ದಾವಣಗೆರೆ: ದೊಡ್ಡಬಾತಿ ಹರಿಹರ-ದಾವಣಗೆರೆ ರಸ್ತೆಯ ಕೆಎಂಎಫ್ ಡೇರಿ ಬಳಿ ಬೈಕಿಗೆ ಲಾರಿ ಡಿಕ್ಕ ಹೊಡೆದು ದಾವಣಗೆರೆ ಸಾಯಿಬಾಬ ಧರ್ಮದರ್ಶಿ ಚಂದ್ರಶೇಖರ್ (74) ಸಾವನ್ನಪ್ಪಿದ್ದಾರೆ.
ಚಂದ್ರಶೇಖರ್ ಅವರು ಬಿಎಸ್ ಎನ್ ಎಲ್ ನಿವೃತ್ತ ಇಂಜಿನಿಯರ್ ಆಗಿದ್ದರು. ದಾವಣಗೆರೆ ಸಾಯಿಬಾಬ ಧರ್ಮದರ್ಶಿಯಾಗಿದ್ದರು. ಇವರು ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯ ನಿವಾಸಿಯಾಗಿದ್ದಾರೆ. ದೊಡ್ಡ ಬಾತಿ ಬಳಿ ಬೈಕಿನಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.ಇದರ ಪರಿಣಾಮ ಚಂದ್ರಶೇಖರ್ ಮೃತಪಟ್ಟಿದ್ದಾರೆ. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



