Connect with us

Dvgsuddi Kannada | online news portal | Kannada news online

ದಾವಣಗೆರೆ: ಅಟ್ಟಾಡಿಸಿ ರೈತನನ್ನು ಕೊಂದ ದೇವರ‌ ಹೆಸರಲ್ಲಿ ಬಿಟ್ಟಿದ್ದ ಕೋಣ..!

ದಾವಣಗೆರೆ

ದಾವಣಗೆರೆ: ಅಟ್ಟಾಡಿಸಿ ರೈತನನ್ನು ಕೊಂದ ದೇವರ‌ ಹೆಸರಲ್ಲಿ ಬಿಟ್ಟಿದ್ದ ಕೋಣ..!

ದಾವಣಗೆರೆ: ದೇವರ ಹೆಸರಲ್ಲಿ ಬಿಟ್ಟಿದ್ದ ಕೋಣವೊಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಅಟ್ಟಾಡಿಸಿ ಇರಿದು ಕೊಂದು ಹಾಕಿದ ಭೀಕರ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಎನ್ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಲಿಂಗದಹಳ್ಳಿ ಗ್ರಾಮದ ಉಡಸಲಾಂಭಾ ದೇವರ ಕೋಣದ ಕ್ರೌರ್ಯಕ್ಕೆ ಎನ್ ಬಸವನಹಳ್ಳಿಯ ರೈತ ಜಯಣ್ಣ(48) ಬಲಿಯಾಗಿದ್ದಾನೆ. ಜಮೀನಿನಲ್ಲಿ ಕೆಲಸ ಮಾಡುವಾಗ ಏಕಾಏಕಿ ದಾಳಿ ನಡೆಸಿದ ದೇವರ ಕೋಣ ಅಟ್ಟಾಡಿಸಿ ಇರಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಜಯಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪದೇ ಪದೇ ದಾಳಿ ನಡೆಸುತ್ತಿದ್ದ ದೇವರ ಕೋಣದ ಬಗ್ಗೆ ಲಿಂಗದಹಳ್ಳಿ ಗ್ರಾಮಸ್ಥರು ದೇವಸ್ಥಾನ ಸೇರಿದಂತೆ ಹಲವರಿಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯ ವಹಿಸಲಾಗಿತ್ತು. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top