ನಿಂದ 2ನೇ ವರ್ಷದ ಚಿತ್ರಸಂತೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮೇಯರ್ , ಚಿತ್ರಸಂತೆ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಜಿ‌.ಅಜಯಕುಮಾರ್ ತಿಳಿಸಿದರು.

ಈಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಅಂದು ಬೆಳಗ್ಗೆ 8-00 ರಿಂದ ಸಂಜೆ 7-00 ರವರೆಗೆ“ಚಿತ್ರ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಎವಿಕೆ ರಸ್ತೆಯಲ್ಲಿನ ಶ್ರೀರಾಮ ದೇವಸ್ಥಾನದಿಂದ ಬಿ.ಎಸ್ ಚನ್ನಬಸಪ್ಪ ಶಾಪ್ ವರೆಗೂ ಎರಡು ಮಹಾದ್ವಾರ ನಿರ್ಮಾಣ ಮಾಡಲಾಗಿದೆ. ನಾಳೆ ಬೆಳಗ್ಗೆ ೧೦ ಕ್ಕೆ ಚಿತ್ರಸಂತೆಯ ಹಂದರಗಂಬದ ಪೂಜೆ ನಡೆಯಲಿದೆ. ಫೆ.26 ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಸಂಸದ ಜಿ.ಎಂ ಸಿದ್ದೇಶ್ವರ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ,ಎಸ್. ವಿ. ರಾಮಚಂದ್ರ ಮತ್ತಿತರರು ಆಗಮಿಸಲಿದ್ದಾರೆ. ಮಾಜಿ ಮೇಯರ್ ಬಿ.ಜಿ ಅಜಯಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಚಿತ್ರ ಸಂತೆಗೆ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು,ಆಂಧ್ರಪ್ರದೇಶ,ಓರಿಸ್ಸಾ,ಜಾರ್ಖಂಡ್,ರಾಜಸ್ಥಾನ ಸಹಿತ ಎಲ್ಲೆಡೆಯಿಂದ ಒಟ್ಟು ೧೩೦ ಕಲಾವಿದರು ಭಾಗವಹಿಸಲಿದ್ದಾರೆ ಎಂದರು.

ಹೊರಗಿನಿಂದ ಬರುವ ಕಲಾವಿದರಿಗೆ ವಸತಿ ವ್ಯವಸ್ಥೆ, ಮಳಿಗೆ ಹಾಕುವ ಎಲ್ಲಾ ಕಲಾವಿದರಿಗೆ ದಾವಣಗೆರೆ ಬೆಣ್ಣೆದೋಸೆ ,ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಚಿತ್ರಸಂತೆಯಲ್ಲಿ ಪ್ರತಿಭಾವಂತ ಕಲಾವಿದರಿಗೆ, ಉತ್ತಮ ಮಳಿಗೆ ಗುರುತಿಸಿ 9 ಬಹುಮಾನ ನೀಡಲಾಗುತ್ತಿದೆ. ಚಿತ್ರಸಂತೆಯ ತೀರ್ಪುಗಾರರಾಗಿ ಹಿರಿಯ ವ್ಯಂಗ್ಯ ಚಿತ್ರಕಲಾವಿದರಾದ ಎಚ್.ಬಿ ಮಂಜುನಾಥ್ ನೇತೃತ್ವದಲ್ಲಿ ಹಿರಿಯ ಪತ್ರಕರ್ತ ಸಿದ್ದಯ್ಯ ಹಿರೇಮಠ, ಚಿತ್ರಕಲೆ ಮಾರುಕಟ್ಟೆ ತಜ್ಞ ರಷ್ಮಿ ಸುತಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮಧ್ಯಾಹ್ನ 3 ರಿಂದ 4 ಗಂಟೆಯೊಳಗೆ ಪ್ರಶಸ್ತಿ ವಿತರಣೆ ಮಾಡಲಾಗುವುದು. ಸಂಜೆ 05 ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್,ದಾವಣಗೆರೆ ವಿವಿ ಕುಲಪತಿ ಬಿ.ಡಿ ಕುಂಬಾರ,ಜಿಲ್ಲಾಧಿಕಾರಿ ಶಿವಾನಂದ ಕಾಪಶಿ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಜಿ.ಪಂ ಸಿಇಒ ಡಾ.ಎ.ಚೆನ್ನಪ್ಪ,ಬಿಜೆಪಿ ರೈತ ಮೋರ್ಚಾ ರಾಜ್ಯ ಸಂಚಾಲಕ ಸತೀಶ್ ಕೊಳೆನಹಳ್ಳಿ, ಸೈಯದ್ ಸೈಫುಲ್ಲಾ, ತೇಜಸ್ವಿ ಪಟೇಲ್ ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಡಿ.ಶೇಷಾಚಲ,ರವಿ ಹುದ್ದಾರ್,ಸಂತೋಷ್, ಮಯೂರ್, ಗಣೇಶ್ ಆಚಾರ್, ಅಶೋಕ್ ಗೋಪನಾಳ್, ಶಿವಕುಮಾರ್, ಚನ್ನಬಸವನ ಗೌಡ್ರು, ಅನಿಲ್, ದಿವಾಕರ್, ರವಿ ಇದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top